ತುಮಕೂರು:- ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಿಂದ ಇಡೀ ದೇಶವೇ ಮರುಗುತ್ತಿದ್ದರೆ, ಇಲ್ಲಿನ ಇನ್ಸ್ಪೆಕ್ಟರ್ ಮಾತ್ರ ಸಂಭ್ರಮಾಚರಣೆಯಲ್ಲಿ ಮುಳುಗಿ ಹೋಗಿದ್ದಾರೆ.
ಕಾಶ್ಮೀರದಲ್ಲಿ ಉಗ್ರರ ದಾಳಿ: ಮೃತ ಕನ್ನಡಿಗರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ತಲಾ 10 ಲಕ್ಷ ಪರಿಹಾರ ಘೋಷಣೆ!
ಹೌದು, ಜಮ್ಮು ಕಾಶ್ಮೀರದಲ್ಲಿನ ಉಗ್ರರ ದಾಳಿಗೆ ಒಂದೆಡೆ ಇಡೀ ದೇಶವೇ ಮರುಕ ವ್ಯಕ್ತಪಡಿಸಿದೆ. ತಮ್ಮ ಕುಟುಂಬಸ್ಥರನ್ನು ಕಳೆದುಕೊಂಡು ಎಷ್ಟೋ ಮೃತರ ಕುಟುಂಬಗಳು ದುಖಃದಲ್ಲಿ ಮುಳುಗಿದೆ. ಒಂದೆಡೆ ದೇಶವೇ ಶೋಕಾಚರಣೆಯಲ್ಲಿ ಮುಳುಗಿದರೆ, ಅದೆಲ್ಲ ಮರೆತ ಇನ್ಸ್ ಪೆಕ್ಟರ್ ಮಾತ್ರ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಎಸ್, ತುಮಕೂರು ಸಿಪಿಐ ಬಿ.ಎಸ್.ದಿನೇಶ್ ಕುಮಾರ್ ನಿಂದ ಸಂಭ್ರಮಾಚರಣೆ ನಡೆದಿದ್ದು, ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚೆಗೆ ತುಮಕೂರಿನಿಂದ ಕುಶಾಲನಗರಕ್ಕೆ ದಿನೇಶ್ ಕುಮಾರ್ ವರ್ಗಾವಣೆ ಆಗಿದ್ದರು. ಹೀಗಾಗಿ ಅವರಿಗೆ ಕ್ರೇನ್ ನಲ್ಲಿ ಹಾರ ಹಾಕಿ ಬೀಳ್ಕೊಡುಗೆ ಕೊಡಲಾಗಿದೆ. ತೆರದ ಜೀಪ್ ನಲ್ಲಿ ರ್ಯಾಲಿ ಮಾಡಿ ಶೋ ಮಾಡಲಾಗಿದ್ದು, ಹಾರದ ಒಳಗೆ ಹುಲಿ ಫೋಟೊ ಹಾಕಿ ಇನ್ಸ್ ಪೆಕ್ಟರ್ ಶೋ ಕೊಟ್ಟಿದ್ದಾರೆ. ಗೃಹ ಮಂತ್ರಿ ಡಾ.ಜಿ ಪರಮೇಶ್ವರ್ ತವರಿನಲ್ಲೇ ನಡೆದ ಈ ಸಂಭ್ರಮಾಚರಣೆಯಲ್ಲಿ ಇನ್ಸ್ ಪೆಕ್ಟರ್ ರೋಡ್ ಶೋ ಮಾಡಿದ್ದು, ಪೊಲೀಸರ ಈ ನಡೆಗೆ ಸಾರ್ವಜನಿಕರು ಅಸಮಾಧಾನ ಹೊರ ಹಾಕಿದ್ದಾರೆ.