ಹುಬ್ಬಳ್ಳಿ: ಮೆದುಳು, ಬೆನ್ನುಹುರಿ ಹಾಗೂ ನರರೋಗಕ್ಕೆ ಸಂಬಂಧಿಸಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹುಬ್ಬಳ್ಳಿಯ ಶ್ರೀ ಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರದಲ್ಲಿ ಇದೀಗ ಸುಧಾರಿತ ತಂತ್ರಜ್ಞಾನದ “ನ್ಯೂರೋ ನೇವಿಗೇಶನ್” ಎಂಬ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಯಂತ್ರವನ್ನು ಅಳವಡಿಸಿದ್ದು, ಮೆದುಳು, ನರರೋಗ ಮತ್ತು ಬೆನ್ನುಹುರಿಗೆ ಸಂಬಂಧಿಸಿದ ಅತ್ಯಂತ ಸಂಕೀರ್ಣ ಹಾಗೂ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಸುಲಭವಾಗಿ ಮತ್ತು ಅತ್ಯಂತ ನಿಖರವಾಗಿ ಮಾಡಬಹುದಾಗಿದೆ.
ದೇಹಕ್ಕೆ ಒಳ್ಳೆಯದು ಅಂತ ಹೆಚ್ಚು ಖರ್ಜೂರ ತಿನ್ನೋ ಮುನ್ನ ಹುಷಾರ್! ಈ ಭಾಗಕ್ಕೆ ಹಾನಿಕಾರಕ!
ಅತ್ಯಾಧುನಿಕ ಯಂತ್ರದ ಕುರಿತು ಮಾಹಿತಿ ನೀಡಿರುವ ಆಸ್ಪತ್ರೆ ಚೇರ್ಮನ್ ಡಾ. ಕ್ರಾಂತಿಕಿರಣ ಅವರು, ನರರೋಗ ಶಸ್ತ್ರಚಿಕಿತ್ಸೆಯಲ್ಲಿ ನ್ಯೂರೋ ನೇವಿಗೇಷನ್ ಸಿಸ್ಟಂ ಎನ್ನುವುದು ಕ್ರಾಂತಿಕಾರಕ ಅವಿಷ್ಕಾರಿಯಾಗಿದೆ. ಕಂಪ್ಯೂಟರ್ ಆಧಾರಿತ ಈ ನವೀನ ತಂತ್ರಜ್ಞಾನವು ನರರೋಗ ಶಸ್ತ್ರಚಿಕಿತ್ಸಕರಿಗೆ ರೋಗಿಯ ಸಮಸ್ಯೆಗಳ ಕುರಿತು ಸಿ.ಟಿ ಮತ್ತು ಎಂ.ಆರ್.ಐ. ಸ್ಕ್ಯಾನ್ ರೀತಿಯಲ್ಲಿ ಅತ್ಯಂತ ನೈಜತೆ ಮತ್ತು ಖಚಿತತೆಯ ಚಿತ್ರಗಳನ್ನು 3ಡಿ ಆಯಾವiದಲ್ಲಿ ಒದಗಿಸುವ ಮೂಲಕ ಹೆಚ್ಚು ಸಂಕೀರ್ಣ ಮತ್ತು ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸಾ ಪ್ರಕ್ರಿಯೆಗಳನ್ನು ಸುಗಮಗೊಳಿಸುವುದಲ್ಲದೇ,
ಶಸ್ತ್ರಚಿಕಿತ್ಸಾ ಅವಧಿಯನ್ನು ಕಡಿಮೆಗೊಳಿಸುತ್ತದೆ ಮತ್ತು ದೀರ್ಘಕಾಲದ ಅರವಳಿಕೆಗೆ ಸಂಬಂಧಿಸಿದ ಅಪಾಯಗಳನ್ನು ತಗ್ಗಿಸುತ್ತದೆ. ಅಲ್ಲದೇ, ಶಸ್ತ್ರಚಿಕಿತ್ಸೆಗೊಳಪಟ್ಟ ದೇಹದ ಯಾವುದೇ ಅಂಗದ ಸುತ್ತಮುತ್ತಲಿನ ಆರೋಗ್ಯಕರ ಅಂಗಾಂಶಗಳಿಗೆ ಹಾನಿಯಾಗಬಹುದಾದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ ಎಂದು ತಿಳಿಸಿದರು.
ಜಾಗತಿಕವಾಗಿ ನರಗಳಿಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚುತ್ತಿರುವುದರಿಂದ ಮೆದುಳಿನ ಗಡ್ಡೆ (ಬ್ರೇನ್ ಟ್ಯೂಮರ್), ಪಾಶ್ರ್ವವಾಯು (ಸ್ಟ್ರೋಕ್), ಸ್ಕಲ್ ಬೇಸ್ ಸರ್ಜರಿ, ನ್ಯೂರೋ ಎಂಡೋಸ್ಕೋಪಿ, ಫಂಕ್ಶನಲ್ ನ್ಯೂರೋ ಸರ್ಜರಿ, ವ್ಯಾಸ್ಕುಲರ್ ಸರ್ಜರಿ ಮತ್ತು ಬೆನ್ನುಹುರಿಗೆ ಸಂಬಂಧಿಸಿದ ಕಾಯಿಲೆಗಳಲ್ಲಿ ರೋಗ ನಿರ್ಣಯಗಳನ್ನು ನಿಖರವಾಗಿ ಪತ್ತೆ ಹಚ್ಚಿ ಸೂಕ್ತ ಶಸ್ತ್ರಚಿಕಿತ್ಸೆ ಕೈಗೊಳ್ಳಲು ನರ ಸಂಚಾರ ವ್ಯವಸ್ಥೆ (ನ್ಯೂರೋ ನೇವಿಗೇಟ್ ಸಿಸ್ಟಂ) ಅತ್ಯಂತ ಉಪಯುಕ್ತ ಸಾಧನವಾಗಿದೆ.
ಈ ತಂತ್ರಜ್ಞಾನವು ರೋಗ ನಿರ್ಣಯದ ನಿಖರತೆಯನ್ನು ಸುಧಾರಿಸುವ ಜೊತೆಗೆ ಶಸ್ತ್ರಚಿಕಿತ್ಸೆಯ ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಅಲ್ಲದೇ, ಇದು ರೋಗಿಗಳಿಗೆ ತ್ವರಿತವಾಗಿ ಚೇತರಿಸಿಕೊಳ್ಳಲು ಮತ್ತು ಆಸ್ಪತ್ರೆಯಿಂದ ಶೀಘ್ರ ಡಿಸ್ಚಾರ್ಜ್ ಹೊಂದಿ ಎಂದಿನಂತೆ ಕಾರ್ಯನಿರ್ವಹಿಸಲು ರೋಗಿಗಳಿಗೆ ಅನುವು ಮಾಡಿಕೊಡುತ್ತದೆ ಎಂದು ಡಾ. ಕ್ರಾಂತಿಕಿರಣ ಮಾಹಿತಿ ನೀಡಿದರು.