ಬಾಗಲಕೋಟೆ : ದೇವರ ಮೇಲೆ ಅನನ್ಯ ಭಕ್ತಿ ಇದ್ದರೆ ಮಾತ್ರ ಕಷ್ಟ ಕಾರ್ಪಣ್ಯದಿಂದ ಮುಕ್ತಿ ದೊರೆಯುತ್ತದೆ ಎಂದು ಬಾಲಚಂದ್ರ ಉಮದಿ ಅಣ್ಣನವರು ಹೇಳಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಮಲ್ಲಿಕಾರ್ಜುನ್ ಸಮುದಾಯ ಭವನದಲ್ಲಿ ಅದ್ದೂರಿಯಾಗಿ ಐದೇಶಿ ಕಾರ್ಯಕ್ರಮ ನಡೆಯಿತು.
ಬಂದು ಬಾಂಧವರು ಕೈ ಬಿಟ್ಟರು ದೇವರು ಮತ್ತು ಗುರು ಎಂದಿಗೂ ಕೈ ಬಿಡಲಾರರು ಕಳೆದ ೫ ದಿನಗಳಿಂದ ನಿರಂತರವಾಗಿ ಶ್ರೀ ಮಲ್ಲಿಕಾರ್ಜುನ ದೇವರಿಗೆ ಪೂಜೆ ಪುನಸ್ಕಾರ ಮಾಡಿ ಲಕ್ಷಾಂತರ ಭಕ್ತರಿಗೆ ಶ್ರೀ ಮಲ್ಲಿಕಾರ್ಜುನ ದೇವರು ಆಶೀರ್ವಾದ ಮಾಡಿದರು. ಧರ್ಮ ಮತ್ತು ಭಕ್ತಿ ಮಾರ್ಗದಲ್ಲಿ ನಡೆದರೆ ಜಯ ನಿಶ್ಚಿತ ದೇವರಲ್ಲಿ ಶ್ರದ್ದಾಪೂರ್ವ ಭಕ್ತಿ ಇರಬೇಕು. ಸ್ವಚ್ಛತೆ, ಶಿಸ್ತು, ಆರೋಗ್ಯ ಪೂರ್ಣ ಜೀವನ ಶ್ರೇಷ್ಟವಾದದ್ದು ಎಂದರು. ಆಧ್ಯಾತ್ಮಕ್ಕೆ ಅಪಾರ ಶಕ್ತಿ ಇದೆ ಸದಾ ನಾವೂ ದೇವರ ನಾಮ ಸ್ಮರಣೆ ಮಾಡುವ ಮೂಲಕ ಜೀವನವನ್ನು ಪಾವನ ಮಾಡಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಮಾಹಾದೇವ ಮಠಪತಿ, ನೀಲಕಂಠ ಮುತ್ತೂರು ಸಂಜಯ ತೆಗ್ಗಿ, ಪ್ರಭು ಉಮದಿ ಮಲ್ಲೇಶ ಕುಚನೂರ, ಈಶ್ವರ ನಾಗರಾಳ.ಬಸವರಾಜ ದಲಾಲ, ಶಿವಾನಂದ ಹೊಸಮನಿ.ಡಾ.ಸಂಗಮೇಶ ಹತ್ತಪಕಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.