ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಪಡೆಯನ್ನು 6 ರನ್ ಗಳಿಂದ ಬಗ್ಗುಬಡಿದ ರಜತ್ ಪಾಟೀದಾರ್ ಬಳಗ ಈ ಬಾರಿ ಕಪ್ ನಮ್ದು ಎಂದು ಹೆಮ್ಮೆಯಿಂದ ಬೀಗಿದೆ.
RCB Vs PBKS: ಕಾರಲ್ಲೇ ಫೈನಲ್ ಮ್ಯಾಚ್ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ!
ಎಸ್, ಟಾಟಾ ಐಪಿಎಲ್ 2025ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆದ್ದು ಬೀಗಿದೆ. ಈ ಮೂಲಕ 18 ವರ್ಷಗಳ ಕಾಯುವಿಕೆಗೆ ಅಂತ್ಯ ಸಿಕ್ಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ, ಕೊಹ್ಲಿ ಅವರ ಅಮೂಲ್ಯ 43 ರನ್ಗಳ ಕಾಣಿಕೆಯೊಂದಿಗೆ 190 ರನ್ಗಳಿಸಿತ್ತು. ಆ ಮೂಲಕ ಪಂಜಾಬ್ ಕಿಂಗ್ಸ್ ಗೆಲುವಿಗೆ 191 ರನ್ಗಳು ಬೇಕಾಗಿತ್ತು. ಆದರೆ ಆರ್ಸಿಬಿ ಬೌಲರ್ಗಳ ಮುಂದೆ ಪಂಜಾಬ್ ಕಿಂಗ್ಸ್ ಬ್ಯಾಟರ್ಗಳ ಆಟ ನಡೆಯಲಿಲ್ಲ. ಕೊನೆಯದಾಗಿ 20 ಓವರ್ಗೆ 7 ವಿಕೆಟ್ ಕಳೆದುಕೊಂಡು 184 ರನ್ಗಳಿಸಿ ಶ್ರೇಯಸ್ ಅಯ್ಯರ್ ಪಡೆ ಸೋಲಿಗೆ ಶರಣಾಯ್ತು. ಕಿಂಗ್ ವಿರಾಟ್ ಕೊಹ್ಲಿ ಬಳಗ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿತು.
ಪಂಜಾಬ್ ಕಿಂಗ್ಸ್ ಪಡೆಯನ್ನು 6 ರನ್ ಗಳಿಂದ ಬಗ್ಗುಬಡಿದ ರಜತ್ ಪಾಟೀದಾರ್ ಬಳಗ ಈ ಬಾರಿ ಕಪ್ ನಮ್ದು ಎಂದು ಹೆಮ್ಮೆಯಿಂದ ಬೀಗಿದೆ. ನಗರದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ರೋಮಾಂಚಕ ಪಂದ್ಯದಲ್ಲಿ ಗೆಲ್ಲಲು 192 ರನ್ ಗಳ ಸವಾಲಿನ ಗುರಿ ಪಡೆದ ಶ್ರೇಯಸ್ ಅಯ್ಯರ್ ಪಡೆ ನಿಗದಿತ ಓವರ್ ಗಳು ಮುಗಿದಾಗ 7 ವಿಕೆಟ್ ಕಳೆದುಕೊಂಡು 184 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಪಂಜಾಬ್ ಕಿಂಗ್ಸ್ ಎಚ್ಚರಿಕೆಯಿಂದ ಇನ್ನಿಂಗ್ಸ್ ಆರಂಭಿಸಿದರು. ಮೊದಲ ವಿಕೆಟ್ ಗೆ 5 ಓವರ್ ಗಳಲ್ಲಿ 43 ರನ್ ಜೊತೆಯಾಟವಾಡಿದರು. ಈ ಹಂತದಲ್ಲಿ 19 ಎಸೆತದಲ್ಲಿ 24 ರನ್ ಗಳಿಸಿದ್ದ ಪ್ರಿಯಾಂಶ್ ಆರ್ಯ ಅವರನ್ನು ಜೋಶ್ ಹೇಜಲ್ ವುಡ್ ಅವರು ಸಾಲ್ಟ್ ಅವರಿಗೆ ಕ್ಯಾಚ್ ಕೊಡಿಸಿದರು. ಆದರೂ ಪಂಜಾಬ್ ಆರ್ಭಟ ಮಾತ್ರ ಕಡಿಮೆಯಾಗಿರಲಿಲ್ಲ.
ಪ್ರಭಸಿಮ್ರಾನ್ ಸಿಂಗ್ ಅವರು ಜೋಶ್ ಇಂಗ್ಲಿಸ್ ಅವರ ಜೊತೆ ಸೇರಿಕೊಂಡು ಇನ್ನಿಂಗ್ಸ್ ಬೆಳೆಸುವ ಪ್ರಯತ್ನ ಮಾಡಿದರು. ಆದರೆ ಈ ಜೋಡಿಯನ್ನು ಮುರಿದ ಕೃನಾಲ್ ಪಾಂಡ್ಯ ಆರ್ ಸಿಬಿಗೆ ಅಗತ್ಯವಾಗಿ ಬೇಕಿದ್ದ ಬ್ರೇಕ್ ತಂದು ಕೊಡುತ್ತಾರೆ. 22 ಎಸೆತದಲ್ಲಿ 26 ರನ್ ಗಳಿಸಿದ್ದ ಪ್ರಭಸಿಮ್ರಾನ್ ಅವರನ್ನು ಕೃನಾಲ್ ಪಾಂಡ್ಯ ಅವರು ಭುವನೇಶ್ವರ್ ಕುಮಾರ್ ಅವರಿಗೆ ಕ್ಯಾಚಿತ್ತರು. ಮುಂದಿನ ಓವರ್ ನಲ್ಲೇ ಒಂದು ರನ್ ಗಳಿಸಿದ್ದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಕೀಪರ್ ಜಿತೇಶ್ ಶರ್ಮಾ ಅವರಿಗೆ ಕ್ಯಾಚ್ ಕೊಡಿಸುವಲ್ಲಿ ರೊಮಾರಿಯೋ ಶೆಫರ್ಡ್ ಯಶಸ್ವಿಯಾಗಿದರು
ವಿಕೆಟ್ ಗಳು ಒಂದೆಡೆಯಿಂದ ಬೀಳುತ್ತಿದ್ದರೂ ಜೋಶ್ ಇಂಗ್ಲಿಸ್ ಅವರು ಮಾತ್ರ ತಮ್ಮ ಆಟ ಮುಂದುವರಿಸಿದ್ದರು. 23 ಎಸೆತಗಳಿಂದ 39 ರನ್ ಗಳಿಸಿದ್ದ ಅವರನ್ನು ಕೃನಾಲ್ ಪಾಂಡ್ಯ ಅವರೇ ಬಲೆಗೆ ಬೀಳಿಸಿದರು. ಅಲ್ಲಿಂದ ಬಳಿಕ ಪಂಜಾಬ್ ಕಿಂಗ್ಸ್ ತಂಡವನ್ನು ಒತ್ತಡಕ್ಕೆ ಸಿಲುಕಿಸುವಲ್ಲಿ ಯಶಸ್ವಿಯಾದ ಆರ್ ಸಿಬಿ ಬೌಲರ್ ಗಳು ನೇಹಾಲ್ ವಧೇರಾ(15), ಶಶಾಂಕ್ ಸಿಂಗ್ (26) ಅವರ ವಿಕೆಟ್ ಅನ್ನೂ ಸರಿಯಾದ ಸಮಯದಲ್ಲಿ ಕೀಳುವ ಮೂಲಕ ಗೆಲುವಿಗೆ ಸನಿಹವಾದರು. ಬಾಲಂಗೋಚಿಗಳಿಂದ ಯಾವ ರೀತಿಯ ಮ್ಯಾಜಿಕ್ ಸಹ ನಡೆಯಲಿಲ್ಲ.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಆರ್ ಸಿಬಿಗೆ ಫಿಲ್ ಸಾಲ್ಟ್ ಅವರು ಭರ್ಜರಿ ಆರಂಭ ಒದಗಿಸಿದರು. ಅರ್ಶದೀಪ್ ಸಿಂಗ್ ಎಸೆದ ಮೊದಲ ಓವರ್ ನಲ್ಲೇ ಒಂದು ಬೌಂಡರಿ ಮತ್ತು ಮತ್ತೊಂದು ಸಿಕ್ಸರ್ ಸಿಡಿಸಿದ ಸಾಲ್ಟ್ 13 ರನ್ ಬಾರಿಸಿದರು. ಆದರೆ ಈ ಆರ್ಭಟ ಹೆಚ್ಚು ಹೊತ್ತು ಇರಲಿಲ್ಲ. 2ನೇ ಓವರ್ ನ 4ನೇ ಎಸೆತದಲ್ಲೇ ಫಿಲ್ ಸಾಲ್ಟ್ ಅವರ ವಿಕೆಟ್ ಗಳಿಸುವಲ್ಲಿ ಜಾಮಿಸನ್ ಯಶಸ್ವಿಯಾದರು.
ಇದಾದ ಬಳಿಕ ವಿರಾಟ್ ಕೊಹ್ಲಿ ಅವರನ್ನು ಸೇರಿಕೊಂಡ ಮಾಯಾಂಕ್ ಅಗರ್ವಾಲ್ ಅವರು ಪವರ್ ಪ್ಲೇಯನ್ನು ಬಹಳ ಜಾಣ್ಮೆಯಿಂದ ನಿಭಾಯಿಸಿದರು. ಹೀಗಾಗಿ 6 ಓವರ್ ಗಳು ಮುಗಿದಾಗ ಆರ್ ಸಿಬಿಗೆ 55 ರನ್ ಗಳು ಹರಿದು ಬಂದಿದ್ದವು. ಈ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಮಾಯಾಂಕ್ ಅಗರ್ವಾಲ್ ಅವರನ್ನು ದಿಕ್ಕು ತಪ್ಪಿಸಿದ್ದು ಯುಜುವೇಂದ್ರ ಚಹಲ್. 18 ಎಸೆತದಲ್ಲಿ 24 ರನ್ ಗಳಿಸಿದ್ದ ಮಾಯಾಂಕ್ ಅವರು ಲೆಗ್ ಸ್ಟಂಪ್ ಮೇಲಿದ್ದ ಶಾರ್ಟ್ ಪಿಚ್ ಬಾಲನ್ನು ತಪ್ಪಾಗಿ ಆಡಿ ಅರ್ಶದೀಪ್ ಗೆ ಕ್ಯಾಚಿತ್ತು ಔಟಾದರು.
ಇಲ್ಲಿಂದ ಬಳಿಕ ವಿರಾಟ್ ಕೊಹ್ಲಿ ಮತ್ತು ರಜತ್ ಪಾಟೀದಾರ್ ಅವರು ಭರ್ಜರಿ ಹೊಡೆತಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಜೊತೆಗೆ ಉತ್ತಮ ಸ್ಕೋರ್ ಬೋರ್ಡನ್ನು ಶತಕದತ್ತ ಕೊಂಡೊಯ್ಯುತ್ತಿದ್ದರು. ಈ ಹಂತದಲ್ಲಿ 16 ಎಸೆತಗಳಿಂದ 26 ರನ್ ಗಳಿಸಿದ್ದ ಆರ್ ಸಿಬಿ ನಾಯಕನನ್ನು ಜಾಮಿಸನ್ ಅವರು ಎಲ್ ಬಿಡಬ್ಲ್ಯೂ ಬಲೆಗೆ ಕೆಡವಿದರು.
ಒಂದೆಡೆ ವಿಕೆಟ್ ಗಳು ಬೀಳುತ್ತಿದ್ದರೂ ಮತ್ತೊಂದೆಡೆ ವಿರಾಟ್ ಕೊಹ್ಲಿ ಅವರು ತಾಳ್ಮೆಯಿಂದ ಆಟವಾಡುತ್ತಿದ್ದರು. ಆದರೆ 15ನೇ ಓವರ್ ನಲ್ಲಿ ತಂಡದ ಮೊತ್ತ 131 ಆಗಿದ್ದಾಗ ಅಜ್ಮತುಲ್ಲಾ ಒಮರಾಜೈ ಅವರು ವಿರಾಟ್ ಕೊಹ್ಲಿ ಅವರನ್ನು ಪೆವಿಲಿಯನ್ ಗೆ ಅಟ್ಟುವಲ್ಲಿ ಯಶಸ್ವಿಯಾಗುತ್ತಾರೆ. ಕೊಹ್ಲಿ ಅವರು 39 ಎಸೆತಗಳಿಂದ 3 ಬೌಂಡರಿಗಳಿದ್ದ 45 ರನ್ ಗಳಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ, ಕೊಹ್ಲಿ ಅವರ ಅಮೂಲ್ಯ 43 ರನ್ಗಳ ಕಾಣಿಕೆಯೊಂದಿಗೆ 190 ರನ್ಗಳಿಸಿತ್ತು. ಆ ಮೂಲಕ ಪಂಜಾಬ್ ಕಿಂಗ್ಸ್ ಗೆಲುವಿಗೆ 191 ರನ್ಗಳು ಬೇಕಾಗಿತ್ತು. ಆದರೆ ಆರ್ಸಿಬಿ ಬೌಲರ್ಗಳ ಮುಂದೆ ಪಂಜಾಬ್ ಕಿಂಗ್ಸ್ ಬ್ಯಾಟರ್ಗಳ ಆಟ ನಡೆಯಲಿಲ್ಲ. ಕೊನೆಯದಾಗಿ 20 ಓವರ್ಗೆ 7 ವಿಕೆಟ್ ಕಳೆದುಕೊಂಡು 184 ರನ್ಗಳಿಸಿ ಶ್ರೇಯಸ್ ಅಯ್ಯರ್ ಪಡೆ ಸೋಲಿಗೆ ಶರಣಾಯ್ತು. ಕಿಂಗ್ ವಿರಾಟ್ ಕೊಹ್ಲಿ ಬಳಗ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿತು.