ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಕೊನೆಯ 17 ಪಂದ್ಯಗಳಿಗೆ ಇಂದು ಚಾಲನೆ ಸಿಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ 58ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
ಇಂದು RCB ಮ್ಯಾಚ್: ವಿರಾಟ್ ಗೆ ವಿಶೇಷ ಗೌರವ ಸಲ್ಲಿಸಲು ಮುಂದಾದ ಫ್ಯಾನ್ಸ್.. ಇದು ಕೊಹ್ಲಿಗೆ ಬಿಗ್ ಗಿಫ್ಟ್!
ಚಿನ್ನಸ್ವಾಮಿಯಲ್ಲಿ ಹಲವು ಬಾರಿ 200ಕ್ಕೂ ಹೆಚ್ಚು ರನ್ ದಾಖಲಾಗಿದೆ. ಬ್ಯಾಟರ್ಗಳಿಗೆ ಹೇಳಿ ಮಾಡಿಸಿದ ಪಿಚ್ ಇದಾಗಿದೆ. ಜೊತೆಗೆ ಸ್ಪಿನ್ನರ್ ಸ್ನೇಹಿಯೂ ಆಗಿದೆ. ಮೊದಲು ಬ್ಯಾಟ್ ಮಾಡಿದ ತಂಡ ಆಟದಲ್ಲಿ ಪ್ರಾಭಲ್ಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ತಂಡ 43 ಬಾರಿ ಗೆದ್ದರೆ, ಚೇಸಿಂಗ್ ತಂಡ 53 ಬಾರಿ ಗೆದ್ದಿದೆ
ಹವಾಮಾನ ವರದಿಯು ಮಳೆಯಾಗುವ ನಿರೀಕ್ಷೆ ಇದೆ ಎಂದಿದೆ. ಸಂಜೆ ಮತ್ತು ರಾತ್ರಿ ಆಕಾಶದಲ್ಲಿ ಮಿಂಚು ಬೀಳಬಹುದು. ಮಳೆಯಿಂದಾಗಿ ಪಂದ್ಯವು ಹಲವು ಬಾರಿ ನಿಲ್ಲುವ ಸಾಧ್ಯತೆ ಇದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇಲ್ಲಿಯವರೆಗೆ ಆರ್ಸಿಬಿ ಮತ್ತು ಕೆಕೆಆರ್ ನಡುವೆ 35 ಪಂದ್ಯಗಳು ನಡೆದಿವೆ. ಅದರಲ್ಲಿ ಕೋಲ್ಕತ್ತಾ 20 ಬಾರಿ ಗೆದ್ದಿದ್ದರೆ, ಬೆಂಗಳೂರು 15 ಬಾರಿ ಗೆದ್ದಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಬ್ಬರ ನಡುವೆ 12 ಪಂದ್ಯಗಳು ನಡೆದಿವೆ. ಕೆಕೆಆರ್ 8 ಪಂದ್ಯ ಗೆದ್ದಿದೆ. ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಕೊನೆಯ ಬಾರಿಗೆ ಕೆಕೆಆರ್ ವಿರುದ್ಧ ಗೆದ್ದಿರೋದು 2015ರಲ್ಲಿ.
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಮಯಾಂಕ್ ಅಗರ್ವಾಲ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಲುಂಗಿ ಎನ್ಗಿಡಿ, ಯಶ್ ದಯಾಲ್.