ಐಟಿ ಕ್ಷೇತ್ರದ ಹುದ್ದೆಗಳನ್ನ ಎಐ ಕಿತ್ತುಕೊಳ್ಳುತ್ತೆ ಎಂಬ ವಿಚಾರಗಳು ಇತ್ತೀಚೆಗೆ ಚರ್ಚೆ ಹುಟ್ಟುಹಾಕಿದೆ. ಇದೇ ವಿಚಾರವಾಗಿ ಇನ್ಫೋಸಿಸ್ ದಿಗ್ಗಜ ಎನ್.ಆರ್ ನಾರಾಯಣಮೂರ್ತಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಮಾವು ಮಾರುಕಟ್ಟೆ ಮಧ್ಯಪ್ರವೇಶ : ಬೆಲೆ ವ್ಯತ್ಯಾಸ ಪಾವತಿಗೆ ಸರ್ಕಾರದ ಒಪ್ಪಿಗೆ ಎನ್. ಚಲುವರಾಯಸ್ವಾಮಿ!
ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಟೆಕ್ನಾಲಜಿಯು ಹೊಸ ರೀತಿಯ ಉದ್ಯೋಗಗಳನ್ನು ಸೃಷ್ಟಿಸಲಿದೆ. ಆರ್ಟಿಫಿಷಿಯಲ್ ಇಂಟಲಿಜೆನ್ಸ್ನಿಂದ ಐಟಿ ವಲಯದಲ್ಲಿ ಉತ್ಪಾದಕತೆ ಕೂಡ ಹೆಚ್ಚಾಗಲಿದೆ. ಕಂಪನಿಗಳು ಎಐ ಅನ್ನು ಕಂಪನಿಗಳಿಗೆ ಸಹಾಯಕವಾಗುವ ಅಸ್ತ್ರವಾಗಿ ನೋಡಬೇಕೇ ವಿನಃ ಮಾನವ ಶ್ರಮಕ್ಕೆ ಪರ್ಯಾಯವಲ್ಲ. ಮಾನವ ಉದ್ಯೋಗಗಳನ್ನು ಕಿತ್ತುಕೊಳ್ಳಲಿದೆ ಎಂಬ ಭಯ ಸರಿಯಲ್ಲ. ಎಐ ಹೊಸ ರೀತಿಯ ಉದ್ಯೋಗಗಳನ್ನು ಸೃಷ್ಟಿಸಲಿದೆ. ದಶಕದ ಹಿಂದೆ ಬ್ಯಾಂಕಿಂಗ್ ವಲಯದಲ್ಲಿ ಕಂಪ್ಯೂಟರ್ಗಳನ್ನು ಪರಿಚಯಿಸಲಾಯಿತು. ಅದರಿಂದ ಯಾವುದೇ ಉದ್ಯೋಗಗಳು ನಷ್ಟವಾಗಿಲ್ಲ ಎಂದು ಎಐ ಅನ್ನು ಬ್ಯಾಂಕಿಂಗ್ ವಲಯದ ಕಂಪ್ಯೂಟರ್ಗೆ ನಾರಾಯಣಮೂರ್ತಿ ಹೋಲಿಕೆ ಮಾಡಿದ್ದಾರೆ.
1970ರ ದಶಕದ ಬ್ಯಾಂಕಿಂಗ್ ಕ್ಷೇತ್ರದ ಉದಾಹರಣೆಯನ್ನೇ ತೆಗೆದುಕೊಂಡರೂ ಟೆಕ್ನಾಲಜಿಯು ಉದ್ಯೋಗ ಸೃಷ್ಟಿಸಿದೆಯೇ ಹೊರತು ಉದ್ಯೋಗಗಳನ್ನು ಕಿತ್ತುಕೊಂಡಿಲ್ಲ. ಬ್ಯಾಂಕಿಂಗ್ ವಲಯದಲ್ಲಿ ಕಂಪ್ಯೂಟರ್ ಬಂದ ಮೇಲೆ ಉದ್ಯೋಗಗಳ ಸಂಖ್ಯೆ ಮತ್ತಷ್ಟು ಹೆಚ್ಚಾಯಿತು ಎಂದು ಹೇಳಿದ್ದಾರೆ.
ಚಾಟ್ ಜಿಪಿಟಿಯಿಂದ ಕೆಲಸದ ದಕ್ಷತೆ ಹೆಚ್ಚಾಗಿದೆ. ಈ ಹಿಂದೆ ಉಪನ್ಯಾಸಕ್ಕೆ ಸಿದ್ಧತೆ ನಡೆಸಲು 25 ರಿಂದ 30 ಗಂಟೆ ತೆಗೆದುಕೊಳ್ಳುತ್ತಿದ್ದಿದ್ದು ಈಗ 5 ಗಂಟೆ ತೆಗೆದುಕೊಳ್ಳುತ್ತಿದೆ. ನನ್ನ ಉತ್ಪಾದಕತೆಯು ಚಾಟ್ ಜಿಪಿಟಿಯಿಂದಾಗಿ 5 ಪಟ್ಟು ಉತ್ತಮವಾಗಿದೆ. ಎಐ ಮಾನವ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆಯೇ ಹೊರತು ನಷ್ಟ ಉಂಟು ಮಾಡಲ್ಲ ಎಂದರು.