ಬೆಂಗಳೂರು: ಮಂಗಳೂರು ಗಲಭೆ ಬೆನ್ನಲ್ಲೇ ಖಾಕಿ ಪಡೆ ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧ ಬ್ರೇಕ್ ಹಾಕಲು ಕಾರ್ಯಾಚರಣೆ ಶುರು ಮಾಡಿದೆ. ಈ ಸಂಬಂಧ ಇತ್ತೀಚಿಗಷ್ಟೇ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ ಆರೋಪ ಮೇಲೆ RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮೇಲೆಯೂ ಕೇಸ್ ದಾಖಲಾಗಿತ್ತು.
ಇದೀಗ ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ ಎನ್ನಲಾಗ್ತಿದೆ. ಇನ್ನೂ ಈ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
ಕಂಕುಳಿನ ಕಪ್ಪು ಕಲೆ ಬೆಳ್ಳಗಾಗಬೇಕಾ!? ಹಾಗಿದ್ರೆ ಶಾಂಪೂಗೆ ಈ ಪದಾರ್ಥ ಮಿಕ್ಸ್ ಮಾಡಿ ಹಚ್ಚಿ!
ಚಿಂತಕ, ಬರಹಗಾರ ಚಕ್ರವರ್ತಿ ಸೂಲಿಬೆಲೆಯವರನ್ನು ಗಡೀಪಾರು ಮಾಡುವ ಸಂಭವನೀಯತೆ ಇಲ್ಲ, ಅಲ್ಪಸಂಖ್ಯಾತ ಆಯೋಗದವರು ಸೂಲಿಬೆಲೆ ವಿರುದ್ಧ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಡಿಜಿಯವರನ್ನು ಕೇಳಿದ್ದಾರೆ,
ಅದೇ ಹಿನ್ನೆಲೆಯಲ್ಲಿ ಡಿಜಿಯವರು ಸಂಬಂಧಪಟ್ಟ ಎಸ್ಪಿಗೆ ಫೋನ್ ಮಾಡಿ ಮಾಹಿತಿ ಕೇಳಿದ್ದಾರೆ ಎಂದು ಹೇಳಿದರು. ಗಡೀಪಾರು ಮಾಡಲು ಬೇರೆ ಕಾರಣಗಳಿರುತ್ತವೆ, ತನಗೆ ಗೊತ್ತಿರುವ ಮಟ್ಟಿಗೆ ಅದಕ್ಕಾಗಿ ಡಿಜಿಯವರು ಎಸ್ಪಿಗೆ ಫೋನ್ ಮಾಡಿರಲ್ಲ ಎಂದು ಗೃಹ ಸಚಿವ ಹೇಳಿದರು.