Close Menu
Ain Live News
    Facebook X (Twitter) Instagram YouTube
    Thursday, May 22
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಹಿಮ್ಮಡಿ ಹೊಡೆದು ಧಗಧಗನೆ ಉರಿತಿದ್ಯಾ!? ಹಾಗಿದ್ರೆ ಈ ಮನೆಮದ್ದು ಫಾಲೋ ಮಾಡಿ!

    By AIN AuthorMay 22, 2025
    Share
    Facebook Twitter LinkedIn Pinterest Email
    Demo

    ಪಾದವು ದೇಹ ನಿಲ್ಲುವುದಕ್ಕೆ ಅನುಕೂಲ ಕಲ್ಪಿಸುವ ಒಂದು ಅಂಗ. ಪಾದದಲ್ಲಿ ಇರುವ ಪ್ರತಿಯೊಂದು ಬೆರಳು, ಹಿಮ್ಮಡಿಯು ವಿಶೇಷ ಚಕ್ರಗಳನ್ನು ಒಳಗೊಂಡಿದ್ದು, ಅವು ದೇಹದ ಆರೋಗ್ಯಕ್ಕೆ ಅನುವುಮಾಡಿಕೊಡುತ್ತವೆ. ನೆಲದ ಸ್ಪರ್ಶವನ್ನು ಸದಾ ಪಡೆದು ಕೊಳ್ಳುವ ಪಾದಗಳಿಗೆ ಧೂಳು, ಕೊಳಕು ಹಾಗೂ ಅನಾಹುತಗಳು ಉಂಟಾಗುವುದು ಸಾಮಾನ್ಯವಾದ ಸಂಗತಿ. ಈ ಹಿನ್ನೆಲೆಯಲ್ಲಿಯೇ ಪಾದಗಳು ಬಿರುಕು ಹಾಗೂ ನೋವು ಉಂಟಾಗುತ್ತವೆ. ಅವು ನಡೆಯುವಾಗ ಹಾಗೂ ಮಲಗಿರುವಾಗ ಸಾಕಷ್ಟು ನೋವನ್ನು ಉಂಟುಮಾಡುವುದು. ಅಲ್ಲದೆ ನೋಡುಗರಿಗೂ ಒಂದು ಬಗೆಯ ಶುಚಿತ್ವ ಇಲ್ಲ ಎನ್ನುವ ಭಾವನೆಯನ್ನು ಮೂಡಿಸುವುದು.

    ಪರಮೇಶ್ವರ್ ವಿರುದ್ಧ ಇಡಿ ದಾಳಿ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ ಇದೆ: ಪ್ರಹ್ಲಾದ್ ಜೋಶಿ ಆರೋಪ

    ಸೌಂದರ್ಯದ ಕಾಳಜಿಯ ವಿಚಾರಕ್ಕೆ ಬಂದರೆ ನಾವು ನಮ್ಮ ನೆರಳಿನಲ್ಲೇ ನಿರ್ಲಕ್ಷಿಸುತ್ತೇವೆ. ಎಷ್ಟೇ ಸ್ಮಾರ್ಟ್ ಆಗಿ ಡ್ರೆಸ್ ಮಾಡಿದರೂ ಒಡೆದ ಹಿಮ್ಮಡಿ ನಿಮ್ಮ ಲುಕ್ ಅನ್ನು ಹಾಳು ಮಾಡುತ್ತದೆ. ಹೀಗಾಗಿ ಅನೇಕ ಮಂದಿ ಒಡೆದ ಹಿಮ್ಮಡಿ ನಿವಾರಣೆಗೆ ಕಾಸ್ಟ್ಲಿ ಕ್ರೀಮ್ಗಳನ್ನು ಖರೀದಿಸಿ ಬಳಸುತ್ತಾರೆ. ಅಲ್ಲದೇ ಪಾರ್ಲರ್ಗೆ ಹೋಗಿ ಚಿಕಿತ್ಸೆ ಪಡೆಯುವ ಮೂಲಕ ಸಾಕಷ್ಟು ಹಣ ವ್ಯರ್ಥ ಮಾಡುತ್ತಾರೆ. ಆದರೆ ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಉಪಯೋಗಿಸುವ ಮೂಲಕವೇ ಒಡೆದ ಹಿಮ್ಮಡಿ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು ಎಂದು ನಿಮಗೆ ತಿಳಿದಿದ್ಯಾ?

    ಹೌದು, ಅತಿಯಾದ ಶೀತ, ಒಣ ಚರ್ಮ, ಅತಿಯಾದ ದೇಹದ ತೂಕ, ನೀರಿನಲ್ಲಿ ದೀರ್ಘಕಾಲ ನಿಲ್ಲುವುದು, ಅನೈರ್ಮಲ್ಯ ಜೀವನಶೈಲಿ ಮತ್ತು ಚಪ್ಪಲಿ ಧರಿಸದೇ ಬರಿ ಪಾದಗಳಿಂದಾಗಿ ನಮ್ಮ ಹಿಮ್ಮಡಿಗಳು ಬಿರುಕು ಬೀಳುತ್ತದೆ. ಇದರಿಂದ ಸಾಕಷ್ಟು ಬಾರಿ ನಿಂತುಕೊಂಡು ಕೆಲಸ ಮಾಡಲು ಕಷ್ಟವಾಗುತ್ತದೆ. ಜೊತೆಗೆ ಸಹಿಸಲಾರದಷ್ಟು ಹಿಮ್ಮಡಿ ಉರಿ ಹಾಗೂ ನೋವು ಉಂಟಾಗುತ್ತದೆ. ಆದರೆ ನಾವಿಂದು ತಿಳಿಸುವ ಕೆಲ ಸಿಂಪಲ್ ಟಿಪ್ಸ್ ಫಾಲೋ ಮಾಡುವ ಮೂಲಕವೇ ಒಡೆದ ಹಿಮ್ಮಡಿ ಸಮಸ್ಯೆಗೆ ಪರಿಹಾರ ಪಡೆಯಬಹುದು.

    ಅದೇನಪ್ಪಾ ಅಂದರೆ ನಾವು ಪ್ರತಿದಿನ ಬಳಸುವ ಮೌತ್ವಾಶ್ ಹಿಮ್ಮಡಿ ಸ್ಪರ್ಸ್ಗೆ ಉತ್ತಮ ಪರಿಹಾರವಾಗಿದೆ. ಮೌತ್ವಾಶ್ನಲ್ಲಿರುವ ರಾಸಾಯನಿಕಗಳು ಹೀಲ್ ಸ್ಪರ್ಸ್ಗೆ ಕಾರಣವಾಗುವ ಬ್ಯಾಕ್ಟೀರಿಯಾ ಸೇರಿದಂತೆ ಸೂಕ್ಷ್ಮ ಜೀವಿಗಳನ್ನು ಕೊಲ್ಲುತ್ತದೆ, ಆದರೆ ಒಣ ಚರ್ಮವನ್ನು ತೇವಗೊಳಿಸುತ್ತದೆ. 1 ಸ್ಪೂನ್ ಮೌತ್ವಾಶ್ಗೆ 2 ಸ್ಪೂನ್ ನೀರಿನ ಮಿಶ್ರಣ ಮಾಡಿ 15 ನಿಮಿಷಗಳ ಕಾಲ ನಿಮ್ಮ ಪಾದಗಳನ್ನು ನೆನೆಸುವುದರಿಂದ ಒಡೆದ ಹಿಮ್ಮಡಿ ಸಮಸ್ಯೆಗೆ ಪರಿಹಾರ ಸಿಗುತ್ತದೆ

    ಒಣ ತ್ವಚೆ ಇರುವವರು ತೆಂಗಿನೆಣ್ಣೆಯನ್ನು ಪ್ರತಿದಿನ ಹಚ್ಚುವುದರಿಂದ ಕೂಡ ಪ್ರಯೋಜನ ಪಡೆಯಬಹುದು. ಒಡೆದ ಹಿಮ್ಮಡಿ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ರಾತ್ರಿ ಮಲಗುವ ಮುನ್ನ ತೆಂಗಿನೆಣ್ಣೆಯನ್ನು ಪಾದಗಳಿಗೆ ಹಚ್ಚಿದರೆ ಹಿಮ್ಮಡಿ ಒಡೆಯುವಿಕೆಗೆ ಪರಿಹಾರ ಪಡೆಯಬಹುದು.

    ಆಲಿವ್ ಎಣ್ಣೆಯಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿವೆ. ಈ ಎಣ್ಣೆಯನ್ನು ನಿಯಮಿತವಾಗಿ ಪಾದಗಳಿಗೆ ಹಚ್ಚುವುದರಿಂದ ಒಡೆದ ಹಿಮ್ಮಡಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇದಲ್ಲದೇ ನಿಯಮಿತವಾಗಿ ಆಲಿವ್ ಎಣ್ಣೆಯನ್ನು ತ್ವಚೆಗೆ ಬಳಸುವವರು ಸಹ ಯಾವಾಗಲೂ ಯಂಗ್ ಆಗಿ ಕಾಣುತ್ತಾರೆ.

    ಒಡೆದ ಹಿಮ್ಮಡಿ ಸಮಸ್ಯೆಯಿಂದ ಬಳಲುತ್ತಿರುವವರು ವಾರಕ್ಕೊಮ್ಮೆ ಹಾಲು ಮತ್ತು ಓಟ್ಮೀಲ್ನ ಮಿಶ್ರಣವನ್ನು ಪಾದಗಳಿಗೆ ಹಚ್ಚಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು.

    ಒಡೆದ ಹಿಮ್ಮಡಿ ಸಮಸ್ಯೆಗೆ ಪಪ್ಪಾಯಿ ಹಣ್ಣು ಕೂಡ ತುಂಬಾ ಪರಿಣಾಮಕಾರಿ ಆಗಿದೆ. ಪಪ್ಪಾಯಿ ಹಣ್ಣನ್ನು ಕತ್ತರಿಸಿ ಚೆನ್ನಾಗಿ ಮ್ಯಾಶ್ ಮಾಡಿ, ಒಡೆದ ಹಿಮ್ಮಡಿಗಳಿರುವ ಪಾದಗಳಿಗೆ ಹಚ್ಚಿ, ಒಣಗುವವರೆಗೆ ಕಾಯಿರಿ ಮತ್ತು ನಂತರ ಶುದ್ಧ ನೀರಿನಿಂದ ಪಾದಗಳನ್ನು ತೊಳೆಯುವುದು ಉತ್ತಮ ಫಲಿತಾಂಶ ಸಿಗುತ್ತದೆ.

    ಅರಿಶಿನ ಪುಡಿ ಅತ್ಯುತ್ತಮ ನಂಜುನಿರೋಧಕ ಎಂದು ಹೇಳಲಾಗುತ್ತದೆ. ಅದೇ ರೀತಿ ಕಲ್ಲು ಉಪ್ಪು ಕೂಡ ರೋಗಾಣುಗಳನ್ನು ಹೋಗಲಾಡಿಸುತ್ತದೆ ಮತ್ತು ಇವು ಪಾದಗಳನ್ನು ಹೊಳೆಯುವಂತೆ ಮಾಡುತ್ತವೆ.

    Post Views: 4

    Demo
    Share. Facebook Twitter LinkedIn Email WhatsApp

    Related Posts

    ಕ್ಯಾನ್ಸರ್‌ ರೋಗಿಗಳಿಗೆ ಗುಡ್‌ ನ್ಯೂಸ್.. 16 ಜಿಲ್ಲಾಸ್ಪತ್ರೆಗಳಲ್ಲಿ ಕೀಮೋಥೆರಪಿ ಕೇಂದ್ರಗಳ ಆರಂಭಕ್ಕೆ ಸರ್ಕಾರ ನಿರ್ಧಾರ!

    May 22, 2025

    ಹೊಸ ಬಟ್ಟೆ ಬಣ್ಣ ಬಿಡುತ್ತೆ ಅನ್ನೋ ಭಯ ಇದ್ದರೆ ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ! ರಿಸಲ್ಟ್ ಪಕ್ಕಾ

    May 22, 2025

    Healthy Habit: ತಣ್ಣೀರಿಗಿಂತ ಆರೋಗ್ಯಕ್ಕೆ ಬಿಸಿ ನೀರು ಒಳ್ಳೆಯದಾ!? ತಜ್ಞರು ಹೇಳಿದ್ದಿಷ್ಟು!

    May 22, 2025

    ನಿಮಗೂ ಈ ಸಮಸ್ಯೆ ಇದ್ಯಾ!? ಹಾಗಿದ್ರೆ ಆಲೂಗಡ್ಡೆ ಮುಟ್ಟಲೇಬೇಡಿ! ಇದು ತಿಳಿದ್ರೆ ಶಾಕ್ ಆಗ್ತೀರಾ!?

    May 21, 2025

    Neem Fruit: ಬೇವಿನ ಹಣ್ಣು ಸೇವನೆಯಿಂದ ನಮ್ಮ ಆರೋಗ್ಯಕ್ಕಾಗುವ ಪ್ರಯೋಜನಗಳೇನು ಗೊತ್ತಾ..?

    May 21, 2025

    Healthcare: ಅಪ್ಪಿತಪ್ಪಿಯೂ ಈ ತರಕಾರಿಗಳನ್ನು ಫ್ರಿಡ್ಜ್‌ʼನಲ್ಲಿ ಇಡಬೇಡಿ..! ನಿಮ್ಮ ಆರೋಗ್ಯ ಹಾಳಾಗುತ್ತೆ

    May 21, 2025

    ಬಿಯರ್‌ ಕುಡಿದರೆ ಕಿಡ್ನಿ ಸ್ಟೋನ್‌ ಆಗುತ್ತಾ? ಎಣ್ಣೆ ಪ್ರಿಯರು ನೋಡಲೇಬೇಕಾದ ಸ್ಟೋರಿ!

    May 21, 2025

    ಬಿಯರ್ ಅಥವಾ ವಿಸ್ಕಿ ಯಾವುದು ಆರೋಗ್ಯಕರ!? ತಜ್ಞರು ಹೇಳಿದಿಷ್ಟು!

    May 20, 2025

    ತೆಂಗಿನಕಾಯಿ ತಿನ್ನೋದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!? ನೀವು ತಿಳಿಯಿರಿ!

    May 20, 2025

    ಶುಗರ್-ಬಿಪಿ ಕಂಟ್ರೋಲ್ ಗೆ ಶಕ್ತಿಶಾಲಿ ಬೀಜಗಳಿವು.. ನೀರಲ್ಲಿ ನೆನಸಿ ಕುಡಿಯಿರಿ! ಆಮೇಲೆ ಚಮತ್ಕಾರ ನೋಡಿ!

    May 20, 2025

    E-Shram: ಡೆಲಿವರಿ ಬಾಯ್ಸ್’ಗಳಿಗೆ ಗುಡ್ ನ್ಯೂಸ್: ಇ-ಶ್ರಮ್ ಪೋರ್ಟಲ್’ನಲ್ಲಿ ನಿಮಗೆ ಸಿಗಲಿದೆ ಹಲವು ಪ್ರಯೋಜನಗಳು.!

    May 20, 2025

    ಖಾಲಿ ಹೊಟ್ಟೆಯಲ್ಲಿ ಖರ್ಜೂರ ಹಣ್ಣು ತಿಂದ್ರೆ ಎಷ್ಟೆಲ್ಲಾ ಲಾಭ ಗೊತ್ತಾ!?

    May 20, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.