Close Menu
Ain Live News
    Facebook X (Twitter) Instagram YouTube
    Saturday, June 14
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ನಿಮ್ಮ ಮನೆಯಲ್ಲಿ ಸೊಳ್ಳೆಗಳ ಕಾಟ ಜಾಸ್ತಿ ಆಗಿದ್ಯಾ!? ಹಾಗಿದ್ರೆ ಹೀಗೆ ಮಾಡಿ!

    By AIN AuthorJune 14, 2025
    Share
    Facebook Twitter LinkedIn Pinterest Email
    Demo

    ಮಳೆಗಾಲ ಎಂದರೆ ಮನೆಗಳ ಸುತ್ತಮುತ್ತಲ ಪರಿಸರದಲ್ಲಿ ನೀರು ನಿಲ್ಲುವುದು, ಸೊಳ್ಳೆಗಳು ಉತ್ಪತ್ತಿಯಾಗಿ ಕಡಿಯುವುದು ಸಾಮಾನ್ಯ. ಸೊಳ್ಳೆ ಕಡಿತದಿಂದ ಡೆಂಗ್ಯೂ, ಮಲೇರಿಯಾ, ಇತ್ತೀಚೆಗೆ ಡೆಂಗ್ಯೂ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಜನರನ್ನು ಹೈರಾಣಾಗಿಸಿದೆ.

    ರೋಲ್ ಕಾಲ್ ಗಿರಾಕಿಗಳು: ಹೋರಾಟಗಾರರ ವಿರುದ್ಧ ನಾಲಿಗೆ ಹರಿಬಿಟ್ಟ ಮದ್ದೂರು ಶಾಸಕ!

    ಸೊಳ್ಳೆಗಳು ಬರದಂತೆ ಕೆಲವು ಕಾಯಿಲ್ ಗಳನ್ನು ಹಚ್ಚಿಡುತ್ತೇವೆ, ಆದರೆ ಇದರ ಹೊಗೆ ಅಸ್ತಮಾದಿಂದ ಬಳಲುತ್ತಿರುವವರು ಸೇರಿದಂತೆ ಅನೇಕರಿಗೆ ತೊಂದರೆಯಾಗುತ್ತದೆ.

    ಸೊಳ್ಳೆಗಳು ಪ್ರತಿಯೊಂದು ಸೀಸನ್​ನಲ್ಲಿ ವಿಪರೀತವಾಗಿರುತ್ತವೆ. ಅವುಗಳನ್ನು ಓಡಿಸಲು ಅನೇಕ ಜನರು ವಿವಿಧ ಸೊಳ್ಳೆ ನಿವಾರಕಗಳು ಮತ್ತು ಕಾಯಿಲ್‌​ ಬಳಕೆ ಮಾಡುತ್ತಾರೆ. ಇದರಿಂದ ಸೊಳ್ಳೆಗಳನ್ನು ಮನೆಯಿಂದ ಓಡಿ ಹೋಗುತ್ತವೆ. ಇದರ ಜೊತೆಗೆ ಸೋಳ್ಳೆ ಓಡಿಸಲು ಬಳಕೆ ಮಾಡಿದ ರಾಸಾಯನಿಕಗಳು ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎನ್ನುತ್ತಾರೆ ತಜ್ಞರು. ಇದರೊಂದಿಗೆ ನೈಸರ್ಗಿಕವಾಗಿ ಸೊಳ್ಳೆಗಳ ಕಾಟ ತಪ್ಪಿಸಲು ಕೆಲವು ಸಲಹೆಗಳನ್ನು ನೀಡಿದ್ದಾರೆ.

    ಕರ್ಪೂರ, ಬೇವಿನ ಎಣ್ಣೆ, ಬಿರಿಯಾನಿ ಎಲೆಗಳು: ಒಂದು ಚಿಕ್ಕ ಬಟ್ಟಲಿನಲ್ಲಿ ಒಂದು ಚಮಚ ಬೇವಿನ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಐದರಿಂದ ಆರು ಕರ್ಪೂರದ ಪೀಸ್​ಗಳನ್ನು ಸೇರಿಸಿ ಮತ್ತು ಕರಗಿಸಿ. ನಂತರ ಈ ಮಿಶ್ರಣವನ್ನು ಬಿರಿಯಾನಿ ಎಲೆಗಳಿಗೆ ಹಚ್ಚಬೇಕು, ಬಳಿಕ ಈ ಎಲೆಗಳನ್ನು ಸುಡುವುದರಿಂದ ಬರುವ ಹೊಗೆಯು ಸೊಳ್ಳೆಗಳನ್ನು ಮನೆಯಿಂದ ಹೊರಗೆ ಓಡುವಂತೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

    ಬೇವಿನ ಎಣ್ಣೆ, ಕರ್ಪೂರದಿಂದ ದೀಪ:ಸ್ವಲ್ಪ ಬೇವಿನ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಕರ್ಪೂರ ಪೀಸ್​ಗಳನ್ನು ಹಚ್ಚಬೇಕು. ಇದನ್ನು ಒಲೆಯ ಮೇಲೆ ಹಾಕಿ ಕರಗಿಸಿ. ಆ ಎಣ್ಣೆಯನ್ನು ಪಣತಿಗೆ ಹಾಕಿ ಸುರಿಯಿರಿ, ಬತ್ತಿಯನ್ನು ಹಾಕಿ ದೀಪವನ್ನು ಬೆಳಗಿಸಿ. ಬತ್ತಿಯನ್ನು ಹೊತ್ತಿಸುವುದರಿಂದ ಈ ಹೊಗೆ ತಾಳಲಾರದೇ ಅಲ್ಲಿಂದ ಸೊಳ್ಳೆಗಳು ಓಡಿ ಹೋಗುತ್ತವೆ ಎಂದು ತಜ್ಞರು ಸಲಹೆ ನೀಡುತ್ತಾರೆ.

    ಕರ್ಪೂರ, ಬೇವಿನ ಸೊಪ್ಪಿನ ಹೊಗೆ: ನಿತ್ಯ ಸೊಳ್ಳೆ ಕಾಯಿಲ್‌ಗಳನ್ನು ಹಚ್ಚುವ ಬದಲು, ಕಿಟಕಿ ಬಾಗಿಲು ಮುಚ್ಚಿ 15 ನಿಮಿಷಗಳ ಕಾಲ ಕರ್ಪೂರ ಮತ್ತು ಬೇವಿನ ಸೊಪ್ಪನ್ನು ಸುಡಬೇಕಾಗುತ್ತದೆ. ಬೇರೆ ದಾರಿ ತೋಚದೇ ಸೊಳ್ಳೆಗಳು ಮನೆಯಿಂದ ಹೊರಗೆ ಹೋಗುತ್ತವೆ.

    ನಿಂಬೆ ಹಾಗೂ ಲವಂಗ:ನಿಂಬೆ ಮತ್ತು ಲವಂಗವನ್ನು ಉಪಯೋಗಿಸುವುದರಿಂದ ಸೊಳ್ಳೆಗಳ ಕಾಟವನ್ನು ನಿವಾರಿಸಬಹುದು. ನಿಂಬೆಯನ್ನು ಎರಡು ತುಂಡುಗಳಾಗಿ ಅಡ್ಡಲಾಗಿ ಕತ್ತರಿಸಬೇಕಾಗುತ್ತದೆ. ಕತ್ತರಿಸಿದ ನಿಂಬೆ ಹಣ್ಣಿನ ಹೋಳುಗಳಿಗೆ ಲವಂಗ ಅಂಟಿಸಿ ಹಾಸಿಗೆಯ ಹತ್ತಿರ ಅಥವಾ ಮಲಗುವ ಸ್ಥಳದಲ್ಲಿ ಇಟ್ಟರೆ ಸಾಕು ಸೊಳ್ಳೆಗಳು ಇತ್ತ ಸುಳಿಯುವುದೇ ಇಲ್ಲ.

    ಅಜವಾನದ ಎಲೆ:ಸೊಳ್ಳೆಗಳನ್ನು ಓಡಿಸಲು ಅಜವಾನದ ಎಲೆಗಳನ್ನು ಭಾರಿ ಉಪಯೋಗಕ್ಕೆ ಬರುತ್ತದೆ. ಈ ಎಲೆಗಳಿಗೆ ಸೊಳ್ಳೆಗಳನ್ನೂ ಹಿಮ್ಮೆಟ್ಟಿಸುವ ಶಕ್ತಿಯಿದೆ. ಇದಕ್ಕಾಗಿ ಅಜವಾನದ ಎಲೆಗಳನ್ನು ಪಿಂಗಾಣಿ ಪಾತ್ರೆಯಲ್ಲಿ ಇಡಬೇಕು. ಬಳಿಕ ಈ ಎಲೆಗಳನ್ನು ಸುಡುವ ಮೂಲಕ ಸೊಳ್ಳೆಗಳನ್ನು ಓಡಿಸಬಹುದು. ಮನೆಯೊಳಗೆ ಸೊಳ್ಳೆಗಳು ಬರುವ ಜಾಗದಲ್ಲಿ ಈ ಪಿಂಗಾಣಿ ಪಾತ್ರೆ ಇಟ್ಟರೆ ಸಾಕು.

    ನೀರಿನ ಜೊತೆಗೆ ಅಜವಾನದ ಎಲೆ:ಮೊದಲು ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ತೆಗೆದುಕೊಂಡು, ನಂತರ ಒಲೆಯ ಮೇಲೆ ಹಾಕಿ ಕುದಿಸಿ. ಬಳಿಕ ಕುದಿಯುವ ನೀರಿಗೆ ಕೆಲವು ಅಜವಾನದ ಎಲೆಗಳನ್ನು ಹಾಕಿ. ಐದು ನಿಮಿಷಗಳ ನಂತರ, ನೀರನ್ನು ತಣ್ಣಗಾಗಿಸಿ ಹಾಗೂ ಬಾಟಲಿಗೆ ಸುರಿಯಿರಿ. ಹೊರಗೆ ಹೋಗುವಾಗ ಮಿಶ್ರಣವನ್ನು ಕೈ, ಕಾಲುಗಳ ಮೇಲೆ ಸಿಂಪಡಿಸಿಕೊಳ್ಳಬೇಕು. ಹೀಗೆ ಮಾಡಿದರೆ ಹೊರಗಡೆಯೂ ಸೊಳ್ಳೆ ಕಾಟದಿಂದ ರಕ್ಷಣೆ ಪಡೆಯಬಹುದು ಎನ್ನುತ್ತಾರೆ ತಜ್ಞರು.

    ಈ ಸಲಹೆಗಳೊಂದಿಗೆ, ಮನೆಯ ಸುತ್ತಮುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿಬೇಕು. ಸಂಜೆ ವೇಳೆ ಸೊಳ್ಳೆಗಳು ಬರುವ ಸಾಧ್ಯತೆ ಹೆಚ್ಚಿದೆ. ಕಿಟಕಿಗಳು ಹಾಗೂ ಬಾಗಿಲುಗಳನ್ನು ಸಾಧ್ಯವಾದಷ್ಟು ಮುಚ್ಚಿದರೆ ಒಳ್ಳೆಯದು

    Demo
    Share. Facebook Twitter LinkedIn Email WhatsApp

    Related Posts

    ಮಳೆಗಾಲದಲ್ಲಿ ಹಾವುಗಳು ಮನೆ ಬಳಿ ಸುತ್ತಾಡುತ್ತಾ ಇದೆಯಾ? ಹಾಗಿದ್ರೆ ಈ ಕೆಲಸ ಮಾಡಿ!

    June 13, 2025

    ಕಿಡ್ನಿ ಸ್ಟೋನ್‌ ಕರಗಲು ವೀಳ್ಯದೆಲೆ ರಸಕ್ಕೆ ಇದನ್ನು ಬೆರೆಸಿ ತಿನ್ನಿ.. ಆಮೇಲೆ ನೋಡಿ ಚಮತ್ಕಾರ!

    June 13, 2025

    ನಕ್ಕರೆ ಡಿಂಪಲ್ ಬೀಳುತ್ತಾ!? ಇದು ಅದೃಷ್ಟ ಅಲ್ಲ ಮರ್ರೆ.. ಇದು ಆರೋಗ್ಯ ಸಮಸ್ಯೆ ಅಂತೆ!

    June 13, 2025

    ವಿಮಾನದಲ್ಲಿ ಪ್ರಯಾಣಿಸೋ ಮುನ್ನ ಇದು ತಿಳಿದಿರಲಿ: ಈ ಸೀಟಲ್ಲಿ ಕೂರೋದು ಸೇಫ್!

    June 13, 2025

    ಬಿಳಿ ಕೂದಲು ಕಪ್ಪಾಗಬೇಕಾ!? ದುಬಾರಿ Product ಗೆ ಹೇಳಿ ಟಾಟ… ಜಸ್ಟ್, ಎರಡು ಚಮಚ ಕಾಫಿ ಪುಡಿ ಸಾಕು!

    June 13, 2025

    ತುಂಬಾ ಹತ್ತಿರದಿಂದ ಕೂತು ಟಿವಿ ನೋಡ್ತೀರಾ? ಇದು ಡೇಂಜರ್.. ಈ ಬಗ್ಗೆ ನೀವು ತಿಳಿದುಕೊಳ್ಳಬೇಕು!

    June 13, 2025

    Aloe Vera Juice: ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿದರೆ ಎಷ್ಟೆಲ್ಲಾ ಲಾಭ ಗೊತ್ತಾ..?

    June 13, 2025

    ತಡವಾಗಿ ಊಟ ಮಾಡುವ ಅಭ್ಯಾಸ ನಿಮಗಿದೆಯಾ? ತಕ್ಷಣ ಬದಲಾಯಿಸಿಕೊಳ್ಳಿ.. ಇಲ್ಲದಿದ್ದರೆ ಈ 5 ಕಾಯಿಲೆಗಳು ಬರೋದು ಗ್ಯಾರಂಟಿ

    June 13, 2025

    ಮೆಡಿಕವರ್ ಆಸ್ಪತ್ರೆ, ಬೆಂಗಳೂರು: ಆರ್ಥೋಪೆಡಿಕ್ಸ್ ವಿಭಾಗದ ಉತ್ಕೃಷ್ಟತಾ ಕೇಂದ್ರಕ್ಕೆ ಭವ್ಯ ಉದ್ಘಾಟನೆ

    June 13, 2025

    ನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಎರಡೇ ಎರಡು ‘ನೆನೆಸಿಟ್ಟ ಬಾದಾಮಿ’ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?

    June 12, 2025

    ನೀವು ಯಾವಾಗಲೂ ಮೊಬೈಲ್, ಟಿವಿ ಜಾಸ್ತಿ ನೋಡುತ್ತೀರಾ? ಹಾಗಿದ್ರೆ ನಿಮ್ಮ ಲೈಂಗಿಕ ಜೀವನ ಕಷ್ಟ..ಕಷ್ಟ!

    June 12, 2025

    ನೀವು ಊಟ ಮಾಡುವಾಗಲೂ ಹೆಚ್ಚು ಕೂದಲು ಸಿಗುತ್ತಾ!? ಹಾಗಿದ್ರೆ ಈ ಸಮಸ್ಯೆಗಳಿರುವುದು ಫಿಕ್ಸ್!

    June 12, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.