ಹಾಸನ: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರವಾಗಿದ್ದು, ಇರಾನ್ನಲ್ಲಿರುವ ಭಾರತೀಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಟೆಹ್ರಾನ್ನಲ್ಲಿರುವ ಭಾರತೀಯರ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ, ಸಂಪರ್ಕ ಸಂಖ್ಯೆ ಮತ್ತು ಸ್ಥಳವನ್ನು ಹಂಚಿಕೊಳ್ಳುವಂತೆ ಕೋರಲಾಗಿದೆ.
ಹಳೆಯ ಬಟ್ಟೆ ಎಸೆಯೋದು ಅಥವಾ ದಾನ ಮಾಡೋದು.. ಇದರಲ್ಲಿ ಯಾವುದು ಒಳ್ಳೆಯದು?
ಇದರ ನಡುವೆ ಇಸ್ರೇಲ್ ನಲ್ಲಿರುವ ಹಾಸನ ಜಿಲ್ಲೆಯ ಸುಮಾರು ಹತ್ತಕ್ಕೂ ಹೆಚ್ಚು ಜನರಿಗೆ ಆತಂಕ ಹೆಚ್ಚಾಗಿದೆ. ಇಸ್ರೇಲ್ ನಲ್ಲಿ ನೆಲಸಿರೋ ಹಾಸನ ಜಿಲ್ಲೆ ಆಲೂರು ತಾಲೂಕಿನ ಹೊಸಕೋಟೆ ಹೋಬಳಿಯ ಅನೇಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಸ್ರೇಲ್ನಲ್ಲಿ ನೆಲೆಸಿರುವ ಭಾರತೀಯ ವಲಸಿಗರ ಪೈಕಿ ಅಂತೋಣಿಮೇರಿ ವಿಡಿಯೋ ಕರೆ ಮಾಡಿ ಪರಿಸ್ಥಿತಿ ಬಗ್ಗೆ ಬಹಿರಂಗಪಡೆಸಿದ್ದಾರೆ.
ಈ ವಲಸಿಗರಲ್ಲಿ ಅಂತೋಣಿಮೇರಿ ಎಂಬಾಕೆಯೂ ಒಬ್ಬರಾಗಿದ್ದು, ಇವರು ತಮ್ಮ ಕುಟುಂಬದವರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿ, ಇಸ್ರೇಲ್ನ ಸದ್ಯದ ಪರಿಸ್ಥಿತಿಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಅಂತೋಣಿಮೇರಿ ಅವರು ವಿಡಿಯೋ ಕಾಲ್ನಲ್ಲಿ ಮಾತನಾಡುವಾಗ ಟೆಲ್ ಅವೀವ್ನ ಕೇಂದ್ರೀಯ ಪ್ರದೇಶದಲ್ಲಿ ಪರಿಸ್ಥಿತಿ ಸದ್ಯ ಸಾಮಾನ್ಯವಾಗಿದೆ. ಶಾಪಿಂಗ್ ಮಾಲ್ಗಳು, ಆಸ್ಪತ್ರೆಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳು ತೆರೆದಿರುವುದರಿಂದ ದೈನಂದಿನ ಚಟುವಟಿಕೆಗಳು ಕೆಲವು ಮಿತಿಗಳೊಂದಿಗೆ ಮುಂದುವರೆದಿವೆ. ಆದರೆ, ರಾತ್ರಿಯ ವೇಳೆ ಕ್ಷಿಪಣಿ ದಾಳಿಗಳ ಭಯದಿಂದ ಸ್ವಲ್ಪ ಆತಂಕದ ವಾತಾವರಣವಿದೆ ಎಂದು ತಿಳಿಸಿದ್ದಾರೆ.