ಬೆಂಗಳೂರು ಗ್ರಾಮಾಂತರ :- ಇರಾನ್ ಹಾಗೂ ಇಸ್ರೇಲ್ ನಡುವೆ ಘನಘೋರ ಯುದ್ಧ ನಡೆಯುತ್ತಿದೆ. ಈ ನಡುವೆ ಎರಡು ದೇಶದಲ್ಲಿರುವ ಅನಿವಾಸಿ ಭಾರತೀಯರು, ಪ್ರವಾಸಿಗರು ಆತಂಕದಲ್ಲಿದ್ದರು. ಇದೀಗ ಅವರನ್ನು ರಕ್ಷಣೆ ಮಾಡುವ ಕಾರ್ಯ ನಡೆದಿದ್ದು, ಕೊನೆಗೂ ತಾಯ್ನಾಡಿಗೆ ಕನ್ನಡಿಗರು ಮರಳಿದ್ದಾರೆ.
ಬಿಪ್ಯಾಕ್ ಅಧ್ಯಯನಕ್ಕೆಂದು ಬಿಪ್ಯಾಕ್ ನಿಯೋಗ ಇಸ್ರೇಲ್ ಗೆ ತೆರಳಿತ್ತು. ಈ ನಡುವೆ ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧದಿಂದ ಭಾರತಕ್ಕೆ ಬರಲಾಗದ ಪರಿಸ್ಥಿತಿಯಲ್ಲಿದ್ದರು. ಅಲ್ಲದೇ ಕಳೆದ ಆರು ದಿನಗಳಿಂದ ಇಸ್ರೇಲ್ ನಲ್ಲಿ ಸಿಲುಕಿದ್ದರು. ಇದೀಗ ಇಸ್ರೇಲ್,ಇಂಡಿಯನ್ ಎಂಬೆಸಿಯಿಂದ ರಕ್ಷಣೆ ನಡೆದಿದ್ದು, ಬೆಂಗಳೂರು ಕಡೆ ಬಿಪ್ಯಾಕ್ ನಿಯೋಗ ಪ್ರಯಾಣ ಬೆಳೆಸಿದೆ. ಟೆಲ್ ಅವೀವ್ ನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಇಂದು ಬೆಳಗ್ಗೆ ೧೧ ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಎಲ್ಲರನ್ನು ಸುರಕ್ಷಿತವಾಗಿ ಇಸ್ರೇಲ್ ವಾಪಸ್ ಕಳುಹಿಸಿದೆ.
ಇನ್ನೂ ಪಶ್ಚಿಮ ಏಷ್ಯಾದಲ್ಲಿ ಮತ್ತೆ ಮಹಾಯುದ್ಧ ನಡೆಸಿದೆ. ಇಸ್ರೇಲ್ ಮತ್ತು ಇರಾನ್ ನಡುವೆ ಸಂಘರ್ಷ ದಾಳಿ ಪ್ರತಿದಾಳಿಗಳು ನಡೆಯುತ್ತಿದೆ. ಎರಡು ದೇಶಗಳಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ.