ಕುಂದಗೋಳ:ತಾಲೂಕಿನ ರೈತರು ಮುಂಗಾರು ಮಳೆ ಆಗಿದ್ದು ಹರುಷದಿಂದ ಬಿತ್ತನೆ ಕಾರ್ಯ ಮಾಡುತ್ತಿದ್ದಾರೆ ಮಾಡುವ ಮುನ್ನ ಬೀಜೋಪಚಾರ ಮಾಡಬೇಕೆಂದು, ಡಾ, ಸಂತೋಷ್ ಒಂಟಿ ಹೇಳಿದರು. ತಾಲೂಕಿನ ಗುಡೇನಕಟ್ಟಿ ಗ್ರಾಮದ ಶ್ರೀ ಮಾರುತಿ ದೇವಸ್ಥಾನ ಆವರಣ ಕೃಷಿ ವಿಜ್ಞಾನ ಕೇಂದ್ರ ಧಾರವಾಡ ವಿಜ್ಞಾನಿಗಳು ರೈತರಿಗೆ ಸಲಹೆ ಹೇಳಿದರು,
ಮಂಟಪದಲ್ಲೇ ಗಂಡನಿಗೆ ಚಪ್ಪಲಿ ಪೂಜೆ: ಸೈಲೆಂಟಾಗಿ 2ನೇ ಮದುವೆ ಆಗ್ತಿದ್ದವ ಹೆಂಡ್ತಿ ಕೈಗೆ ಸಿಕ್ಕಿಬಿದ್ದ!
ಬೀಜೋಪಚಾರ ಮಾಡುವುದರಿಂದ ಸಿಡಿ ರೋಗ ತಡೆಗಟ್ಟಬಹುದು ಹೆಚ್ಚು ಇಳುವರಿ ಬರಲು ಸಾಧ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಧಾರವಾಡ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಐರಾದೇವಿ ಅಂಗಡಿ ಮಾತನಾಡಿ,ನಮ್ಮ ವಿಜ್ಞಾನ ಕೇಂದ್ರದಲ್ಲಿ ಸಿಗುವಂತ ಗೊಬ್ಬರ ಬೀಜ ಗಳನ್ನು ತೆಗೆದುಕೊಳ್ಳಬೇಕು ಅವುಗಳನ್ನು ಸಂಶೋಧನೆ ಮಾಡಿ ಇಡಲಾಗುತ್ತದೆ, ಅಂತ ಬೀಜವನ್ನು ತೆಗೆದು ಒಂದು ರೈತರು ಬಿತ್ತನೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ, ಪ್ರಸನ್ನ ಕುಮಾರ,ಡಾ, ಗೋವಿಂದರಾಜ, ಕುಂದಗೋಳ ತಾಲೂಕಿನ ಕೃಷಿ ಇಲಾಖೆ ಆತ್ಮ ಯೋಜನೆ ಅಧಿಕಾರಿ ಶ್ರೀದೇವಿ ಆಲೂರಿ, ರತ್ನ ಭಾರತ್ ರೈತ ಸಮಾಜದ ತಾಲೂಕಾಧ್ಯಕ್ಷ ಬಸವರಾಜ ಯೋಗಪ್ಪನವರ, ಗುಳಪ್ಪ ಸಿದ್ದನವರ, ಅಜಿತ್ ಯೋಗಪ್ಪನವರ, ಮಂಜುನಾಥ ದಾನಮ್ಮನವರ, ಬಸಪ್ಪ ಮಾದರ, ಮಲ್ಲಪ್ಪ ಬೆಡತೂರ, ಮಲ್ಲಿಕಾರ್ಜುನ್ ಹೊಸಳ್ಳಿ, ಇಂದ್ರಪ್ಪ ಸಿದ್ದುಣ್ಣವರ, ದೇವಪ್ಪ ಕಳಸಣ್ಣವರ,ಬಸಪ್ಪ ಸಿದ್ದುನವರ, ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.