ಹುಬ್ಬಳ್ಳಿ : ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ್ದು, ಮೈ ಮೇಲೆ ಹಾಕಿದ್ದ ಜನಿವಾರವನ್ನು ಕಟ್ ಮಾಡಿದ್ದು ತಪ್ಪು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದರು.
ಜನಿವಾರ ತೆಗೆಸಿದ ಪ್ರಕರಣ: ಕ್ರಮಕ್ಕೆ ಮುಂದಾದ KEA.. ವರದಿ ಕೊಡುವಂತೆ ಡಿಸಿಗೆ ಸೂಚನೆ!
ಸಿಇಟಿ ಪರೀಕ್ಷೆ ವೇಳೆ ಜನಿವಾರ ಹಾಕಿದ ವಿದ್ಯಾರ್ಥಿಗೆ ಪ್ರವೇಶ ನಿರಾಕರಿಸಿದ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಅಲ್ಲಿಯ ಹೋಮ್ ಗಾರ್ಡ್ ಮಾಡಿದ ವರ್ತನೆ ಸರಿಯಲ್ಲ. ಕೇವಲ ಬ್ರಾಹ್ಮಣರು ಅಷ್ಟೇ ಅಲ್ಲಾ ಬಹುತೇಕ ಜನರು ಜನಿವಾರ ಹಾಕುತ್ತಾರೆ. ಅನೇಕ ಓಬಿಸಿ ವರ್ಗದವರು ಸಹ ಹಾಕುತ್ತಾರೆ. ಆ ವಿದ್ಯಾರ್ಥಿಗೆ ನ್ಯಾಯ ಕೊಡಬೇಕು. ನ್ಯಾಯ ಅಂದರೆ ಕೇವಲ ಹಣ ಅಲ್ಲ, ವಿದ್ಯಾರ್ಥಿ ಭವಿಷ್ಯಕ್ಕೆ ಅನುಕೂಲ ಆಗಬೇಕು ಎಂದು ಆಗ್ರಹಿಸಿದರು.