ಬೆಂಗಳೂರು: ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ಬೆನ್ನಲ್ಲೇ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ ಸೋಮಶೇಖರ್, ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ.
ಈ ಬೆಳವಣಿಗೆಗಳ ಬೆನ್ನಲ್ಲೇ ರಾಜ್ಯಕ್ಕೆ ಬಂದಿರುವ ಬಿಜೆಪಿ ಉಸ್ತುವಾರಿ ರಾಧಮೋಹನ ದಾಸ್ ಅಗರವಾಲ್, ಯತ್ನಾಳ್ ಯಾರು ಅಂತ ಗೊತ್ತೇ ಇಲ್ಲ. ನೀವು ಹೇಳಿದ್ರೆ ನಾನು ಉತ್ತರ ಕೊಡ್ತೇನೆ.
ಯತ್ನಾಳ್ ನಮ್ಮ ಪಕ್ಷದ ಕಾರ್ಯಕರ್ತರೂ ಅಲ್ಲ ಅಂತ ವ್ಯಂಗ್ಯವಾಡೋ ಮೂಲಕ ರೆಬೆಲ್ಸ್ ಬಿಗ್ ಶಾಕ್ ನೀಡಿದ್ದಾರೆ.
ಕೇಂದ್ರದಿಂದ ಜಾತಿ ಜನಗಣತಿ ಸಮೀಕ್ಷೆ ನಡೆಸಲಾಗ್ತಿದೆ. ಬಿಹಾರ, ಕರ್ನಾಕಟ ಸೇರಿ ಕೆಲ ರಾಜ್ಯಗಳಲ್ಲಿ ಜಾತಿ ಜನಗಣತಿ ಮಾಡಿಸಲಾಗಿದೆ. ಆದ್ರೆ ಅವರ ಜಾತಿ ಗಣತಿ ಬಗ್ಗೆ ಜನರಿಗೆ ಕೇಳಿ, ಏನ್ ಹೇಳ್ತಾರೆ ಅಂತ. ಜನರು ಒಪ್ಪದ ಜಾತಿ ಜನಗಣತಿಯನ್ನು ಕರ್ನಾಟಕ ಮಾಡಿದೆ ಎಂದು ರಾಧಾ ಮೋಹನ ದಾಸ್ ಅಗರವಾಲ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಟೋಯಿಂಗ್ ಶುರು!? ಸರ್ಕಾರದ ನಡೆಗೆ ನಿಖಿಲ್ ಕುಮಾರಸ್ವಾಮಿ ಅಸಮಾಧಾನ!
ಕಾಂಗ್ರೆಸ್ ತುಷ್ಟೀಕರಣ ಕಾರಣ
ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಹಿಂಸಾ ಕೃತ್ಯಗಳಿಗೆ ಕಾಂಗ್ರೆಸ್ ತುಷ್ಟೀಕರಣ ಕಾರಣ. ಹಿಂದೂ ಸಮಾಜದ ವಿರುದ್ಧ ಕಾಂಗ್ರೆಸ್ ನಿರಂತರ ಆಕ್ರಮಣ ಮಾಡುತ್ತಿದೆ. ವಕ್ಫ್ ವಿಚಾರವೂ ಮುಸ್ಲಿಂ ತುಷ್ಟೀಕರಣದ ಒಂದು ಭಾಗ ಎಂದು ರಾಧಾ ಮೋಹನ ದಾಸ್ ಅಗರ್ವಾಲ್,
ದೊಡ್ಡದಾದ ಜಮೀನು ವಕ್ಫ್ ಗೆ ಕೊಡಲಾಯ್ತು, ಮುಸ್ಲಿಮರಿಗೆ ಮೀಸಲು ಕೊಟ್ರು, 150 ಕೋಟಿ ಅನುದಾನ ಕೊಟ್ರು. ಪಾಕ್ ಜಿಂದಾಬಾದ್ ಕೂಗಿದ್ರೂ ಇವ್ರು ಸುಮ್ಮನಾಗಿದ್ರು.
ಕಳೆದ ಎರಡು ವರ್ಷಗಳಿಂದ ಕರ್ನಾಟದಲ್ಲಿ ಕಾಂಗ್ರೆಸ್ ಅಲ್ಲ, ಮುಸ್ಲಿಂ ಲೀಗ್ ಸರ್ಕಾರ ನಡೀತಿದೆ. ಎಸ್ಡಿಪಿಐ, ಮುಸ್ಲಿಂ ಲೀಗ್ ಸರ್ಕಾರ ಇಲ್ಲಿ ನಡೀತಿದೆ. ಈಗಲೂ ಪಾಠ ಕಲಿಯದಿದ್ರೆ ಕಾಂಗ್ರೆಸ್ ಗೆ ಉಳಿಗಾಲ ಇಲ್ಲ. ಕಾಂಗ್ರೆಸ್ ಸಮಯ ಸಾಧಕ ರಾಜಕಾರಣ ಬಿಟ್ಟು ರಾಷ್ಟ್ರವಾದ ರಾಜಕಾರಣ ಮಾಡಲಿ ಎಂದು ಸಲಹೆ ನೀಡಿದ್ದಾರೆ.