ದಾವಣಗೆರೆ: ಸ್ನೇಹ, ಸಿನಿಮಾ ಅಂತ ಹೇಳಿ ಶಿವಣ್ಣ ಸುಮ್ಮನಾಗಿರುವುದು ಸರಿಯಲ್ಲ ಎಂದು ನಟ ಅಹಿಂಸಾ ಚೇತನ್ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ನಾನು ಕಮಲ್ ಹಾಸನ್ ಅವರ ಮಾತನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳುವುದಿಲ್ಲ. ನಮ್ಮ ಮಾತು ಸತ್ಯ ಅಲ್ಲವೆಂದು ಗೊತ್ತಾದಾಗ ಕ್ಷಮೆ ಕೇಳಬೇಕು.
ಅದನ್ನು ಬಿಟ್ಟು ಕ್ಷಮೆ ಕೇಳಲ್ಲವೆಂದು ವಾದಕ್ಕಿಳಿಯಬಾರದು. ಪಂಚ ದ್ರಾವಿಡ ಭಾಷೆಗಳಲ್ಲಿ ಸೋದರ ಸಹೋದರಿ ಭಾಷೆಗಳಿವೆ. ಸಂಸದ ಯದುವೀರ್ ಅವರ ಹೇಳಿಕೆ ಕೂಡ ಕಮಲ್ ಹಾಸನ್ ಅವರಂತೆಯೇ ಇದೆ. ಅವರೂ ಕೂಡ ಕನ್ನಡದ ಬಗ್ಗೆ ತಿಳಿದುಕೊಳ್ಳದೇ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಗಟ್ಟಿಮುಟ್ಟಾದ ಮೂಳೆ ನಿಮ್ಮದಾಗಬೇಕಾ!? ಹಾಗಿದ್ರೆ ಈ ಬೀಜಗಳನ್ನು ತಿನ್ನುವ ಅಭ್ಯಾಸ ಇಟ್ಟುಕೊಳ್ಳಿ!
ಇದು ತಮಿಳು-ಕನ್ನಡದ ನಡುವಿನ ಘರ್ಷಣೆ ಅಲ್ಲ. ಸತ್ಯ ಹಾಗೂ ಸುಳ್ಳಿನ ನಡುವಿನ ಸಂಘರ್ಷ. ಡಾ.ರಾಜಕುಮಾರ್ ಅವರು ಕನ್ನಡ ಭಾಷೆಗಾಗಿ ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿದ್ದರು. ಶಿವರಾಜಕುಮಾರ್ ಕೂಡ ಆ ಹೋರಾಟವನ್ನು ಮುಂದುವರಿಸಬೇಕಿತ್ತು.
ಆದರೆ, ಸ್ನೇಹ, ಸಿನಿಮಾ ಅಂತ ಹೇಳಿ ಸುಮ್ಮನಾಗಿರುವುದು ಸರಿಯಲ್ಲ. ಸುಳ್ಳುಗಳನ್ನು ಸಮರ್ಥಿಸಿಕೊಂಡಂತಾಗುತ್ತದೆ. ವಿರೋಧ ಮಾಡುವುದನ್ನು ಬಿಟ್ಟು ಸುಮ್ಮನಿರುವುದನ್ನು ನೋಡಿದರೆ ಕನ್ನಡ ಭಾಷೆ ನೆಲಕ್ಕಿಂತ ಸಿನಿಮಾ ಕೆರಿಯರ್ ಮುಖ್ಯ ಎನ್ನುವಂತಾಗುತ್ತದೆ. ಸತ್ಯ ಮುಚ್ಚಿಹಾಕುವ ಕೆಲಸವನ್ನು ಯಾರೂ ಮಾಡಬಾರದು ಎಂದರು.