Close Menu
Ain Live News
    Facebook X (Twitter) Instagram YouTube
    Friday, May 23
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಜನೌಷಧ ಕೇಂದ್ರ ತೆರವು ವಿಚಾರ: ಇದರಲ್ಲಿ ರಾಜಕೀಯ ದುರುದ್ದೇಶವಿಲ್ಲ ಎಂದ ಶರಣ್ ಪ್ರಕಾಶ್ ಪಾಟೀಲ್!

    By AIN AuthorMay 23, 2025
    Share
    Facebook Twitter LinkedIn Pinterest Email
    Demo

    ಗದಗ:- ರಾಜ್ಯ ಸರಕಾರದಿಂದ ಜನಔಷಧಿ ಕೇಂದ್ರ ತೆರವು ವಿಚಾರವಾಗಿ ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

    ಕಾಡಾನೆ ದಾಳಿ: ಮಹಿಳೆ ಸ್ಥಳದಲ್ಲೇ ದುರ್ಮರಣ, ಮೃತರ ಕುಟುಂಬಕ್ಕೆ 20 ಲಕ್ಷ ಪರಿಹಾರ!

    ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಜನೌಷಧ ಕೇಂದ್ರ ತೆರವು ಮಾಡಲು ರಾಜಕೀಯ ದುರುದ್ದೇಶವಿಲ್ಲ. ಹಿಂದೆಯೂ ನಾನು ಜನೌಷಧ ಕೇಂದ್ರ ಬೇಡ ಅಂತ ಹೇಳಿದ್ದೆ. ಸರ್ಕಾರವೇ ಉಚಿತವಾಗಿ ಔಷಧಗಳನ್ನು ನೀಡುತ್ತಿರುವ ಸಂದರ್ಭದಲ್ಲಿ ಆಸ್ಪತ್ರೆಯೊಳಗೆ ಮಾರಾಟ ಮಳಿಗೆ ಇರಬೇಕು ಎಂಬ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

    ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳನ್ನು ಸರ್ಕಾರ ಉಚಿತವಾಗಿ ನೀಡುತ್ತಿದೆ. ಜನೌಷಧ ಕೇಂದ್ರಗಳು ಕಡಿಮೆ ದರದಲ್ಲಿ ಔಷಧ ಕೊಡುತ್ತವೆ ಎಂಬ ಒಳ್ಳೆಯ ಉದ್ದೇಶ ಇದ್ದರೂ, ಸರ್ಕಾರವೇ ಉಚಿತವಾಗಿ ನೀಡುತ್ತಿರುವಾಗ, ಸಾಮಾನ್ಯ ಜನರು ಮತ್ತೆ ಔಷಧಗಳನ್ನು ಖರೀದಿ ಮಾಡಬೇಕಾಗಿರುವ ಪರಿಸ್ಥಿತಿ ಉಂಟಾಗಬಾರದು ಎಂದು ಸಚಿವರು ತಿಳಿಸಿದರು.

    ಮೆಡಿಸಿನ್ ಲಭ್ಯವಿಲ್ಲ ಎಂಬ ಕಾರಣಕ್ಕೆ ಜನ ಖಾಸಗಿ ಮಳಿಗೆಗಳಿಗೆ ಧಾವಿಸಬಾರದೆಂದು ಹೇಳಿದ ಸಚಿವರು, ನಮ್ಮ ವ್ಯವಸ್ಥೆ ಎಲ್ಲವನ್ನೂ ಫರ್ಪೆಕ್ಟ್ ಆಗಿ ಕೊಡಲ್ಲ ಎಂದು ಅರ್ಥವಲ್ಲ. ಇದನ್ನು ಸರ್ಕಾರದ ಗಮನಕ್ಕೆ ತರಬೇಕು. ವ್ಯವಸ್ಥೆಯೊಳಗಿನ ದೋಷಗಳನ್ನು ಸರಿಪಡಿಸಬೇಕು ಎಂದು ಸಲಹೆ ನೀಡಿದರು.

    ಈ ನಿರ್ಧಾರದ ಹಿಂದೆ ಯಾವುದೇ ರಾಜಕೀಯ ದುರಾಶೆಯಿಲ್ಲ. ಈ ತೀರ್ಮಾನ ಸಮಗ್ರವಾಗಿ ಪರಿಗಣಿಸಿ ತೆಗೆದುಕೊಳ್ಳಲಾಗಿದೆ. ಸರ್ಕಾರಿ ಆಸ್ಪತ್ರೆಯ ಆವರಣದ ಹೊರಗೆ ಜನಔಷಧ ಮಳಿಗೆಗಳನ್ನು ಸ್ಥಾಪಿಸುವ ಬಗ್ಗೆ ಚರ್ಚೆ ನಡೆಯಬಹುದು. ಆದರೆ, ಆಸ್ಪತ್ರೆಯ ಒಳಗೆ ಅಲ್ಲ. ಇಂತಹ ನಿರ್ಧಾರಗಳೊಂದಿಗೆ ಆರೋಗ್ಯ ಇಲಾಖೆಯು ಜನರಿಗೆ ಹೆಚ್ಚು ಲಾಭವಾಗುವ ರೀತಿಯಲ್ಲಿ ಸೇವೆ ಒದಗಿಸಲು ಪ್ರಯತ್ನಿಸುತ್ತಿದೆ ಎಂದರು.

    ಇನ್ನೂ ಮೈಸೂರು ಸ್ಯಾಂಡಲ್ ಬ್ರ್ಯಾಂಡ್‌ನ ಪ್ಯಾನ್ ಇಂಡಿಯಾ ಮಟ್ಟದ ವಿಸ್ತರಣೆಗಾಗಿ ನಟಿ ತಮನ್ನಾ ಭಟಿಯಾ ಅವರನ್ನು ಬ್ರ್ಯಾಂಡ್ ಅಂಬಾಸಡರ್ ಆಗಿ ನೇಮಕಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ಹಲವರಲ್ಲಿ ವಿರೋಧದ ಸ್ವರಕ್ಕೆ ಕಾರಣವಾಗಿದೆ. ಸ್ಥಳೀಯ ಮಟ್ಟದಲ್ಲಿ ಕನ್ನಡ ನಟರು ಅಥವಾ ನಟಿಯರು ಪ್ರಚಾರದ ಮುಖವಾಗಬೇಕು ಎಂಬ ಮನೋಭಾವ ರಾಜ್ಯದ ಜನರಲ್ಲಿದೆ. ಆದರೆ, ಇಡೀ ದೇಶದಲ್ಲಿ ಮೈಸೂರು ಸ್ಯಾಂಡಲ್ ಬ್ರ್ಯಾಂಡ್‌ ಪ್ರಚಾರ ಮಾಡುವ ಉದ್ದೇಶದಿಂದ ಪ್ಯಾನ್ ಇಂಡಿಯಾ ಜನಪ್ರಿಯತೆ ಹೊಂದಿರುವ ತಮನ್ನಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

    ಪರಿಷತ್ತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ನಾನು ಕಲ್ಬುರ್ಗಿಯವನೇ ಆ ಬಗ್ಗೆ ಎಲ್ಲ ಮಾಹಿತಿ ಇದೆ. ಇವರು ನಮ್ಮ ನಾಯಕರನ್ನ ಬಾಯಿಗೆ ಬಂದಂತೆ ಬೈದರೆ ಅಲ್ಲಿರೋರು ಏನಾದರೂ ರಿಯಾಕ್ಟ್ ಮಾಡೋದೆ ತಾನೇ ಎಂದು ಹೇಳುವ ಮೂಲಕ ಹಲ್ಲೆಯನ್ನು ಸಚಿವರು ಸಮರ್ಥನೆ ಮಾಡಿಕೊಂಡಿದ್ದಾರೆ.

    ಇವರ ಮೇಲೆ ಯಾರೂ ಹಲ್ಲೆ ಮಾಡಿಲ್ಲ ಆದರೆ ಕಾನೂನು ಸುವ್ಯವಸ್ಥೆ ಕಾಪಾಡಿದ್ದಾರೆ. ಪ್ರಿಯಾಂಕಾ ಅವರಿಗೆ ಮಾಧ್ಯಮದ ಮುಂದೆನೆ ಮಾತನಾಡಿದ್ದಾರೆ. ಅವರ ಆರೋಪದಂತೆ ಹಲ್ಲೆ ನಡೆದಿಲ್ಲ. ಆದ್ರೆ ಇವರಿಗೆ ಭಾಷೆ ಮೇಲೆ ಹಿಡಿತ ಇರಬೇಕು. ತಾವು ಮಾತಾಡೋದರ ಬಗ್ಗೆ ಪರಿಜ್ಞಾನ ಇಟಗೊಂಡು ಮಾತಾಡಬೇಕು. ಪ್ರಚೋದನೆ ಹೇಳಿಕೆ ಕೊಟ್ಟು ಈ ರೀತಿ ಅರಾಜಕತೆ ಸೃಷ್ಟಿ ಮಾಡೋದು ಬಿಜೆಪಿ ಪದ್ಧತಿ ಸಮಾಜದಲ್ಲಿ ಗೊಂದಲ ಮಾಡೋದು ಬಿಜೆಪಿ ಒಂದು ಸ್ಟ್ರ್ಯಾಟರ್ಜಿ ಎಂದರು.

    Post Views: 6

    Demo
    Share. Facebook Twitter LinkedIn Email WhatsApp

    Related Posts

    ಕಾಡಾನೆ ದಾಳಿ: ಮಹಿಳೆ ಸ್ಥಳದಲ್ಲೇ ದುರ್ಮರಣ, ಮೃತರ ಕುಟುಂಬಕ್ಕೆ 20 ಲಕ್ಷ ಪರಿಹಾರ!

    May 23, 2025

    ನ್ಯಾಷನಲ್ ಹೆರಾಲ್ಡ್ ED ಚಾರ್ಜ್‌ಶೀಟ್:‌ ಎಲ್ಲಾ ತನಿಖೆಗೂ ಸಿದ್ಧ ಎಂದ ಡಿಕೆಶಿ

    May 23, 2025

    ಜನಾಕ್ರೋಶ ಕೇವಲ ರಾಜಕೀಯವಾಗಿಯೇ ಹೊರತು, ಜನರಲ್ಲಿ ಆಕ್ರೋಶ ಇಲ್ಲ: ಸಿಎಂ ಸಿದ್ದರಾಮಯ್ಯ

    May 23, 2025

    ತಮನ್ನಾನೂ ಬೇಡ, ಸುಮನ್ನಾನೂ ಬೇಡ. ಬೇಕಿದ್ರೆ ನಾನೇ ಉಚಿತವಾಗಿ ರಾಯಭಾರಿಯಾಗ್ತೀನಿ: ವಾಟಾಳ್ ನಾಗರಾಜ್

    May 23, 2025

    ಮದ್ದೂರು ನಗರಸಭೆಯಾಗಿ ಮೇಲ್ದರ್ಜೆಗೆ: CM, DCMಗೆ ಅಭಿನಂದನೆ ಸಲ್ಲಿಸಿದ ಶಾಸಕ ಕೆ.ಎಂ.ಉದಯ್

    May 23, 2025

    ಡಿಕೆಶಿಗೆ ಅದ್ಧೂರಿ ವೆಲ್‌ ಕಂ : ಕೈʼ ಕಾರ್ಯಕರ್ತರಿಗೆ ಸೇನೆಗೆ ಫ್ರೀ ಪೆಟ್ರೋಲ್ ಭಾಗ್ಯ..! (video)

    May 23, 2025

    ಆಲಮಟ್ಟಿ ಅಣೆಕಟ್ಟು ಎತ್ತರ 524 ಮೀ.ಗೆ ಹೆಚ್ಚಿಸಲು ಅಧಿಸೂಚನೆ ಹೊರಡಿಸುವಂತೆ ಕೇಂದ್ರದ ಮೇಲೆ ಒತ್ತಡ: ಡಿ.ಕೆ. ಶಿವಕುಮಾರ್

    May 23, 2025

    ರಾಮನಗರ ಮರುನಾಮಕರಣ: ರಾಜ್ಯ ಸರ್ಕಾರಕ್ಕೆ ತೀರ್ಮಾನಿಸುವ ಅಧಿಕಾರವಿದೆ: ಸಿಎಂ ಸಿದ್ದರಾಮಯ್ಯ

    May 23, 2025

    ಅವನೊಬ್ಬ ಮೆಂಟ್ಲು.. ಮಾನಸಿಕ ಆರೋಗ್ಯ ಹದಗೆಟ್ಟಿರಬೇಕು: ಹೇಳಿದ್ಯಾರು ಗೊತ್ತಾ..?

    May 23, 2025

    ನ್ಯಾಷನಲ್ ಹೆರಾಲ್ಡ್’ಗೆ ರಾಜಾರೋಷವಾಗಿ 25 ಲಕ್ಷ ಕೊಟ್ಟಿದ್ದೇವೆ: ಡಿ.ಕೆ.ಶಿವಕುಮಾರ್

    May 23, 2025

    SSLC ಮರು ಮೌಲ್ಯಮಾಪನ: ಪೂರ್ಣ ಪ್ರಜ್ಞಾ ಶಾಲೆಯ ವಿದ್ಯಾರ್ಥಿನಿ ಸಿ.ಪುನೀತಾ ರಾಜ್ಯಕ್ಕೆ ಪ್ರಥಮ

    May 23, 2025

    Accident News: ಕಾರು ಡಿಕ್ಕಿಯಾಗಿ ಬ್ಯಾಂಕ್‌ ಮ್ಯಾನೇಜರ್‌ ಸಾವು, ಪತ್ನಿ-ಮಗಳು ಗಂಭೀರ

    May 23, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.