ಬೆಂಗಳೂರು:- ಮಹಿಳೆಯ ಸರ ಕದ್ದೊಯ್ದು ಕಳ್ಳನೋರ್ವ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪಂಪಮ್ಮ ಲೇಔಟ್ ನಲ್ಲಿ ಜರುಗಿದೆ.
ಕೇವಲ ಎರಡೇ ಎರಡು ಸೆಕೆಂಡ್ ನಲ್ಲಿ ಕುತ್ತಿಗೆಗೆ ಕೈ ಹಾಕಿ ಮಹಿಳೆಯ ಸರಗಳವು ಮಾಡಿರುವ ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಂದು ಕೈನಲ್ಲಿ ಸರಕದ್ದು ಮತ್ತೊಂದು ಕೈನಲ್ಲಿ ಬೈಕ್ ಡ್ರೈವ್ ಮಾಡ್ತಾ ಸರಗಳ್ಳ ಎಸ್ಕೇಪ್ ಆಗಿದ್ದಾನೆ.
ವೃತ್ತಿಯಲ್ಲಿ ಅಕೌಂಟೆಂಟ್ ಆಗಿರುವ ಭಾನುಮತಿ ಎಂಬುವವರು ತಮ್ಮ ಮನೆ ಮುಂದೆ ನಿಂತಿದ್ರು. ಮೊಬೈಲ್ ನಲ್ಲಿ ಮಾತಾಡೋದನ್ನ ಗಮನಿಸಿರೋ ಸರಗಳ್ಳ ಶರವೇಗದಲ್ಲಿ ಸರ ಕಿತ್ತು ಪರಾರಿ ಆಗಿದ್ದಾನೆ. ಮೂರು ಲಕ್ಷ ಮೌಲ್ಯದ 70 ಗ್ರಾಂ ಚಿನ್ನಾಭರಣ ಕದ್ದು ಆರೋಪಿ ಎಸ್ಕೇಪ್ ಆಗಿದ್ದಾನೆ. ಮಹಿಳಾ ಅಕೌಂಟೆಂಟ್ ರಿಂದ ರಾಮಮೂರ್ತಿ ನಗರ ಠಾಣೆಗೆ ದೂರು ನೀಡಲಾಗಿದೆ. ಸದ್ಯ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ಪತ್ತೆಗಾಗಿ ಹುಡುಕಾಟ ನಡೆದಿದೆ.