Close Menu
Ain Live News
    Facebook X (Twitter) Instagram YouTube
    Monday, June 9
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಹುಬ್ಬಳ್ಳಿಯಲ್ಲಿ ಜಸ್ಟ್‌ʼಡಯಲ್‌ ಉದ್ಯಮ ಶ್ರೇಷ್ಠತೆ ಪ್ರಶಸ್ತಿ ಪ್ರದಾನ

    By AIN AuthorNovember 23, 2023
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ: ಭಾರತದ ನಂ.1 ಮಾಹಿತಿ ಶೋಧ ತಾಣವಾಗಿರುವ ಜಸ್ಟ್‌ ಡಯಲ್‌ನ ಉದ್ಯಮ ಶ್ರೇಷ್ಠತೆ ಪ್ರಶಸ್ತಿ ಪ್ರದಾನದ ಮೊದಲ ಆವೃತ್ತಿಯ ಸಮಾರಂಭ ನ. 18 ರಂದು ಇಲ್ಲಿ ನಡೆಯಿತು. ಹುಬ್ಬಳ್ಳಿಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಸಶಕ್ತಗೊಳಿಸಲು ವಿನ್ಯಾಸಗೊಳಿಸಲಾದ ಸಂಪರ್ಕ ಜಾಲ ಹೆಚ್ಚಿಸುವ ಮತ್ತು ಮೆಚ್ಚುಗೆಯ ಕಾರ್ಯಕ್ರಮ ಅದಾಗಿತ್ತು. ಜಸ್ಟ್‌ಡಯಲ್ ವೇದಿಕೆಯಲ್ಲಿ ಸೇರ್ಪಡೆಯಾಗಿರುವ ಸ್ಥಳೀಯ ಉದ್ಯಮ– ವಹಿವಾಟುಗಳಿಗೆ ಬೆಳವಣಿಗೆ ಬಗ್ಗೆ ಮೌಲ್ಯಯುತ ಒಳನೋಟಗಳು ಮತ್ತು ಅವಕಾಶಗಳನ್ನು ಒದಗಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ ಎಂದು ಕಂಪನಿ ಸಿಇಓ ತಿಳಿಸಿದ್ದಾರೆ.

    ಸ್ಥಳೀಯ ‘ಎಂಎಸ್‌ಎಂಇ’ ಸಮುದಾಯಕ್ಕೆ ಅನುಕೂಲವಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದ ವೈವಿಧ್ಯಮಯ ಸಂಪರ್ಕ ಸಭೆಗಳನ್ನೂ ಈ ಕಾರ್ಯಕ್ರಮವು ಒಳಗೊಂಡಿತ್ತು. ರಾಷ್ಟ್ರೀಯ ಸಣ್ಣ ಉದ್ದಿಮೆಗಳ ನಿಗಮ ಲಿಮಿಟೆಡ್‌ನ ಉಪ ವ್ಯವಸ್ಥಾಪಕ (ಬಿಡಿ) ಪ್ರವೀಣ ಮುಧೋಳ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ‘ಎಂಎಸ್‌ಎಂಇ’ಗಳಿಗೆ ನೆರವಾಗುವ ಸರ್ಕಾರದ ಯೋಜನೆಗಳು ಮತ್ತು ಉದ್ಯಮಿಗಳ ಬೆಳವಣಿಗೆಯ ಪಯಣದಲ್ಲಿ ‘ಎನ್‌ಎಸ್‌ಐಸಿ’ ಹೇಗೆ ಸಹಾಯ ಹಸ್ತ ಚಾಚುತ್ತಿದೆ ಎಂಬುದನ್ನು ಅವರು ವಿವರಿಸಿದರು.

    ಹುಬ್ಬಳ್ಳಿಯ ಉದ್ಯಮ ಜಗತ್ತಿನಲ್ಲಿ ಉದ್ಯಮಿಗಳು ತಮ್ಮ ವ್ಯಾಪಾರ – ವಹಿವಾಟಿನ ಜಾಲಗಳನ್ನು ಪರಸ್ಪರ ಸಂಪರ್ಕಿಸಲು, ಸಹಯೋಗ ಹೊಂದಲು ಮತ್ತು ವಿಸ್ತರಿಸಲು ಇದು ಅನುವು ಮಾಡಿಕೊಟ್ಟಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಲ್ಲಿ ಒಬ್ಬರಾಗಿರುವ ಎಂಇ4ಯು ಇಂಟರ್‌ನ್ಯಾಷನಲ್‌ನ ಮಾಲೀಕ ಮುತ್ತುರಾಜ್ ಮಾತನಾಡಿ “ತಂತ್ರಜ್ಞಾನದ ನೆರವು ಇಲ್ಲದೆ, ನಾವು ಉದ್ಯಮ – ವಹಿವಾಟು ನಡೆಸಲು ಸಾಧ್ಯವಿಲ್ಲ. ಜಸ್ಟ್‌ಡಯಲ್ ಮೂಲಕ ನಾವು ಎಲ್ಲ ಸೌಲಭ್ಯಗಳು ದೊರೆಯುವಂತೆ ಮಾಡಿದ್ದೇವೆ. ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ನಾವು ನಮ್ಮ ವ್ಯಾಪಾರ – ವಹಿವಾಟಿಗೆ ಅತ್ಯುತ್ತಮ ಪ್ರಯೋಜನಗಳನ್ನು ಪಡೆಯುತ್ತಿದ್ದೇವೆ’ ಎಂದರು.

    Kambala: ಬೆಂಗಳೂರಲ್ಲಿ ಅದ್ದೂರಿಯಾಗಿ ನ. 25, 26ರಂದು ನಡೆಯಲಿರುವ ನಮ್ಮ‌ ಕಂಬಳ: ಹೇಗಿದೆ ಸಿದ್ಧತೆ!

    ಉದ್ಯಮಗಳ ಉತ್ಕೃಷ್ಟತೆ ಗುರುತಿಸುವ ಬದ್ಧತೆಯ ಭಾಗವಾಗಿ, ಜಸ್ಟ್‌ಡಯಲ್‌ನಲ್ಲಿ ಹೆಸರು ಸೇರ್ಪಡೆಯಾಗಿರುವ ಅತ್ಯುತ್ತಮ ಮಾರಾಟಗಾರರನ್ನು ಜಸ್ಟ್‌ಡಯಲ್ ಮೂರು ವಿಶಿಷ್ಟ ಪ್ರಶಸ್ತಿ ವಿಭಾಗಗಳಲ್ಲಿ ಗೌರವಿಸಿತು. ಧಾರವಾಡದ ಲಾಜಿಕ್ ಕಂಪ್ಯೂಟರ್ ಸೆಂಟರ್‌ನ ಮಾಲೀಕ ಅಭಿಷೇಕ್ ಮಾತನಾಡಿ, ಈ ಕಾರ್ಯಕ್ರಮವು ಇಂದಿನ ಅಗತ್ಯವಾಗಿದೆ ಎಂದರು. ‘ಪ್ರತಿಯೊಬ್ಬರೂ ಗುರುತಿಸಲ್ಪಟ್ಟ ಮತ್ತು ಬೆಳಕಿಗೆ ಬಂದಿರುವ ಈ ಕಾರ್ಯಕ್ರಮದಿಂದ ಜಸ್ಟ್‌ಡಯಲ್ ಗ್ರಾಹಕರು ಸಂತೃಪ್ತರಾಗಿದ್ದಾರೆ. ಎರಡನೆಯದಾಗಿ, ಜೆಡಿ ಆ್ಯಪ್‌ನ ಮಹತ್ವ ಮತ್ತು ಅದನ್ನು ಹೇಗೆ ಬಳಸುವುದು ಎಂಬುದರ ಅರಿವು ಅದ್ಭುತವಾಗಿದೆ.

    ಸದ್ಯದ ವಾಣಿಜ್ಯ –ವ್ಯಾಪಾರ ಜಗತ್ತಿನಲ್ಲಿ ಅಂತರ್ಜಾಲ ತಾಣದ ಅಗತ್ಯದ ಕುರಿತು ಈ ಕಾರ್ಯಕ್ರಮದಿಂದ ಹುಬ್ಬಳ್ಳಿ – ಧಾರವಾಡದ ಗ್ರಾಹಕರು ನಿಜವಾಗಿಯೂ ಸಂತೋಷಪಟ್ಟಿದ್ದಾರೆ’ ಎಂದರು. ಕಾರ್ಯಕ್ರಮದ ಯಶಸ್ಸಿನ ಕುರಿತು ಪ್ರತಿಕ್ರಿಯಿಸಿರುವ ಜಸ್ಟ್‌ಡಯಲ್ ಗ್ರೂಪ್‌ನ ಉಪಾಧ್ಯಕ್ಷ (ಮಾರಾಟ) ರಾಜೀವ್ ನಾಯರ್ ಅವರು, ‘ಕಾರ್ಯಕ್ರಮದಲ್ಲಿ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಈ ಪ್ರದೇಶದ ಉದ್ಯಮಶೀಲತೆಯ ಉತ್ಸಾಹವನ್ನು ತೋರಿಸುತ್ತದೆ. ಉದ್ಯಮಿಗಳ ವಹಿವಾಟಿನ ಬೆಳವಣಿಗೆಯ ಪಯಣದಲ್ಲಿ ಸ್ಥಳೀಯ ಉದ್ಯಮ – ವ್ಯಾಪಾರಿಗಳ ಜೊತೆಗಿನ ನಮ್ಮ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ’ ಎಂದು ಹೇಳಿದ್ದಾರೆ.

    ಇದಕ್ಕೆ ಪೂರಕವಾಗಿ, ಜಸ್ಟ್‌ಡಯಲ್‌ನ ಮುಖ್ಯ ಬೆಳವಣಿಗೆ ಅಧಿಕಾರಿ ಶ್ವೇತಾಂಕ್ ದೀಕ್ಷಿತ್ ಮಾತನಾಡಿ, ಈ ಉಪಕ್ರಮವು ಯಶಸ್ವಿಯಾಗಿರುವುದಕ್ಕೆ ತಮ್ಮ ಸಂತಸ ವ್ಯಕ್ತಪಡಿಸಿದರು, ‘ಉತ್ಕೃಷ್ಟತೆಯ ಪ್ರಶಸ್ತಿ ಪ್ರದಾನದ ಮೂಲಕ ನಮ್ಮ ಪ್ರಯತ್ನವು ಹುಬ್ಬಳ್ಳಿಯಲ್ಲಿನ ‘ಎಂಎಸ್‌ಎಂಇ’ ಸಮುದಾಯವನ್ನು ಸಶಕ್ತಗೊಳಿಸುವುದು ಮತ್ತು ಬೆಂಬಲಿಸುವುದು ಆಗಿದೆ. ಉದ್ಯಮ ವಹಿವಾಟುಗಳನ್ನು ಬೆಂಬಲಿಸಲು ಮತ್ತು ವಿವಿಧ ಪ್ರದೇಶಗಳಲ್ಲಿನ ಉದ್ಯಮಿಗಳ ಕೊಡುಗೆಗಳನ್ನು ಗುರುತಿಸಲು ಈ ಉಪಕ್ರಮವು ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಇತರ ನಗರಗಳಿಗೆ ವಿಸ್ತರಣೆಯಾಗಲಿದೆ’ ಎಂದರು.

    Demo
    Share. Facebook Twitter LinkedIn Email WhatsApp

    Related Posts

    ಮಂಡ್ಯದ ಮದ್ದೂರು ಬಳಿ ಭೀಕರ ಅಪಘಾತ: ಇಬ್ಬರು ಸಾವು, ಹಲವರಿಗೆ ಗಾಯ

    June 8, 2025

    ನನ್ನ ಮಗ ಇಲ್ಲದೇ ಜೀವನ ಕಷ್ಟವಾಗಿದೆ, ಸೊಸೆಗೆ ಸರ್ಕಾರಿ ಕೆಲಸ ಕೊಡಿ: ಸರ್ಕಾರಕ್ಕೆ ರೇಣುಕಾಸ್ವಾಮಿ ತಾಯಿ ಮನವಿ!

    June 8, 2025

    ದುಷ್ಕರ್ಮಿಗಳಿಂದ ಭೀಕರ ಹತ್ಯೆಯಾಗಿದ್ದ ಸುಹಾಸ್ ಶೆಟ್ಟಿ​ ಕೊಲೆ ಕೇಸ್​ NIA ಹೆಗಲಿಗೆ!

    June 8, 2025

    ಆಲಮಟ್ಟಿ ಜಲಾಶಯ ಎತ್ತರಕ್ಕೆ ‘ಮಹಾ’ ಕ್ಯಾತೆ: ವಿಜಯಪುರ ರೈತರ ಪ್ರತಿತಂತ್ರ: ಹೋರಾಟಕ್ಕೆ ವೇದಿಕೆ ಸಿದ್ದ!

    June 8, 2025

    Dharavad: ಭವಿಷ್ಯದಲ್ಲಿ ಜಾಗತಿಕ ಉತ್ಪಾದನಾ ಹಬ್‌ ಆಗಲಿದೆ ಭಾರತ!

    June 8, 2025

    ಕಾಲ್ತುಳಿತ ಕೇಸ್: ನಿಷ್ಠಾವಂತ ಪೊಲೀಸ್ ಅಧಿಕಾರಿಗಳನ್ನ ಬಲಿಪಶು ಮಾಡಿದ ಸರ್ಕಾರ- ದತ್ತಮೂರ್ತಿ ಕುಲಕರ್ಣಿ!

    June 8, 2025

    ಕಾಲ್ತುಳಿತ ದುರಂತ ಕೇಸ್: ನಾಳೆ ರಾಯಚೂರಿನಲ್ಲಿ ನಡೆಯಬೇಕಿದ್ದ ಸಿಎಂ ಕಾರ್ಯಕ್ರಮ ದಿಢೀರ್ ರದ್ದು!

    June 8, 2025

    ರಾಮನಗರದಲ್ಲಿ ನೈತಿಕ ಪೊಲೀಸ್ ಗಿರಿ: ಬೈಕ್‌ನಲ್ಲಿ ಹೋಗ್ತಿದ್ದ ಹಿಂದೂ ಯುವಕ, ಅನ್ಯಕೋಮಿನ ಯುವತಿ ಅಡ್ಡಗಟ್ಟಿ ಬೆದರಿಕೆ!

    June 8, 2025

    ಒಂಟಿ ಮಹಿಳೆಯರೇ ಇವರ ಟಾರ್ಗೆಟ್: ಮೂವರು ಸರಗಳ್ಳರು ಅರೆಸ್ಟ್!

    June 8, 2025

    ಬಿತ್ತನೆಗೂ ಮುನ್ನ ಬೀಜೋಪಚಾರ ಮಾಡುವುದು ಸೂಕ್ತ: ಡಾ, ಸಂತೋಷ್ ಒಂಟಿ!

    June 8, 2025

    ಮಂಟಪದಲ್ಲೇ ಗಂಡನಿಗೆ ಚಪ್ಪಲಿ ಪೂಜೆ: ಸೈಲೆಂಟಾಗಿ 2ನೇ ಮದುವೆ ಆಗ್ತಿದ್ದವ ಹೆಂಡ್ತಿ ಕೈಗೆ ಸಿಕ್ಕಿಬಿದ್ದ!

    June 8, 2025

    ಬಸ್ ರಷ್ ಇದ್ರೂ ಬಸ್ ಹತ್ತೋ ಮಹಿಳೆಯರೇ ಈ ಸುದ್ದಿ ನೋಡಲೇಬೇಕು! ಇಂಥವರು ಇದ್ದಾರೆ ಹುಷಾರ್!

    June 8, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.