ಕಲಘಟಗಿ: ‘ಹಲವು ವರ್ಷಗಳಿಂದ ಅನಧಿಕೃತವಾಗಿ ವಾಸಿಸುತ್ತಿದ್ದವರಿಗೆ ಸರ್ಕಾರ ಇ-ಸ್ವತ್ತು ಮಾಡಿಸಿಕೊಟ್ಟಿದ್ದು, ಸಾವಿರಾರು ಕುಟುಂಬಗಳು ನೆಮ್ಮದಿ ಯಿಂದ ಬದುಕುತ್ತಿವೆ’ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಚಿನ್ನಸ್ವಾಮಿ ಕಾಲ್ತುಳಿತ ದುರಂತ: ಮೃತಪಟ್ಟ 11 ಮಂದಿಯ ವಿವರ ಇಲ್ಲಿದೆ !
ತಾಲ್ಲೂಕಿನ ತಾವರಗೇರಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಬುಧವಾರ ವಿವಿಧ ಯೋಜನೆಗಳ ಫಲಾನುಭವಿಗ-ಳಿಗೆ ಸೌಲಭ್ಯ ವಿತರಣೆ ಹಾಗೂ ವಾಲ್ಮೀಕಿ ಭವನ, ಯುವಕ ಮಂಡಳಗಳ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
‘ಜಿಲ್ಲೆಯಲ್ಲಿ ಸುಮಾರು 5 ಸಾವಿರ, ರಾಜ್ಯದಲ್ಲಿ ಒಂದೇ ಬಾರಿಗೆ 11 ಸಾವಿರ ಅನಧಿಕೃತ ಮನೆಗಳಿಗೆ ಅಧಿಕೃತ ಪಟ್ಟಾ ನೀಡಲಾಗಿದೆ. ಇದರಿಂದ ರೈತರು, ಬಡ
ಕಲಘಟಗಿ ತಾಲ್ಲೂಕಿನ ತಾವರಗೇರಿಯಲ್ಲಿ ಸಚಿವ ಸಂತೋಷ ಲಾಡ್ ಅವರು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಿದರು
ಕೂಲಿ ಕಾರ್ಮಿಕರಿಗೆ ಅನುಕೂಲವಾಗಿದೆ. ತಾವರಗೇರಿ ಗ್ರಾಮದಲ್ಲಿ 118 ಜನರಿಗೆ ಇ-ಸ್ವತ್ತು ನೀಡಲಾಗಿದ್ದು, ಇದರಿಂದ ಅವರು ಆಸ್ತಿಯ ಮೇಲೆ ಸಾಲ ಸೌಲಭ್ಯ ಪಡೆಯಬಹುದು’ ಎಂದರು.
ಗ್ರಾಮದ ಸಿದ್ದಾರೂಢ ಮಠದ ನಿರ್ಗುಣಾನಂದ ಸ್ವಾಮೀಜಿ ಸಾನ್ನಿಧ್ಯ
ವಹಿಸಿದ್ದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್. ಆರ್. ಪಾಟೀಲ, ತಹಶೀಲ್ದಾರ್ ಬಸವರಾಜ ಬೆಣ್ಣಿಶಿರೂರ, ತಾಲ್ಲೂಕು ಪಂಚಾಯಿತಿ 22 ಪರಶುರಾಮ ಸಾವಂತ, ಸಿಪಿಐ ಶ್ರೀಶೈಲ ಕೌಜಲಗಿ, ಪಿಡಿಒ ಪುಂಡಲೀಕ ಯಲ್ಲಾರಿ ಇದ್ದರು.
ಮಾರುತಿ ಲಮಾಣಿ AIN ನ್ಯೂಸ್ ಕಲಘಟಗಿ