Close Menu
Ain Live News
    Facebook X (Twitter) Instagram YouTube
    Thursday, June 19
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಆಕಾಶ್ ನಿಂದ ಕೆಸಿಇಟಿ ಪ್ಲಸ್ ಆರಂಭ: ಇಂಜಿನಿಯರಿಂಗ್ ಕಲಿಯಲು ಅನುಕೂಲ

    By Author AINFebruary 5, 2025
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ: ಇಂಜಿನಿಯರಿಂಗ್ ಕೋರ್ಸ್ ಆಕಾಂಕ್ಷಿಗಳಾದ ಪ್ರಥಮ ಹಾಗೂ ದ್ವೀತಿಯ ಪಿಯು ವಿದ್ಯಾರ್ಥಿಗಳಿಗಾಗಿ ಆಕಾಶ್ ಎಜುಕೇಶನಲ್ ಸರ್ವಿಸಸ್ ಲಿಮಿಟೆಡ್ (ಎಇಎಸ್ ಎಲ್) ವತಿಯಿಂದ ಕೆಸಿಇಟಿ ಪ್ಲಸ್‌ (ಕರ್ನಾಟಕ ಕಾಮನ್‌ ಎಂಟ್ರನ್ಸ್ ಟೆಸ್ಟ್) ನೂತನ ಕೋರ್ಸ್ ಪರಿಚಯಿಸಲಾಗಿದೆ.

    ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಆಕಾಶ್ ಸಂಸ್ಥೆಯ ಹಿರಿಯ ಸಹಾಯಕ ನಿರ್ದೇಶಕ ರಾಜೇಶ ಕೆ. ಅವರು, ಪರೀಕ್ಷೆ ತರಬೇತಿಯಲ್ಲಿ ಮುಂಚೂಣಿಯಲ್ಲಿರುವ ಆಕಾಶ್, ಜೆಇಇ ಮೇನ್ಸ್ ತರಬೇತಿಗೆ ಸಮನಾದ ತರಬೇತಿಯನ್ನು ಕೆಸಿಇಟಿ ಪ್ಲಸ್ ನಲ್ಲಿ ನೀಡಲಾಗುತ್ತದೆ. ಬಹಳಷ್ಟು ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ಪಡೆದು ಅಗತ್ಯ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಲಾಗಿದೆ ಎಂದರು.

    ಬೇವಿನ ನೀರಿನಿಂದ ಸ್ನಾನ ಮಾಡಿದರೆ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜಗಳಿದೆ ಗೊತ್ತಾ..?

    ಇಂಜಿನಿಯರಿಂಗ್ ಕಾಲೇಜುಗಳು ನಡೆಸುವ ಪ್ರಾದೇಶಿಕ ಪ್ರವೇಶ ಪರೀಕ್ಷೆಗಳು ಮತ್ತು ಜೆಇಇ (ಮೇನ್) ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಲು ಈ ತರಬೇತಿ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಪದವಿಪೂರ್ವ ಬೋರ್ಡ್ ಪರೀಕ್ಷೆಗಳು ಮುಗಿದ ನಂತರ ಈ ತರಬೇತಿ ಪ್ರಾರಂಭವಾಗುತ್ತವೆ ಎಂದು ಹೇಳಿದರು.

    10ನೇ ತರಗತಿಯಿಂದ 11ನೇ ತರಗತಿಗೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳಿಗಾಗಿ, 10ನೇ ತರಗತಿ ಬೋರ್ಡ್ ಪರೀಕ್ಷೆಗಳು ಮುಗಿದ ನಂತರ ಮಾರ್ಚ್ 2025ರಿಂದ ಮೇ 2025ರ ನಡುವೆ ಹಾಗೂ ಫಲಿತಾಂಶಗಳು ಘೋಷಣೆಯಾದ ನಂತರ ಜೂನ್- ಜುಲೈ 2025ರಲ್ಲಿ ಕೆಸಿಇಟಿ ಮತ್ತು ಜೆಇಇ (ಮೇನ್) 2027 (ಸಿಬಿಎಸ್‌ಇ/ ಪಿಯುಸಿ) ಪ್ರವೇಶ ಪರೀಕ್ಷೆಗಳಿಗಾಗಿ ಒಂದು ಹಾಗೂ ಎರಡು ವರ್ಷದ ಇಂಟಿಗ್ರೇಟೆಡ್ ತರಗತಿ ಕೋರ್ಸ್ ಗಳನ್ನು ಸಹ ನಡೆಸಲಾಗುತ್ತಿದೆ.

    ಸತತವಾಗಿ ಮೂರು ವರ್ಷಗಳ ಕಾಲ ಕೆಸಿಇಟಿನಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ರಾಜ್ಯದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವ ಹೆಗ್ಗಳಿಕೆಗೆ ಆಕಾಶ್ ಪಾತ್ರವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ನಡೆಸುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯು (ಕೆಸಿಇಟಿ) ಇಂಜಿನಿಯರಿಂಗ್, ತಂತ್ರಜ್ಞಾನ, ವಾಸ್ತುಶಿಲ್ಪ, ಬ್ಯಾಚಲರ್ ಆಫ್ ಯೋಗ -ನ್ಯಾಚುರೋಪತಿ (ಬಿಎನ್ ವೈಎಸ್), ಬಿ.ಎಸ್ಸಿ ನಸಿರ್‌ಂಗ್‌, ಬ್ಯಾಚಲ‌ರ್ ಆಫ್ ವೆರ್ಟನರಿ ಸೈನ್ಸ್ -ಆನಿಮಲ್ ಹಸ್ಟಂಡ್ರಿ (ಬಿವಿಎಸ್ಸಿ – ಎ ಎಚ್)ಕೋರ್ಸ್ ಗಳ ಪ್ರವೇಶಕ್ಕೆ ಇದು ಹೆದ್ದಾರಿಯಾಗಿದೆ.

    ಕೆಸಿಇಟಿ ಪ್ಲಸ್ ಪಠ್ಯಕ್ರಮವನ್ನು ಜೆಇಇ ಪಠ್ಯಗಳನ್ನು ಆಧರಿಸಿ ಸಿದ್ಧಪಡಿಸಲಾಗುವುದು. ಇಂಗ್ಲಿಷ್ ನಲ್ಲಿ ಅಧ್ಯಯನ ಸಾಮಗ್ರಿ ಒದಗಿಸಲಾಗುವುದು, ಎರಡು ವರ್ಷದ ಪಿಯು ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬ್ಯಾಚ್ ಗಳನ್ನು ಒದಗಿಸಲಾಗುವುದು ಎಂದು ಹೇಳಿದರು. ಏರಿಯಾ ಸೇಲ್ಸ್ ಹೆಡ್ ಅನಿಲಕುಮಾರ ಎಚ್‌, ಬ್ರಾಂಚ್ ಹೆಡ್‌ ಮಾರ್ತಾ ಎಂ, ಇದ್ದರು.

    Demo
    Share. Facebook Twitter LinkedIn Email WhatsApp

    Related Posts

    Ahmedabad plane crash: ನನಗೆ ತುಂಬಾ ವಿಷಾದವಿದೆ: ಕ್ಷಮೆಯಾಚಿಸಿದ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್!

    June 19, 2025

    ರಸ್ತೆಗೆ ವಾಲಿಕೊಂಡಿರುವ ವಿದ್ಯುತ್ ಕಂಬಗಳು: ಕೂಡಲೇ ಸರಿಪಡಿಸುವಂತೆ ಹೆಸ್ಕಾಂ ಅಧಿಕಾರಿಗೆ ಸೂಚನೆ

    June 19, 2025

    ಕೊನೆಗೂ ಇಸ್ರೇಲ್ ನಿಂದ ಕನ್ನಡಿಗರಿಗೆ ಮುಕ್ತಿ: ಬೆಂಗಳೂರು ಕಡೆ ಪ್ರಯಾಣ ಬೆಳೆಸಿದ ಬಿಪ್ಯಾಕ್ ನಿಯೋಗ!

    June 19, 2025

    ನಿಮ್ಮ ಮನೆಯ ಸೀಲಿಂಗ್ ಫ್ಯಾನ್ ಧೂಳುತುಂಬಿದ್ಯಾ? ಹಾಗಿದ್ರೆ, ಜಸ್ಟ್ ಹೀಗೆ ಕ್ಲೀನ್ ಮಾಡಿ​!

    June 19, 2025

    ಕರ್ನಾಟಕದಲ್ಲಿ ಜೂನ್ 23ರವರೆಗೂ ಭಾರಿ ಮಳೆ: ಕರಾವಳಿಗೆ ರೆಡ್ ಅಲರ್ಟ್ ಘೋಷಣೆ!

    June 19, 2025

    ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮಹಾ ಎಡವಟ್ಟು: ಸತ್ತ ಶಿಶುವನ್ನು 8 ದಿನವಾದ್ರೂ ತಾಯಿಗೆ ತೋರಿಸದ ವೈದ್ಯರು!

    June 18, 2025

    ಕೌಟುಂಬಿಕ ಕಲಹ: ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ಮಹಿಳೆ!

    June 18, 2025

    ಮಲೆ ಮಹದೇಶ್ಚರ ಕೋಟಿ ಒಡೆಯ: 2.65 ಕೋಟಿ ಕಾಣಿಕೆ ಸಂಗ್ರಹ!

    June 18, 2025

    ಹುಡುಗಿ ವಿಚಾರಕ್ಕೆ ಕಿರಿಕ್: ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ಯಾಂಗ್! Video Viral

    June 18, 2025

    ಚಾಮರಾಜನಗರ ಆಕ್ಸಿಜನ್ ದುರಂತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ!

    June 18, 2025

    ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ವರ್ಗಾವಣೆ: ಜಿಲ್ಲಾಡಳಿತದಿಂದ ಬೀಳ್ಕೊಡುಗೆ!

    June 18, 2025

    Mobile Charging: ನಿಮ್ಮ ಫೋನ್​ ಚಾರ್ಜ್​ ಬೇಗ ಖಾಲಿಯಾಗುತ್ತಾ? ಈ ಟಿಪ್ಸ್​ ಫಾಲೋ ಮಾಡಿ!

    June 18, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.