ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಮಾಜಿ ಬಿಗ್ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಇಂದು ರಿಲೀಸ್ ಆಗಲಿದ್ದಾರೆ. ಇವರು ಗೆಳೆಯರು ಜಾಮೀನ ಮೇಲೆ ಹೊರಬಂದಿದ್ದಾರೆ. ಜೈಲಿನಿಂದ ಹೊರಬಂದ ಬಳಿಕ ವಿನಯ್ ಗೌಡ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಒಂದು ಮಚ್ಚಿನ ಕಥೆ ಬಗ್ಗೆ ವಿನಯ್ ಮಾತು
“ಎಲ್ಲರಿಗೂ ನಮಸ್ಕಾರ. ಇಡೀ ನಾಡಿನ ಜನತೆ, ನನ್ನ ಅಭಿಮಾನಿಗಳು, ಸ್ನೇಹಿತರಿಗೆ ಕ್ಷಮೆ ಕೇಳುತ್ತೇನೆ. ನೀವು ಒಂದು ಮಚ್ಚಿನ ಕತೆಯನ್ನು ನೋಡುತ್ತಿದ್ದೀರಿ. ನಾವು ಮಚ್ಚು ಹಿಡಿದು ರೀಲ್ಸ್ ಮಾಡಿದ್ದೆವು. ಇದರಿಂದ ತುಂಬ ಜನರಿಗೆ ಸಮಸ್ಯೆ ಆಗಿದೆ. ನಮ್ಮನ್ನು ಹೊರಗಡೆ ಕರೆದುಕೊಂಡು ಬರಲು ನನ್ನ ಕುಟುಂಬ, ಸ್ನೇಹಿತರು ಒದ್ದಾಡಿದ್ದಾರೆ. ಪೊಲೀಸ್ ಠಾಣೆ, ಕೋರ್ಟ್, ಕೇಂದ್ರ ಕಾರಾಗೃಹ ಎಂದು ಹಗಲು-ರಾತ್ರಿ ಓಡಾಡಿದ್ದಾರೆ. ರಜತ್ಗೆ ಕೊಟ್ಟಿದ್ದ ಪ್ರಾಪರ್ಟಿ ಅದಾಗಿತ್ತು, ನಾನು ತಗೊಂದು 18 ಸೆಕೆಂಡ್ ರೀಲ್ಸ್ ಮಾಡಿದ್ದೇನೆ. ಪೊಲೀಸರು ಸಾಮಾನ್ಯ ಪ್ರಜೆ ರೀತಿ ತಮಗೂ ತನಿಖೆ ಮಾಡಿದ್ದಾರೆ. ಅರಿವಿಲ್ಲದೇ ಆಗಿರುವ ತಪ್ಪಿಗೆ ಕ್ಷಮೆ ಇರಲಿದೆ. ನಿಮ್ಮ ಪ್ರೀತಿ ವಿಶ್ವಾಸ ಸದಾ ಇರಲಿ” ಎಂದು ವಿನಯ್ ಗೌಡ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಕಿಚ್ಚನಿಗೆ ಸ್ಪೆಷಲ್ ಥ್ಯಾಂಕ್ಸ್ ಎಂದ ವಿನಯ್
ಎಲ್ಲಾ ತೊಂದರೆಗಳಿಗೆ ಕ್ಷಮಿಸಿ ಮತ್ತು… ನನ್ನ ಮತ್ತು ನನ್ನ ಕುಟುಂಬದವರ ಜೊತೆ ನಿಂತು ಇಂತಹ ಬಿಕ್ಕಟ್ಟಿನ ಸಮಯದಲ್ಲಿ ನಮ್ಮನ್ನು ಬೆಂಬಲಿಸಿದ್ದಕ್ಕಾಗಿ ನನ್ನ ಬಿಗ್ ಬ್ರದರ್, ನನ್ನ ಹಿತೈಷಿ, ನನ್ನ ಗಾಡ್ ಫಾದರ್ ಸರ್ ಅವರಿಗೆ ವಿಶೇಷ ಧನ್ಯವಾದಗಳು.. ಇದನ್ನು ಕೊನೆಯವರೆಗೂ ಮತ್ತು ನಂತರವೂ ನೆನಪಿನಲ್ಲಿಟ್ಟುಕೊಳ್ಳುತ್ತೇನೆ ಸರ್ ಎಂದು ಕಿಚ್ಚ ಸುದೀಪ್ ಗೆ ಟ್ಯಾಗ್ ಮಾಡಿದ್ದಾರೆ.
ರೀಲ್ಸ್ ಮಾಡುವ ವೇಳೆ ಬಿಗ್ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಕಿಶನ್ ಮಚ್ಚು ಹಿಡಿದುಕೊಂಡು ವಿಡಿಯೋ ಶೂಟ್ ಮಾಡಿದ್ದರು. ಹೀಗಾಗಿ ಈ ಇಬ್ಬರ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯಡಿ FIR ದಾಖಲಾಗಿತ್ತು. ಬಳಿಕ ವಿಚಾರಣೆಗೆ ಬರುವಂತೆ ಪೊಲೀಸರು ಸೂಚನೆ ಕೊಟ್ಟಿದ್ದರು. ಆದ್ರೆ, ವಿನಯ್ ಗೌಡ ಹಾಗೂ ರಜತ್ ಕಿಶನ್ ಫೈಬರ್ ಮಚ್ಚು ನೀಡಿ ಯಾಮಾರಿಸಿದ್ದರು. ಹೀಗಾಗಿ ಪೊಲೀಸರು ಆ ರಿಯಲ್ ಮಚ್ಚಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಮಧ್ಯೆ ಆರೋಪಿಗಳು ಜಾಮೀನು ಪಡೆದುಕೊಂಡಿದ್ದಾರೆ.