ಬೆಂಗಳೂರು:- ಮನೆ ಮುಂದೆ ಕಾರು ನಿಲ್ಲಿಸುವ ವಿಚಾರಕ್ಕೆ ಗಲಾಟೆ ನಡೆದು ಪ್ರಶ್ನೆ ಮಾಡಿದ ವೈದ್ಯೆಯನ್ನ ತಳ್ಳಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ.
ಕರ್ನಾಟಕದಲ್ಲಿ ನಾಳೆಯಿಂದ ಜೋರು ಮಳೆ ಸಾಧ್ಯತೆ: ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ!
ಜೂನ್ 5ರಂದು ನಡೆದ ಘಟನೆ ಇದಾಗಿದ್ದು, ಗಲಾಟೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.. ಘಟನೆ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೈದ್ಯೆ ಆಶಾ ಮನೆ ಮುಂದೆ ಆರೋಪಿ ರಘು ಕಾರು ನಿಲ್ಲಿಸಿದ್ದ. ಕಾರು ನಿಲ್ಲಿಸಿದ್ದರಿಂದ ಆಶಾ ಮನೆಯವರಿಗೆ ಓಡಾಡಲು ತೊಂದರೆ ಆಗಿದೆ.
ಹೀಗಾಗಿ ರಘು ಬಳಿ ಪ್ರಶ್ನಿಸಿದಾಗ ವೈದ್ಯೆ ತಳ್ಳಿ ಗಲಾಟೆ ಮಾಡಿದ್ದಾನೆ. ತಳ್ಳಿದಾಗ ಸೂರ್ಯ ಎಂಬಾತ ವೈದ್ಯಯ ಹಿಡಿದು ಬೀಳುವುದನ್ನ ತಪ್ಪಿಸುತ್ತಾರೆ. ಆಗ ರಘು ಸಹಾಯ ಮಾಡಿದ್ದ ಸೂರ್ಯನನ್ನು ತಳ್ಳಿ ನಿಂದಿಸಿದ್ದಾನೆ. ರಘು ಹಾಗೂ ಆತನ ಕುಟುಂಬಸ್ಥರು ವೈದ್ಯೆ ಆಶಾಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಕೇಳಿ ಬಂದಿದೆ.
ವೈದ್ಯ ಆಶಾ ನೀಡಿದ ದೂರಿನ ಅನ್ವಯ ಚಂದ್ರಲೇಔಟ್ ಠಾಣೆಯಲ್ಲಿ ರಘು ಹಾಗೂ ಆತನ ಸಹೋದರ ಮತ್ತು ಅಪ್ಪ ಅಮ್ಮ ವಿರುದ್ಧ ದೂರು ದಾಖಲಾಗಿದೆ.