Close Menu
Ain Live News
    Facebook X (Twitter) Instagram YouTube
    Friday, June 13
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ವಿಮಾನದಲ್ಲಿ ಪ್ರಯಾಣಿಸೋ ಮುನ್ನ ಇದು ತಿಳಿದಿರಲಿ: ಈ ಸೀಟಲ್ಲಿ ಕೂರೋದು ಸೇಫ್!

    By AIN AuthorJune 13, 2025
    Share
    Facebook Twitter LinkedIn Pinterest Email
    Demo

    ನಾನು ವಿದೇಶಕ್ಕೆ ಹೋಗಲೇಬೇಕು, ವಿಮಾನ ಹತ್ತಲೇಬೇಕು ಎಂಬುದು ದೇಶದ ಪ್ರತಿಯೊಬ್ಬ ಪ್ರಜೆಯ ಕನಸು. ಅದರಲ್ಲೂ ನಾವು ಫಾರೀನ್​ಗೆ ಹಾರಬೇಕು ಎಂದರೆ ವಿಮಾನಗಳನ್ನು ಆಶ್ರಯಿಸಲೇಬೇಕು. ಎಷ್ಟು ದುಬಾರಿಯಾದ್ರೂ ಪರ್ವಾಗಿಲ್ಲ ನಾನು ವಿಮಾನದಲ್ಲೇ ಹೋಗುತ್ತೇನೆ ಎನ್ನುವವರೇ ಹೆಚ್ಚು. ಕೇವಲ ಶ್ರೀಮಂತರು ಮಾತ್ರವಲ್ಲ ಬಡ ಮಧ್ಯಮ ವರ್ಗದ ಜನ ಕೂಡ ವಿಮಾನದಲ್ಲಿ ಹಾರಾಡಬೇಕು ಎಂದು ಕನಸು ಕಾಣುತ್ತಾರೆ. ಅದರಲ್ಲೂ ವಿಮಾನದ ಕಿಟಕಿ ಬದಿ ಕೂತು ಆಕಾಶದಲ್ಲಿ ಹಾರಾಡುತ್ತಾ ಪ್ರತಿಕ್ಷಣ ಆನಂದಿಸಬೇಕು, ಎದುರಾಗೋ ಒಂದೊಂದು ರೋಮಾಂಚಕ ದೃಶ್ಯ ಕಣ್ತುಂಬಿಸಿಕೊಳ್ಳಬೇಕು ಎಂಬ ಆಸೆ ಎಲ್ಲರದ್ದು.

    ಬಿಳಿ ಕೂದಲು ಕಪ್ಪಾಗಬೇಕಾ!? ದುಬಾರಿ Product ಗೆ ಹೇಳಿ ಟಾಟ… ಜಸ್ಟ್, ಎರಡು ಚಮಚ ಕಾಫಿ ಪುಡಿ ಸಾಕು!

    ಗುರುವಾರ ನಡೆದ ಅಹಮದಾಬಾದ್ ವಿಮಾನ ದುರಂತದ ಬಳಿಕ ಸಾಮಾನ್ಯವಾಗಿ ಪ್ರಯಾಣಿಕರಲ್ಲಿ ಒಂದು ಆತಂಕದ ಪ್ರಶ್ನೆ ಮೂಡಿದೆ. ವಿಮಾನದ ಯಾವ ಸೀಟಲ್ಲಿ ಕೂಳಿತರೆ ಸೇಫ್‌, ಒಂದು ವೇಳೆ ಅಪಘಾತ ಸಂಭವಿಸಿತು ಎಂದಾದರೆ ಯಾವ ಸೀಟಲ್ಲಿ ಕುಳಿತ್ರೆ ಪ್ರಾಣಾಪಾಯದಿಂದ ಪಾರಾಗ್ಬೋದು ಎಂಬ ಪ್ರಶ್ನೆ ಹಲವರಲ್ಲಿ ಮೂಡಿರುತ್ತೆ ಅಲ್ವಾ. ಹಾಗಿದ್ರೆ ಫ್ಲೈಟಲ್ಲಿ ಯಾವ ಸೀಟ್‌ ತುಂಬಾನೇ ಸೇಫ್‌ ಅನ್ನೋದನ್ನು ತಿಳಿಯಿರಿ.

    ಫೆಡರಲ್‌ ಏವಿಯೇಷನ್‌ ಅಡ್ಮಿನಿಸ್ಟ್ರೇಷನ್‌ ನೀಡಿದ ಮಾಹಿತಿಯ ಪ್ರಕಾರ ವಿಮಾನ ಮುಂಭಾಗದಲ್ಲಿ ಕುಳಿತುಕೊಳ್ಳುವುದಕ್ಕಿಂತೂ ವಿಮಾನದ ಹಿಂಭಾಗದಲ್ಲಿ ಕುಳಿತುಕೊಳ್ಳುವುದು ಹೆಚ್ಚು ಸೇಫ್.‌ ಏನಾದ್ರೂ ಅಪಘಾತ ಸಂಭವಿಸಿದರೆ ಮುಂಭಾಗಕ್ಕಿಂತ ಹಿಂಬದಿಯಲ್ಲಿ ಕುಳಿತರೆ ಬದುಕುವ ಸಾಧ್ಯತೆ ಹೆಚ್ಚು ಎಂದು ಈ ವರದಿ ತಿಳಿಸಿದೆ.

    ವಿಮಾನದ ರೆಕ್ಕೆಯ ಬಳಿ ಇರುವ ಸೀಟ್‌ಗಳು ತುರ್ತು ನಿರ್ಗಮನಗಳನ್ನು ಹೊಂದಿರುತ್ತವೆ. ಈ ಸೀಟ್‌ಗಳಲ್ಲಿ ಕೂರುವುದು ಕೂಡಾ ತುಂಬಾನೇ ಸೇಫ್.‌ ಹೌದು ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಇಲ್ಲಿಂದ ಹೊರಬರುವುದು ತುಂಬಾನೇ ಸುಲಭ. ಮಧ್ಯದ ಸೀಟುಗಳು ಕೂಡಾ ತುಂಬಾನೇ ಸುಕ್ಷಿತವಾಗಿದೆ. ಒಂದು ವೇಳೆ ವಿಮಾನದಲ್ಲಿ ಅಪಘಾತ ಸಂಭವಿಸಿದಾಗ, ಮಧ್ಯದ ಸೀಟಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಎರಡೂ ಬದಿಗಳಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರ ಬೆಂಬಲವಿರುತ್ತದೆ. ಇದರಿಂದಾಗಿ, ಅವರ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ.

    ಬಿಳಿ ಕೂದಲು ಕಪ್ಪಾಗಬೇಕಾ!? ದುಬಾರಿ Product ಗೆ ಹೇಳಿ ಟಾಟ… ಜಸ್ಟ್, ಎರಡು ಚಮಚ ಕಾಫಿ ಪುಡಿ ಸಾಕು!

    ವಿಂಗ್ ಸೀಟುಗಳು ತುರ್ತು ದ್ವಾರಕ್ಕೆ ಹತ್ತಿರದಲ್ಲಿವೆ, ಇದರಿಂದಾಗಿ ಇಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರು ತುರ್ತು ಸಂದರ್ಭದಲ್ಲಿ ಬದುಕುಳಿಯುವ ಹೆಚ್ಚಿನ ಅವಕಾಶವನ್ನು ಹೊಂದಿರುತ್ತಾರೆ. ಇನ್ನೂ ನಿರ್ಗಮನ ಸಾಲಿನಲ್ಲಿರುವ ಆಸನಗಳನ್ನು ಸಹ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ತುರ್ತು ಲ್ಯಾಂಡಿಂಗ್ ಅಥವಾ ಯಾವುದೇ ತುರ್ತು ಸಂದರ್ಭದಲ್ಲಿ, ಈ ಸಾಲಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರು ಬದುಕುಳಿಯುವ ಹೆಚ್ಚಿನ ಅವಕಾಶವನ್ನು ಹೊಂದಿರುತ್ತಾರೆ. ಆದರೆ ಕಿಟಕಿ ಪಕ್ಕದ ಸೀಟನ್ನು ಯಾವುದೇ ರೀತಿಯಲ್ಲಿ ಸುರಕ್ಷಿತವೆಂದು ಪರಿಗಣಿಸಲಾಗುವುದಿಲ್ಲ, ಏಕೆಂದರೆ ಅಪಘಾತ ಸಂಭವಿಸಿದಾಗ ಅಲ್ಲಿ ತಪ್ಪಿಸಿಕೊಳ್ಳುವ ಅವಕಾಶ ಕಡಿಮೆಯಿರುತ್ತದೆ.

    ಕೆಲವು ಅಧ್ಯಯನಗಳು ವಿಮಾನದಲ್ಲಿ ಮಧ್ಯದ ಸೀಟು ಮತ್ತು ಹಿಂದಿನ ಸೀಟುಗಳನ್ನು ಸುರಕ್ಷಿತವೆಂದು ಕಂಡುಕೊಂಡಿವೆ. ವಿಮಾನದ ಹಿಂಭಾಗದ ಮೂರನೇ ಸ್ಥಾನದಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರ ಆಸನಗಳು ಸುರಕ್ಷಿತವಾಗಿವೆ ಮತ್ತು ಇಲ್ಲಿ ಕುಳಿತಿರುವವರು ಅಪಘಾತಗಳು ಸಂಭವಿಸಿದಾಗ ಬದುಕುಳಿಯುವ ಸಾಧ್ಯತೆಗಳು ಹೆಚ್ಚು ಎಂದು ಹೇಳಲಾಗುತ್ತದೆ. ವಿಮಾನ ಅಪಘಾತಕ್ಕೀಡಾದಾಗ, ವಿಮಾನದ ಮುಂಭಾಗಕ್ಕೆ ಹೆಚ್ಚು ಪರಿಣಾಮ ಬೀರುತ್ತದೆ. ಇಲ್ಲಿ ಕುಳಿತುಕೊಳ್ಳುವ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ.

    ಅಧ್ಯಯನಗಳು ಕಂಡುಕೊಂಡ ಅಂಶಗಳ ಪ್ರಕಾರ ವಿಮಾನ ಹಿಂಭಾಗದಲ್ಲಿ ಕುಳಿತವರು ಬದುಕುಳಿಯುವ ಸಾಧ್ಯತೆ ಹೆಚ್ಚು ಸುಮಾರು 69%, ಮಧ್ಯದಲ್ಲಿ ಅಥವಾ ವಿಮಾನದ ರೆಕ್ಕೆಗಳ ಭಾಗದಲ್ಲಿ ಕುಳಿತಿರುವ ಪ್ರಯಾಣಿಕರು ಬದುಕುಳಿಯುವ ಸಾಧ್ಯತೆ 59% ಇರುತ್ತದೆ ಮತ್ತು ಮುಂಭಾಗದಲ್ಲಿ ಕುಳಿತಿರುವ ಪ್ರಯಾಣಿಕರು ಬದುಕುಳಿಯುವ ಸಾಧ್ಯತೆ ಕೇವಲ 49% ಮಾತ್ರ.

    ಇದರರ್ಥ ಅಪಘಾತ ಸಂಭವಿಸಿದಾಗ, ಹಿಂದಿನ ಸೀಟಿನಲ್ಲಿ ಕುಳಿತಿರುವ ಪ್ರಯಾಣಿಕರು ಬದುಕುಳಿಯುವ ಸಾಧ್ಯತೆ ಹೆಚ್ಚು. ಆದಾಗ್ಯೂ, ವಿಮಾನ ಅಪಘಾತದ ನಂತರ ಬದುಕುಳಿಯುವ ಸಾಧ್ಯತೆಗಳು ಅಪಘಾತದ ಪ್ರಕಾರ, ಪ್ರಮಾಣವನ್ನು ಅವಲಂಬಿಸಿರುತ್ತದೆ ಎಂದು ಅಧ್ಯಯನಗಳು ಹೇಳಿವೆ.

    Demo
    Share. Facebook Twitter LinkedIn Email WhatsApp

    Related Posts

    ನಕ್ಕರೆ ಡಿಂಪಲ್ ಬೀಳುತ್ತಾ!? ಇದು ಅದೃಷ್ಟ ಅಲ್ಲ ಮರ್ರೆ.. ಇದು ಆರೋಗ್ಯ ಸಮಸ್ಯೆ ಅಂತೆ!

    June 13, 2025

    ಬಿಳಿ ಕೂದಲು ಕಪ್ಪಾಗಬೇಕಾ!? ದುಬಾರಿ Product ಗೆ ಹೇಳಿ ಟಾಟ… ಜಸ್ಟ್, ಎರಡು ಚಮಚ ಕಾಫಿ ಪುಡಿ ಸಾಕು!

    June 13, 2025

    ತುಂಬಾ ಹತ್ತಿರದಿಂದ ಕೂತು ಟಿವಿ ನೋಡ್ತೀರಾ? ಇದು ಡೇಂಜರ್.. ಈ ಬಗ್ಗೆ ನೀವು ತಿಳಿದುಕೊಳ್ಳಬೇಕು!

    June 13, 2025

    ಅಹಮದಾಬಾದ್’ನಲ್ಲಿ ನಡೆದ ದುರಂತ ಭಾರತದ ಇತಿಹಾಸದಲ್ಲೇ ಅತಿ ದೊಡ್ಡದು: ಸಿಎಂ ಇಬ್ರಾಹಿಂ

    June 13, 2025

    ನಾವು ಆ ಮೂರು ದೇಶಗಳ ವಿದೇಶಾಂಗ ಸಚಿವರೊಂದಿಗೆ ಸಂಪರ್ಕದಲ್ಲಿದ್ದೇವೆ: ಜೈಶಂಕರ್

    June 13, 2025

    ವಿಮಾನ ದುರಂತದ ಬಗ್ಗೆ ಭಯಾನಕ ಭವಿಷ್ಯ ನುಡಿದಿತ್ತಾ ಆ ಪತ್ರಿಕೆ? ವೈರಲ್‌ ಫೋಟೋ ಹಿಂದಿದೆ ರೋಚಕ ಕಥೆ!

    June 13, 2025

    ಅಧಿಕಾರಿ-ನೌಕರರಿಗೆ ಕ್ರೀಡಾ ಕೂಟ ಆಯೋಜಿಸುವುದರಿಂದ ಉತ್ತಮ ಬಾಂಧವ್ಯ ಬೆಳೆಯಲಿದೆ: ಮಹೇಶ್ವರ್ ರಾವ್

    June 13, 2025

    ಅರ್ಜುನ್‌ ಜನ್ಯ ಹೊಸ ಸಾಹಸ: ́45́ ಚಿತ್ರಕ್ಕಾಗಿ ಉಗಾಂಡದಿಂದ ಬಂದಿದ್ಯಾರು?

    June 13, 2025

    Aloe Vera Juice: ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿದರೆ ಎಷ್ಟೆಲ್ಲಾ ಲಾಭ ಗೊತ್ತಾ..?

    June 13, 2025

    Air India Flight Crash: ಮರದ ಕೆಳಗೆ ಮಲಗಿದ್ದ 14 ವರ್ಷದ ಬಾಲಕ ಸಾವು..!

    June 13, 2025

    ವಿಮಾನ ದುರಂತದಲ್ಲಿ ನರ್ಸ್ ಸಾವು: ಉಪ ತಹಶೀಲ್ದಾರ್ ಅಮಾನತು – ಯಾಕೆ ಗೊತ್ತಾ..?

    June 13, 2025

    ಇದೊಂದು ಬ್ಯುಸಿನೆಸ್, ಮಾರ್ಕೆಟಿಂಗ್ ಹೆಚ್ಚು ಮಾಡಲು ನಟಿ ತಮನ್ನಾ ಆಯ್ಕೆ – ಎಂ.ಬಿ ಪಾಟೀಲ್

    June 13, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.