ಮಂಡ್ಯ: ಭದ್ರತೆಗಾಗಿ ಸರ್ಕಾರ ಕೋಟಿ ಕೋಟಿ ಖರ್ಚು ಮಾಡಿದ್ರು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್ ಡ್ಯಾಂನಲ್ಲಿ ಅಭದ್ರತೆ ಎದ್ದು ಕಾಣುತ್ತಿದೆ. ಯಾಕಂದ್ರೆ ಕೆ.ಆರ್.ಎಸ್ ಡ್ಯಾಂ ಗೆ ಕೈಗಾರಿಕಾ ಪಡೆಯ ಭದ್ರತೆ ಇದ್ರು ಯುವಕರ ತಂಡ ಒಳ ನುಸಳಿದ್ದಾರೆ.
ನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಎರಡೇ ಎರಡು ‘ನೆನೆಸಿಟ್ಟ ಬಾದಾಮಿ’ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?
ಒಳ ನುಸಳಿದ ಯುವಕರ ತಂಡ ಕ್ರೆಸ್ಟ್ ಗೇಟ್ ಕೆಳಗಿನ ಪ್ರದೇಶದಲ್ಲಿ ಓಡಾಡಿದ್ದಾರೆ. ಜೊತೆಗೆ ಲೈವ್ ವಿಡಿಯೋದೊಂದಿಗೆ ಕೆ.ಆರ್.ಎಸ್ ಡ್ಯಾಂ ನ ವರ್ಣನೆ ಮಾಡಿದ್ದಾರೆ. ಇದರಿಂದ ಯುವಕರ ಪುಂಡಾಟಕ್ಕೆ ಬ್ರೇಕ್ ಹಾಕಲು ವಿಫಲವಾಯ್ತಾ ಭದ್ರತಾ ಪಡೆ ಎಂಬ ಅನುಮಾನ ಕಾಡತೊಡಗಿದೆ.
ಯುವಕರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭದ್ರತಾ ವೈಫಲ್ಯದ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.