ಕುಂದಗೋಳ: ತಾಲೂಕಿನ ಗುಡೇನಕಟ್ಟಿ ಗ್ರಾಮದ ಶ್ರೀ 1೦೦೮ ಶಾಂತಿನಾಥ್ ದಿಗಂಬರ್ ಜೈನ ಮಂದಿರದಲ್ಲಿ ಭಗವಾನ್ ಮಹಾವೀರ್ ಜಯಂತಿಯ ನಿಮಿತ್ಯವಾಗಿ ಬೆಳಗ್ಗೆ ಮಹಾವೀರ ತೀರ್ಥಂಕರರಿಗೆ ಪಂಚಾಮೃತ ಅಭಿಷೇಕ ಮಾಡಲಾಯಿತು ನಂತರ ಮಹಿಳೆಯರಿಂದ ಭಗವಾನ್ ಮಹಾವೀರ್ ತೀರ್ಥಂಕರರನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡಲಾಯಿತು
RCB Vs DC: ಕನ್ನಡಿಗನ ಆರ್ಭಟಕ್ಕೆ ತತ್ತರಿಸಿದ ಬೆಂಗಳೂರು: ತವರಲ್ಲಿ ಹೀನಾಯವಾಗಿ ಸೋತ ಆರ್ ಸಿಬಿ!
ನಂತರ ಧರ್ಮ ಸಭೆಯಲ್ಲಿ ಶಾಸಕರಾದ ಎಂ ಆರ್ ಪಾಟೀಲ್ ಮಾತನಾಡಿ ಜೈನ ಧರ್ಮದ ತತ್ವ ಅದರ ಸಿದ್ದಾಂತಗಳನ್ನು ಸಿದ್ಧಾಂತಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸುಖ ಶಾಂತಿ ಸಮೃದ್ಧಿ ಸಿಗಲು ಸಾಧ್ಯವಿದೆ ಭಗವಾನ್ ಮಹಾವೀರರು ಅಹಿಂಸ ತತ್ವವನ್ನು ಜಗತ್ತಿಗೆ ಸಾರಿರುವಂತ ಮಹಾನ್ ಪುರುಷರು ಇಂತಹ ಧರ್ಮದ ಕಾರ್ಯಕ್ಕೆ ನಾನು ಬಂದಿದ್ದು ನನ್ನ ಪೂರ್ವ ಜನ್ಮದ ಪುಣ್ಯವಾಗಿದೆ ಎಂದರು
ಇದೇ ಸಂದರ್ಭದಲ್ಲಿ ಭಗವಾನ್ ಮಹಾವೀರ ತೀರ್ಥಂಕರರ ಭಾವಚಿತ್ರವನ್ನು ಸಕಲ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು ಬಂದಂತ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಶಾಸಕರನ್ನು ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಲತೇಶ್ ಶಾಘೋಟಿ ಸಮಿತಿಯ ಅಧ್ಯಕ್ಷರಾದ ಬಾಹುಬಲಿ ಮಲ್ಲಿಗವಾಡ, ಬಸಪ್ಪ ಯೋಗಪ್ಪನವರ್, ಬಾಹುಬಲಿ ಯೋಗಪ್ಪನವರ್, ಬಸವರಾಜ್ ಯೋಗಪ್ಪನವರ್, ಪಾರಿಶನಾಥ ಮಲ್ಲಿಗವಾಡ, ಜೈಪಾಲ್ ಯೋಗಪ್ಪನವರ್, ಅಶೋಕ್ ಯೋಗಪ್ಪನವರ್, ರಾಜು ಮಲ್ಲಿಗವಾಡ, ರವಿ ಯೋಗಪ್ಪನವರ್, ಸಂತೋಷ್ ನಾಗರಹಳ್ಳಿ, ವರ್ಧಮನ್ ದೊಡ್ಡಮನಿ, ಸೇರಿದಂತೆ ಜೈನ ಧರ್ಮದ ಎಲ್ಲ ಶ್ರಾವಕ ಶ್ರಾವಕಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.