ಕುಂದಗೋಳ: ಪಟ್ಟಣದ ವ್ಯಾಪ್ತಿಯು ಸ್ವಚ್ಚಂದವಾಗಿರಲೂ ಕೇಂದ್ರ ಸರ್ಕಾರದ ಕನಸಿನ ಮಹತ್ವಾಕಾಂಕ್ಷಿ ಯೋಜನೆಯು ಇಂದು ಸಾಕಾರಗೊಳ್ಳುತ್ತೀದೆ ಎಂದು ಶಾಸಕ ಎಮ್.ಆರ್.ಪಾಟೀಲ್ ಹೇಳಿದರು.
ಅವರು ಪಟ್ಟಣದ ಹೊರವಲಯದ ಕಡಪಟ್ಟಿ-ಅಲ್ಲಾಪೂರ ರಸ್ತೆಯ ಕಸ ವಿಲೇವಾರಿ ಘಟಕದಲ್ಲಿ ಸ್ವಚ್ಚ ಭಾರತ ಯೋಜನೆಯ ಕಾಮಗಾರಿಯ ಅಂದಾಜು 159 ಲಕ್ಷ ರೂ. ಮೊತ್ತದ ಮಲ ತ್ಯಾಜ್ಯ ಸಂಸ್ಕರಣಾ(ಎಫ್.ಎಸ್.ಟಿ.ಪಿ) ಘಟಕದ ಭೂಮಿ ಪೂಜೆ ನೆರವೇರಿಸಿ ಮಾತನಾಡಿ,ಕಾಮಗಾರಿಯೂ ಕೆಲವೇ ದಿನಗಳಲ್ಲಿ ಪ್ರಾರಂಭವಾಗಿ ಕಾರ್ಯರೂಪಕ್ಕೆ ಬರುವುದಲ್ಲದೇ ಈ ಯೋಜನೆಯ ಯಶಸ್ವಿಗೆ ಪಟ್ಟಣದ ಜನತೆಯ ಸಹಕಾರವು ಅಷ್ಟೇ ಅತ್ಯಮೂಲ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಶ್ಯಾಮ್ ಸುಂದರ್ ದೇಸಾಯಿ, ಉಪಾಧ್ಯಕ್ಷ ಮಂಜುನಾಥ್ ಹಿರೇಮಠ,ಪ.ಪಂ.ಮುಖ್ಯಾಧಿಕಾರಿ ಸಿ.ವಿ.ಕುಲಕರ್ಣಿ, ಉಮೇಶ್ ಹೆಬಸೂರ,ಮಹಾಂತೇಶ ಶ್ಯಾಗೋಟಿ, ನಾಗನಗೌಡ ಸಾತ್ಮಾರ,ಬಿ.ಟಿ.ಗಂಗಾಯಿ,ವಾಗೇಶ್ ಗಂಗಾಯಿ,ವಾಗೇಶ್ ಮಣಕಟ್ಟಿಮಠ,ಗಣೇಶ ಕೊಕಾಟೆ, ನಾಗರಾಜ ಸುಬರಗಟ್ಟಿ, ಸತೀಶ್ ಪಾಟೀಲ್,ಶಂಕರ ಪಲ್ಲೇದ, ಪ್ರವೀಣ್ ಬಡ್ನಿ, ಶ್ರೀಕಾಂತಗೌಡ ಹೊಸಮನಿ ಸೇರಿದಂತೆ ಇತರರಿದ್ದರು.