ಹುಬ್ಬಳ್ಳಿ: L&T ಅಧಿಕಾರಿಗಳ ಎಡುವಟ್ಟಿನಿಂದ ಕಾರ್ಮಿಕರಿಬ್ಬರಲ್ಲಿ ಒಬ್ಬ ಸಾವನ್ನಪ್ಪಿದ್ದು, ಇನ್ನೊಬ್ಬನ ಸ್ಥಿತಿ ಗಂಭೀರವಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
IPL 2025: ಈ ಸಲ ಕಪ್ ನಮ್ದೇ: RCB ತಂಡಕ್ಕೆ ಶುಭ ಕೋರಿದ ಪರಿಷತ್ ಶಾಸಕ TA ಶರವಣ!
ಹೌದು,,, ಹುಬ್ಬಳ್ಳಿಯ ಅರಳಿಕಟ್ಟಿ ಓಣಿಯಲ್ಲಿ ವಾಟರ್ ಬೋಲ್ಡ್ ಅಂದರೆ L&T ಯವರು ಕಾಮಗಾರಿ ಮಾಡುತ್ತಿದ್ದರು. ಆದ್ರೆ ಯಾವುದೇ ಮುಂಜಾಗ್ರತಾ ಕ್ರಮವಿಲ್ಲದಿರು ವುದರಿಂದ ಇಬ್ಬರು ಕಾರ್ಮಿಕರು ಕೆಲಸ ಮಾಡುವ ವೇಳೆ ಮಣ್ಣಿನಲ್ಲಿ ಸಿಲುಕಿಕೊಂಡಿದ್ದು, ಅದರಲ್ಲಿ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದಾನೆ. ಇನ್ನೊಬ್ಬಮ ಸ್ಥಿತಿ ಗಂಭೀರವಾಗಿದೆ. ಈ ಅರಳಿಕಟ್ಟಿ ಓಣಿಯಲ್ಲಿ ನೀರು ಸರಬರಾಜುನ ಕಾಮಗಾರಿ ಮಾಡುತ್ತಿದ್ದರು. ಆದ್ರೆ ಕಾರ್ಮಿಕರು ಕೆಲಸ ಮಾಡುತ್ತಿರುವಾಗ ಇಬ್ಬರು ಮಣ್ಣಿನಲ್ಲಿ ಸಿಲುಕಿದ್ದಾರೆ. ಕೂಡಲೇ ಅಲ್ಲೆ ಇದ್ದ ಸ್ಥಳೀಯರ ಸಹಾಯದಿಂದ ಅವರನ್ನು ಹೊರಗೆ ತೆಗೆದಿದ್ದು, ಒಬ್ಬ ಸಾವನ್ನಪ್ಪಿದ್ದಾನೆ. ಇನ್ನೊಬ್ಬನನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದು ಯಾರ ನಿರ್ಲಕ್ಷ್ಯದಿಂದ ಆಯಿತು ಏನು ಎಂಬುದನ್ನು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.