Close Menu
Ain Live News
    Facebook X (Twitter) Instagram YouTube
    Friday, June 20
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಹುಬ್ಬಳ್ಳಿ: ದೀಪ ಜ್ಞಾನದ ಸಂಕೇತ: ಶ್ರೀ ರಂಭಾಪುರಿ ಜಗದ್ಗುರುಗಳು

    By AIN AuthorDecember 1, 2023
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ, ಡಿ.01: ಹೊರಗಿನ ಕತ್ತಲೆ ಕಳೆಯಲು ದೀಪಬೇಕು. ಅಜ್ಞಾನವೆಂಬ ಕತ್ತಲೆ ಕಳೆಯಲು ಗುರುಬೇಕು. ಅರಿವು, ಆದರ್ಶಗಳ ಪರಿಪಾಲನೆಯಿಂದ ಜೀವನ ಉಜ್ವಲಗೊಳ್ಳುತ್ತದೆಂದು ಬಾಳೆಹೊನ್ನುರು ಶ್ರೀ ರಂಭಾಪುರಿ ಡಾ‌. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

    ಅವರು ಇಂದು ಸಂಜೆ ಹುಬ್ಬಳ್ಳಿ ವಿದ್ಯಾನಗರದ ಶ್ರೀ ರಂಭಾಪುರಿ ಜಗದ್ಗುರು ವೀರ ಗಂಗಾಧರ ಸಮುದಾಯ ಭವನದಲ್ಲಿರುವ ಶ್ರೀ ಜಗದ್ಗುರು ರೇಣುಕ ಮಂದಿರದಲ್ಲಿ ಜರುಗಿದ ಕಾರ್ತೀಕ ದೀಪೋತ್ಸವ ಸಮಾರಂಭದ ಸಾನಿಧ್ಯವಹಿಸಿ, ಆಶಿರ್ವಚನ ನೀಡಿದರು.

    ಮನುಷ್ಯನಿಗೆ ಅರಿವು, ಆರೋಗ್ಯ ಮತ್ತು ಆಯುಷ್ಯ ಬಹು ಮುಖ್ಯ. ಭೌತಿಕ ಬದುಕು ಸಂಪತ್ತಿನಷ್ಟೆ ಉಜ್ವಲಗೊಳ್ಳುವುದು. ಸಂಪತ್ತಿನ ಜೊತೆ ಶಿವ ಜ್ಞಾನದ ಅರಿವು ಸಂಪಾದಿಸಿಕೊಂಡು ಬಾಳ ಬೇಕಾಗುತ್ತದೆ ಎಂದು ಅವರು ಹೇಳಿದರು.

    ಶ್ರೀ ಜಗದ್ಗುರು ರೇಣುಕಾಚಾರ್ಯರು ಮೌಲ್ಯ ಆಧಾರಿತ ಬದುಕಿಗೆ ಧರ್ಮದ ದಶವಿಧ ಸೂತ್ರಗಳನ್ನು ಬೋಧಿಸಿದ್ದಾರೆ.
    ಅಹಿಂಸಾ, ಸತ್ಯ,ಅಸ್ತೇಯ, ಬ್ರಹ್ಮಚರ್ಯ, ದಯಾ, ಕ್ಷಮಾ, ದಾನ, ಪೂಜಾ, ಜಪ, ಧ್ಯಾನ ಎಂಬ ಹತ್ತು ಸೂತ್ರಗಳು ಸಕಲರ ಬಾಳಿನ ಶ್ರೇಯಸ್ಸಿಗೆ ಕಾರಣವಾಗಿವೆ.
    ಮಾತು ಮತ್ತು ಕೃತಿ ಒಂದಾಗಿ ಬಾಳಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.

    ಶ್ರೀ ಜಗದ್ಗುರು ರಂಭಾಪುರೀಶ ಸಾಸಂಸ್ಕೃತಿಕ ಸಂಘದ ಅಧ್ಯಕ್ಷರಾದ ವಿಶ್ವನಾಥ ಹಿರೇಗೌಡರ ಅವರು ಮತ್ತು ಅವರ ಸಂಗಡಿಗರು ಮಾಡುತ್ತಿರುವ ಕಾರ್ಯ ಸ್ತುತ್ಯವಾದದ್ದು ಎಂದರು.

    ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಮಹಾಪೌರರಾದ ವೀಣಾ ಭರದ್ವಾಡ ಅವರು ಸಮಾರಂಭ ಉದ್ಘಾಟಿಸಿದರು.

    ಪವಿತ್ರ ಸಮಾರಂಭದಲ್ಲಿ ಸುಳ್ಳ ಪಂಚಗ್ರಹ ಹಿರೇಮಠದ ಷ.ಬ್ರ. ಶಿವ ಸಿದ್ದರಾಮೇಶ್ವರ ಶಿವಾಚಾರ್ಯರು, ಅಮ್ಮಿನಭಾವಿ ಪಂಚಗ್ರಹ ಹಿರೇಮಠದ ಷ.ಬ್ರ.ಅಭಿನವ ಶಾಂತಲಿಂಗ ಶಿವಾಚಾರ್ಯರು ಮತ್ತು ಚಿಮ್ಮಲಗಿ ಹಿರೇಮಠದ ಷ.ಬ್ರ. ಸಿದ್ದರೇಣುಕ ಶಿವಾಚಾರ್ಯ ಸ್ವಾಮಿಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.

    ಸಮಾರಂಭದಲ್ಲಿ ಪ್ರಸಕ್ತ ಸಾಲಿನಲ್ಲಿ
    ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಬಾಲಾಜಿ ಕೃಷ್ಣ ಹಾಗೂ ದ್ವೀತಿಯ ಸ್ಥಾನ ಪಡೆದ ಸಹನಾ ಪತ್ತಾರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮತ್ತು ಜೀ ಕನ್ನಡ ಕಲಾವಿದ ಹಣಮಂತ ಲಮಾಣಿ ಹಾಗೂ ಅಂತರಾಷ್ಟ್ರೀಯ ವಿಜ್ಞಾನಿಗಳಾದ ಡಾ.ಎನ್.ಆರ್. ಬಾಣಾಪುರಮಠ, ಅಂತರಾಷ್ಟ್ರೀಯ ಕುಬ್ಜರ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಾದ ದೇವಪ್ಪ ಮೋರೆ ಅವರಿಗೆ ಸಾಧಕ ಸನ್ಮಾನ ನೀಡಿ ಗೌರವಿಸಲಾಯಿತು.

    ಶ್ರೀ ಜಗದ್ಗುರು ರಂಭಾಪುರಿ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ಸ್ವಾಗತಿಸಿದರು.

    ಸಮಾರಂಭದಲ್ಲಿ ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ನಿಂಗನಗೌಡ ಮರಿಗೌಡ್ರ, ಯುವ ಧುರೀಣ ಸದಾನಂದ ಡಂಗನವರ, ಸಿವಿಲ್ ಗುತ್ತಿಗೆದಾರ ಬಸವರಾಜ ಕಲ್ಯಾಣಿಮಠ, ಮಹಾನಗರ ಪಾಲಿಕೆ ನಿವೃತ ಕಾರ್ಯನಿರ್ವಾಹಕ ಅಭಿಯಂತರ ಶಿವರುದ್ರಪ್ಪ ಮನ್ನಂಗಿ ಅವರಿಗೆ ಜಗದ್ಗುರು ಮಹಾಸನ್ನಿಧಿಯವರು ಗುರುರಕ್ಷೆ ನೀಡಿ, ಆಶಿರ್ವದಿಸಿದರು.

    ಶ್ರೀ ಮದ್ವೀರಶೈವ ಸಧ್ಭೋದನಾ ಸಂಸ್ಥೆಯ ಹುಬ್ಬಳ್ಳಿ ತಾಲೂಕು ಘಟಕ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ, ಶ್ರೀ ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳದ ಅಧ್ಯಕ್ಷೆ ಇಂದುಮತಿ ಮಾನ್ವಿ, ಡಾ.ಎನ್.ಎ.ಚರಂತಿಮಠ ಹಾಗೂ ಇತರರು ಸಮಾರಂಭದ ವೇದಿಕೆಯಲ್ಲಿ ಇದ್ದರು.

    ಬಸವರಾಜ ಕುಂದಗೋಳಮಠ ಸೇರಿದಂತೆ ಅವಳಿನಗರದ ಗಣ್ಯರು, ಪಾರ್ವತಿ ಮಹಿಳಾ ಮಂಡಳದ ಸದಸ್ಯರು, ರಂಭಾಪುರಿ ಪೀಠದ ಭಕ್ತರು ಸಮಾರಂಭದಲ್ಲಿ ಭಾಗವಹಿಸಿದ್ದರು.

    ಸಾಹಿತಿ, ಸಂಘಟಕ ಗದಗಯ್ಯ ಹಿರೇಮಠ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

    Demo
    Share. Facebook Twitter LinkedIn Email WhatsApp

    Related Posts

    ನಾನು ಬಾಯಿ ಬಿಟ್ರೆ ಸರ್ಕಾರ ಅಲ್ಲಾಡುತ್ತೆ..! ತಮ್ಮದೇ ಸರ್ಕಾರದ ವಿರುದ್ಧ BR ಪಾಟೀಲ್ ಆಕ್ರೋಶ

    June 20, 2025

    ಚಲಿಸುತ್ತಿದ್ದ ವೇಳೆ ಕಳಚಿದ ಲಾರಿಯ ಚಕ್ರಗಳು: ಟಯರ್ ಡಿಕ್ಕಿ ರಭಸಕ್ಕೆ ಆಟೋ ಜಖಂ

    June 20, 2025

    ಚಿತ್ರದುರ್ಗ: ಸುಳ್ಳು ಆರೋಪದ ಬಂಧಿಸಿದ ಪೊಲೀಸರ ಮೇಲೆ ಕ್ರಮ ಜರುಗಿಸಿ – ಪ್ರಶಾಂತ್ ಜತ್ತಣ್ಣ

    June 20, 2025

    ಚಿತ್ರದುರ್ಗ: ಮತಾಂತರದ ಆರೋಪ, ಇಬ್ಬರು ಬಂಧನ

    June 20, 2025

    ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ: ಬಸ್ ಡಿಕ್ಕಿ ಹೊಡೆದು ಟ್ರಕ್ ಪಲ್ಟಿ – ತಪ್ಪಿದ ಭಾರಿ ಅನಾಹುತ

    June 20, 2025

    ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕಮೀಷನರ್ 6 ತಿಂಗಳಲ್ಲೆ ಎತ್ತಂಗಡಿ: ನೂತನ ಕಮೀಷನರ್ ಆಗಿ ಡೊಂಬರ್

    June 20, 2025

    ಗಗನಚುಕ್ಕಿ ಜಲಪಾತಕ್ಕೆ ಜೀವಕಳೆ: ಧುಮ್ಮುಕ್ಕಿ ಹರಿಯುತ್ತಿರುವ ಫಾಲ್ಸ್​!

    June 20, 2025

    ಹುಲಿ ದಾಳಿಗೆ ಮಹಿಳೆ ಸಾವು: ಅನಾಥರಾದ ಮಕ್ಕಳು – 10 ಲಕ್ಷ ಪರಿಹಾರ ಘೋಷಣೆ!

    June 20, 2025

    ಮದ್ದೂರು| ಶಿಂಷಾ ನದಿ ಪಾತ್ರದಲ್ಲಿನ ಅಕ್ರಮ ಮರಳು ವಶ!

    June 20, 2025

    ಬಾಲ್ಯ ವಿವಾಹಕ್ಕೆ ಯತ್ನ: ಮದುವೆ ಮಂಟಪಕ್ಕೆ ನುಗ್ಗಿ ಆರತಕ್ಷತೆಗೆ ಬ್ರೇಕ್ ಹಾಕಿದ ಅಧಿಕಾರಿಗಳು!

    June 20, 2025

    ಧಾರಕಾರ ಮಳೆ: ಹೇಮಾವತಿ ನದಿಯ ಒಳಹರಿವು ಹೆಚ್ಚಳ

    June 20, 2025

    ಹುಲಿ ದಾಳಿ: ಕುರಿಗಳನ್ನು ಮೇಯಿಸುತ್ತಿದ್ದ ಮಹಿಳೆ Spot Death!

    June 20, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.