ಚಿತ್ರದುರ್ಗ: ಡಿ ಗ್ಯಾಂಗ್ ನಿಂದಹತ್ಯೇಗೀಡಾದ ರೇಣುಕಾಸ್ವಾಮಿ ಕೊಲೆಯಾಗಿ ಒಂದು ವರ್ಷ ಕಳೆದಿದೆ .ಈ ಸರ್ಭದಲ್ಲಿ ಮೃತ ರೇಣುಕಾಸ್ವಾಮಿ ತಾಯಿ ರತ್ನಪ್ರಭ ಮಾತನಾಡಿ ಮಾಧ್ಯಗಳೊಂದಿಗೆ ಮಾತನಾಡಿ ನನ್ನ ಮಗನನ್ನು ಕಳೆದುಕೊಂಡು ಒಂದು ವರ್ಷ, ದುಃಖದಲ್ಲಿದ್ದೇವೆ.ಆ ನೋವನ್ನು ಮರೆಯಲು ಇಂದಿಗೂ ಆಗುತ್ತಿಲ್ಲ.
ಸರ್ಕಾರ ನನ್ನ ಸೊಸೆಯ ಭವಿಶಷ್ಯಕ್ಕೆ ಒಂದು ಆಧಾರ ನೀಡಬೇಕು ಎಂದು ಮನವಿ ಮಾಡಲಾಗಿತ್ತು .ಆದರೆ ಸರ್ಕಾರ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸೊಸೆ ಹಾಗೂ ಮೊಮ್ಮಗನ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ.
ನನ್ನ ಮಗ ಇದ್ದಿದ್ದರೆ ನಾವು ಚಿಂತೆ ಮಾಡಬೇಕಿರಲಿಲ್ಲ. ಅವನನ್ನ ಮೋಸದಿಂದ ಕೊಲೆ ಮಾಡಿ ಇವತ್ತು ನಮ್ಮ ಕುಟುಂಬ ಸಂಕಷ್ಟದಲ್ಲಿದೆ. ಆದರಿಂದ ಸರ್ಕಾರ ಇತ್ತ ಗಮನಹರಿಸಿ ನನ್ನ ಸೊಸೆಗೆ ಸರ್ಕಾರಿ ಕೆಲಸ ಕೊಡಬೇಕು ಎಂದು ರೇಣುಕಾಸ್ವಾಮಿ ತಾಯಿ ರತ್ನಫ್ರಭ ಸರ್ಕಾರಕ್ಕೆ ಮನವಿ ಮಾಡಿದ್ದಾರೆ….