ನೇಹಾ ಹಿರೇಮಠ ಪ್ರಕರಣಕ್ಕೆ ಒಂದು ವರ್ಷ ತುಂಬುತ್ತಲೇ ಧಾರವಾಡ ಜಿಲ್ಲೆಯಲ್ಲಿ ಮತ್ತೊಂದು ಲವ್ ಜಿಹಾದ್ ಘಟನೆ ನಡೆದಿದೆ. ಮುಸ್ಲಿಂ ಯುವಕನ ಲವ್ ರಿಜೆಕ್ಟ್ ಮಾಡಿದ್ದಕ್ಕೆ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮನನೊಂದ ಯುವತಿ ಹಾಸ್ಟಲ್ನಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈಗ ಆ ಯುವತಿ ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದಾಳೆ. ಈ ಘಟನೆಯನ್ನು ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಯನ್ನು ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೌದು,,,,, ಇತ್ತಿಚ್ಚಿನ ದಿನಗಳಲ್ಲಿ ಲವ್ ಜಿಹಾದ್ ಕೇಸ್ಗಳು ಹೆಚ್ಚಾಗುತ್ತಿದೆ. ಇಂದು ಇದೇ ಲವ್ ಜಿಹಾದ್ ಆರೋಪದಲ್ಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಹುಬ್ಬಳ್ಳಿಯ ಶುಶ್ರುತ್ ಕಾಲೇಜಿನಲ್ಲಿ ಪ್ಯಾರಾಮೆಡಿಕಲ್ ಓದುತ್ತಿದ್ದ ಯುವತಿಯೇ ಲವ್ ಜಿಹಾದ್ಗೆ ಆತ್ಮಹತ್ಯೆಗೆ ಯತ್ನಿಸಿದ ಯುವತಿ. ಇವಳು MVP ಹಾಸ್ಟಲ್ನಲ್ಲಿ ಇರುತ್ತಾಳೆ. ಆಕೆ ಹಿಂದೆ ಬಿದ್ದ ಮುಸ್ಲಿಂ ಯುವಕ ಲವ್ ನಿರಾಕರಿಸಿದ್ದಕ್ಕೆ ಅವಳೆ ಮೇಲೆ ಹಲ್ಲೆ ಮಾಡಿದ್ದಾನೆ. ಇದಕ್ಕೆ ಮನನೊಂದ ಯುವತಿ ಹಾಸ್ಟಲ್ಗೆ ಹೋಗಿ ಮಾತ್ರೆ ತೆಗೆದುಕೊಂಡಿದ್ದಾಳೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ನಿವಾಸಿ ವಿದ್ಯಾ (ಹೆಸರು ಬದಲಾಗಿಸಲಾಗಿದೆ) ಇವಳಿಗೆ ಅದೇ ಕುಂದಗೋಳದ ಮುಸ್ಲಿಂ ಯುವಕ ಸಿರಾಜ್ ಹಂಚನಾಳ ಲವ್ ಮಾಡು ಎಂದು ಗೋಳಾಕುತ್ತಿದ್ದನಂತೆ. ಸುಮಾರು ವರ್ಷಗಳಿಂದ ಅವಳನ್ನು ಲವ್ ಮಾಡು ಎಂದು ಟಾರ್ಚರ್ ಮಾಡುತ್ತದ್ದನಂತೆ. ಅಷ್ಟೇ ಅಲ್ದೆ ಸೀರಾಜ್ ಹಂಚನಾಳ ಆ ವಿದ್ಯಾರ್ಥಿನಿ ಪೋಟೋಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡ್ತಿದ್ದನಂತೆ. ಈಗ ಆ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಮಗಳ ಪರಿಸ್ಥಿತಿ ನೋಡಿ ವಿದ್ಯಾರ್ಥಿನಿ ವಿದ್ಯಾ ಪಾಲಕರು ಕಣ್ಣೀರು ಹಾಕುತ್ತಿದ್ದಾರೆ. ಅಷ್ಟೇ ಅಲ್ದೆ ಹಿಂದೂಪರ ಸಂಘಟನೆಗಳು ಕೂಡ ಆತನ ಮೇಲೆ ಕಠಣಿ ಕ್ರಮ ಜರುಗಿಸಬೇಕೆಂದು ಒತ್ತಾಯ ಮಾಡುತ್ತಿದ್ದಾರೆ.
ಇನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯನ್ನು ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಅವರು ಭೇಟಿ ನೀಡಿ ಪರಿಶಿಲನೆ ನಡೆಸಿದರು. ಅಷ್ಟೇ ಅಲ್ಲದೆ ಯುವತಿಯ ಪಾಲಕರಿಂದ ಎಲ್ಲ ಮಾಹಿತಿಯನ್ನು ಪಡೆದಿದ್ದಾರೆ. ಘಟನೆಯಾಗಿ ಕೆಲವೇ ಗಂಟೆಗಳಲ್ಲಿ ಆರೋಪಿ ಸಿರಾಜ್ ಹಂಚನಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಟ್ನಲ್ಲಿ ಹೇಳಬೇಕಾದ್ರೆ ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಕೊಲೆ ಪ್ರಕರಣಗಳು ಇಡೀ ದೇಶವನ್ನೆ ನಡುಕು ಹುಟ್ಟಿಸಿತ್ತು. ಈಗ ಅದೇ ಹಾದಿಯಲ್ಲಿ ಮುಸ್ಲಿಂ ಯುವಕ ಸೀರಾಜ್ ಲವ್ ರಿಜೆಕ್ಟ್ ಮಾಡಿದ್ದಕ್ಕೆ ಹಿಂದೂ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅದೆಷ್ಟೋ ಯುವತಿಯರು ಲವ್ ಜಿಹಾದ್ಗೆ ಬಿದ್ದು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ಕೇಸ್ ಯಾವ ಹಂತಕ್ಕೆ ತಲಪುತ್ತದೆ. ಆತನ ಮೇಲೆ ಯಾವ ರೀತಿ ಕ್ರಮ ಆಗುತ್ತದೆಂದು ಕಾಯ್ದು ನೋಡಬೇಕಿದೆ.