ರಾಮನಗರ: ಇದು ರೀಲ್ಸ್ ರಾಣಿಯ ಕಣ್ಣೀರಿನ ಕಥೆಯಾಗಿದೆ. ಇನ್ಸ್ಟಾಗ್ರಾಂ ಮೂಲಕ ಅಂತರ್ಜಾತಿ ಯುವತಿಯನ್ನ ಪ್ರೀತಿಸಿ ಮದುವೆಯಾಗಿದ್ದ ಭೂಪ ಎಸ್ಕೇಪ್ ಆಗಿರುವ ಘಟನೆ ರಾಮನಗರ ತಾಲೂಕಿನಲ್ಲಿ ನಡೆದಿದೆ. ಪತಿ ಪ್ರತಾಪ್ ಗಾಗಿ ಪತ್ನಿ ರಕ್ಷಿತಾ ಗೋಳಾಟ ನಡೆಸುತ್ತಿದ್ದಾರೆ. ಎರಡು ವರ್ಷಗಳ ಕೆಳಗೆ ಇನ್ಸ್ಟಾಗ್ರಾಂ ಮೂಲಕ ಇಬ್ಬರ ನಡುವೆ ಪರಿಚಯವಾಗಿ ಪರಿಚಯ ಪ್ರೀತಿಯಾಗಿ, ವಿರೋಧದ ನಡುವೆ ತಿರುಪತಿಯಲ್ಲಿ ಪ್ರತಾಪ್ ನನ್ನ ಮದುವೆಯಾಗಿದ್ದಳು.
ಜಸ್ಟ್ ಈ ಎಲೆ ಜಗಿದು ರಸ ಸೇವಿಸಿದ್ರೆ ಸಾಕು ಕೊಲೆಸ್ಟ್ರಾಲ್ ಕರಗಿ ಹೋಗುತ್ತೆ!
ನಂತರ ಒಂದು ವರ್ಷ ಸಂಸಾರ ಕೂಡ ಮಾಡಿದ್ದಾರೆ. ಆದರೆ ಹೆಂಡತಿಗೆ ಹೇಳದೇ ಏಕಾಏಕಿ ಗಂಡ ಪರಾರಿಯಾಗಿದ್ದಾನೆ. ನಾಪತ್ತೆಯಾಗಿರೋ ಪತಿಗಾಗಿ ಪತ್ನಿ ಪರದಾಡುತ್ತಿದ್ದಾಳೆ. ಒಂದೇ ವರ್ಷಕ್ಕೆ ಹೆಂಡತಿ ಬಿಟ್ಟು ಪತಿ ಪ್ರತಾಪ್ ಎಸ್ಕೇಪ್ ಆಗಿದ್ದಾನೆ.
ಮೊಬೈಲ್ ಸ್ವಿಚ್ ಆಫ್ ಮಾಡಿ ಯಾರಿಗೂ ಮಾಹಿತಿ ನೀಡದೇ ಎಸ್ಕೇಪ್ ಆಗಿದ್ದಾರೆ. ಕಳೆದ ಸುಮಾರು ಐದು ತಿಂಗಳಿಂದ ಗಂಡ ಪ್ರತಾಪ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಪತ್ನಿ ಗೋಳಾಡುತ್ತಿದ್ದಾಳೆ. ಈ ಸಂಬಂಧ ಇದೀಗ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದಾಳೆ.
ಇತ್ತ ಇನ್ಸ್ಟಾಗ್ರಾಂ ಮೂಲಕ ಪರಿಚಯ ಆಗಿ ವಿರೋಧದ ನಡುವೆಯೂ ಮದುವೆಯಾಗು ಸಂಸಾರ ನಡೆಸ್ತಿದ್ದು, ಇದೀಗ ದಲಿತ ಯುವತಿ ಎಂಬ ಕಾರಣಕ್ಕೆ ಪ್ರತಾಪ್ ಕೈ ಕೊಟ್ಟಿದ್ದಾನೆ ಎಂದು ಸಂತ್ರಸ್ತೆ ಆರೋಪ ಮಾಡಿದ್ದಾಳೆ. ರಾಮನಗರ ತಾಲೂಕಿನ ಬಿಳಗುಂಬ ಗ್ರಾಮದ ನಿವಾಸಿಯಾಗಿದ್ದ ಪ್ರತಾಪ್ ಈ ಮೊದಲು ಕೆಎಸ್ ಆರ್ ಟಿಸಿ ಚಾಲಕನಾಗಿದ್ದ. ಇದೀಗ ಏಕಾಏಕಿ ನಾಪತ್ತೆಯಾಗಿದ್ದು, ಪ್ರತಾಪ್ ಗಾಗಿ ಸಾಕಷ್ಟು ಕಡೆ ಹುಡುಕಾಡ ನಡೆಸಿರೋ ಪತ್ನಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.