ವಿಜಯಪುರ:- ಆಲಮಟ್ಟಿ ಜಲಾಶಯದ ನೀರಿನ ಮಟ್ಟ ಏರಿಕೆಗೆ ಮಹಾರಾಷ್ಟ್ರ ಸರ್ಕಾರದಿಂದ ವಿರೋಧ ವಿಚಾರವಾಗಿ ಮಹಾರಾಷ್ಟ್ರ ಸಚಿವ ಸಂಜಯ ರಾಠೋಡ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕೆಐಎಡಿಬಿ ಭೂ ಸ್ವಾಧೀನಕ್ಕೆ ವಿರೋಧಿಸಿ ಪ್ರೊಟೆಸ್ಟ್: ನೂರಾರು ರೈತರನ್ನು ಬಂಧಿಸಿದ ಖಾಕಿ!
ವಿಜಯಪುರ ಜಿಲ್ಲೆಯ ಸೋಮದೇವರಹಟ್ಟಿ ತಾಂಡಾದಲ್ಲಿ ಮಾತನಾಡಿದ ಅವರು, ಇದು ಮಹಾರಾಷ್ಟ್ರ ಸರ್ಕಾರದಿಂದಲೂ ಪ್ರಸ್ತಾವನೆ ಕ್ಯಾಬಿನೆಟ್ ನಲ್ಲಿ ಬಂದಿತ್ತು. ಈ ವಿಚಾರವಾಗಿ ಚರ್ಚೆ ಕೂಡಾ ಆಗಿದೆ. ಕೆಲ ತಾಂತ್ರಿಕ ವಿಚಾರದಲ್ಲಿ ಸಮಸ್ಯೆ ಇದೆ.
ಈ ವಿಚಾರವಾಗಿ ಮಹಾರಾಷ್ಟ್ರ ಸಿಎಂ, ಉಪಮುಖ್ಯಮಂತ್ರಿ ಚರ್ಚೆ ಮಾಡಿ ಮುಂದಿನ ನಿರ್ಣಯ ಮಾಡುತ್ತಾರೆ. ಆಲಮಟ್ಟಿ ಜಲಾಶಯದ ಎತ್ತರದಿಂದ ಏನೂ ಸಮಸ್ಯೆ ಆಗದಿದ್ದರೆ ಒಳ್ಳೆಯದ್ದು. ಆದರೆ ಚರ್ಚೆ ಮಾಡಿ ನಿರ್ಣಯ ಮಾಡಲಾಗುವದು. ಇದು ಮಹಾರಾಷ್ಟ್ರ ಸರ್ಕಾರ, ಇಡೀ ರಾಜ್ಯದ ಪ್ರಶ್ನೆ ಇದೆ. ಈ ವಿಚಾರವಾಗಿ ಚರ್ಚಿಸಿ ನಿರ್ಣಯ ಮಾಡಲಾಗುವದು ಎಂದು ಸಚಿವ ಸಂಜಯ ರಾಠೋಡ ಹೇಳಿದ್ದಾರೆ.