ವಿಜಯಪುರ:- ಜಿಲ್ಲೆಯ ಆಲಮಟ್ಟಿಯಲ್ಲಿರೋ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ನೀರಿನ ಮಟ್ಟ ಏರಿಸೋದಕ್ಕೆ ಮಹಾರಾಷ್ಟ್ರ ಸರ್ಕಾರ ಕ್ಯಾತೆ ತೆಗೆದಿರೋದಕ್ಕೆ ವಿಜಯಪುರ ಜಿಲ್ಲೆಯ ರೈತರು ಪ್ರತಿತಂತ್ರ ರೂಪಿಸಲು ಮುಂದಾಗಿದ್ದಾರೆ.
ಆಲಮಟ್ಟಿ ಜಲಾಶಯದ ಮಟ್ಟ 524.256ಕ್ಕೆ ಹೆಚ್ಚಿಸುವುದಕ್ಕೆ ಮಹಾರಾಷ್ಟ್ರ ಸರ್ಕಾರ ಹಾಗೂ ಅಲ್ಲಿನ ರೈತರು ವಿರೋಧ ಮಾಡ್ತಿದ್ದಾರೆ. ಅದಕ್ಕೆ ಕಾರಣ ಆಲಮಟ್ಟಿ ಅಣೆಕಟ್ಟೆ ಎತ್ತರಿಸಿದ್ರೆ ಮಹಾರಾಷ್ಟ್ರದಲ್ಲಿ ಪ್ರವಾಹ ಆಗುತ್ತೆ ಅನ್ನೋದು. ಆದ್ರೆ ವಿನಾಕಾರಣ ಮಹಾರಾಷ್ಟ್ರ ಸರ್ಕಾರ ಆಲಮಟ್ಟಿ ಜಲಾಶಯ ಎತ್ತರಕ್ಕೆ ಕ್ಯಾತೆ ತೆಗೆದಿದೆ. ಇದನ್ನು ವಿರೋಧಿಸಿ ಜೊತೆಗೆ ರಾಜ್ಯ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ವಿಜಯಪುರದಲ್ಲಿ ರೈತಪರ ಕನ್ನಡಪರ ಸ್ವಾಮೀಜಿಗಳ ನೇತೃತ್ವದಲ್ಲಿ ಜಿಲ್ಲೆಯಲ್ಲಿರೋ ಎಲ್ಲಾ ಸಂಘಟನೆಗಳ ಸಾಮೂಹಿಕ ನಾಯಕತ್ವದಲ್ಲಿ ಹೋರಾಟಕ್ಕೆ ರೂಪುರೇಷೆ ನಿರ್ಧರಿಸಲು ಜೂನ್ 9ರಂದು ಬೆಳಿಗ್ಗೆ 10 ಕ್ಕೆ ವಿಜಯಪುರದ ಗಗನ್ ಮಹಲ್ ಆವರಣದಲ್ಲಿ ಸಭೆ ಕರೆಯಲಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಪಂಚನದಿಗಳು ಹರಿದರೂ ಕುಡಿಯಲು ನೀರಿಲ್ಲ. ಬ್ರಿಜೇಶ್ ಕುಮಾರ್ ಕೃಷ್ಣಾ ನ್ಯಾಯಾಧಿಕರಣ-2 ತೀರ್ಪುನಂತೆ 524.256 ಮೀಟರ್ ಏರಿಸಿ ಗೇಟ್ ಅಳವಡಿಸಲು ಕ್ರಮ ಕೈಗೊಳ್ಳಬೇಕು.ಮಹಾರಾಷ್ಟ್ರ ರೈತರನ್ನು ಎತ್ತಿಕಟ್ಟಿ, ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಿಸಬಾರದು ಅನ್ನೋದಕ್ಕೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಸೊಪ್ಪು ಹಾಕಬಾರದು, ಕೇಂದ್ರ ಸರ್ಕಾರ ಯುಕೆಪಿ ಯೋಜನೆಯನ್ನ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ರಾಜ್ಯ ಸರ್ಕಾರ ಒತ್ತಡ ಹೇರಬೇಕು ಎಂದು ಬೃಹತ್ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ ಎಂದು ರೈತ ಮುಖಂಡ ಅರವಿಂದ್ ಕುಲಕರ್ಣಿ ಹೇಳಿದರು…