ಚಿತ್ರದುರ್ಗ : ಬೈಕ್ ನ ಬ್ಯಾಗಿನಲ್ಲಿದ್ದ ಎರಡು ಲಕ್ಷ ಹಣ ಕದ್ದು ಪರಾರಿಯಾಗುತ್ತಿದ್ದ ಕಳ್ಳರನ್ನು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಹಿಡಿದು ಹಣದ ಮಾಲೀಕನಿಗೆ ವಾಪಾಸ್ಸು ಕೊಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ನಡೆದಿದೆ.
ಚಳ್ಳಕೆರೆ ಹಾಲುಗೊಂಡನಹಳ್ಳಿ ಇದ್ದಲು ವ್ಯಾಪಾರಿ ತಿಪ್ಪೇಸ್ವಾಮಿ ಇಂದು ಬೆಳಗ್ಗೆ ಕೆನರಾ ಬ್ಯಾಂಕಿನಲ್ಲಿ ಎರಡು ಲಕ್ಷ ಹಣ ಡ್ರಾ ಮಾಡಿಕೊಂಡು, ಬೈಕ್ ನಲ್ಲಿಟ್ಟು ಬೈಕ್ ಹತ್ತುವ ವೇಳೆ ಕಳ್ಳನೊಬ್ಬ ಹಣ ದೋಚಿ ಪರಾರಿಯಾಗುತ್ತಿದ್ದ.
ಇದನ್ನು ಗಮನಿಸಿದ ಕಾಟಪ್ಪನಹಟ್ಟಿ ಯುವಕ ಮಂಜುನಾಥ್ ಅಪ್ರಾಪ್ತ ಕಳ್ಳನನ್ನು ಹಿಡಿದು ಹಣ ವಾಪಾಸ್ಸು ಕೊಡಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಪ್ರಾಪ್ತ ಕಳ್ಳ ಸೊಲ್ಲಾಪುರದ ನಿವಾಸಿ ಎಂದು ತಿಳಿದು ಬಂದಿದ್ದು, ಪೋಲಿಸರು ತನಿಖೆ ಆರಂಭಿಸಿದ್ದಾರೆ.