ಕೋಲಾರ:- ಮಾವು ಬೆಲೆ ತೀವ್ರ ಕುಸಿತದಿಂದ ಅಘಾತಕ್ಕೊಳಗಾದ ಮಾವು ವ್ಯಾಪಾರಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ಜರುಗಿದೆ.
ನೀವು ಮಾಡಿದ ಚಪಾತಿ ಹೂವಿನಂತಾಗಬೇಕಾ!? ಹಾಗಿದ್ರೆ ಹಿಟ್ಟು ಕಲಿಸುವಾಗ ಈ ಟಿಪ್ಸ್ ಫಾಲೋ ಮಾಡಿ!
ಮೊಹಮ್ಮದ್ ಶಫಿವುಲ್ಲಾ ಆಲಿಯಾಸ್ ಅನ್ವರ್ (೫೫) ಸಾವನ್ನಪ್ಪಿರುವ ರೈತ. ಕೋಲಾರ ತಾಲ್ಲೂಕು ತೊಟ್ಲಿ ಗ್ರಾಮದ ಮಾವಿನ ತೋಟದಲ್ಲಿ ಮಾವು ಕಟಾವು ಮಾಡುವ ವೇಳೆಯೇ ಹೃದಯಾಘಾತ ಸಂಭವಿಸಿದೆ. ಇಂದು ಮಾವಿನ ಬೆಲೆ ತೀವ್ರ ಕುಸಿತ ವಿಚಾರ ತಿಳಿದು ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ. ಮೃತ ಅನ್ಸರ್, ತಾಜಾ ಪ್ರೂಟ್ ಮಂಡಿ ಮಾಲಿಕನಾಗಿದ್ದು, ಸುಮಾರು 30 ಲಕ್ಷ ರೂಪಾಯಿ ಮಾವಿನ ವಹಿವಾಟು ಮಾಡಿದ್ದ. ಬೆಲೆ ಕುಸಿತದಿಂದ ಮಾವಿನ ತೋಟಕ್ಕೆ ಸಿಂಪಡಿಸಿದ್ದ ಔಷದಿ ಬೆಲೆಯೂ ಬಾರದೆ ಸಂಕಷ್ಟಕ್ಕೆ ಸಿಲುಕಿದ್ದ. ತೀವ್ರ ಆಘಾತಕ್ಕೊಳಗಾಗಿದ್ದ ಅನ್ವರ್ ಗೆ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮಾವು ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಕಳೆದ ಹದಿನೆಂಟು ದಿನದಿಂದ ಹೋರಾಟ ನಡೆಯುತ್ತಿದೆ. ಆದರೆ ಮಾವು ಬೆಳೆಗಾರರ ಹೋರಾಟಕ್ಕೆ ಸರ್ಕಾರ ಸ್ಪಂದಿಸಿಲ್ಲ. ಇದೀಗ ಹೃದಯಘಾತದಿಂದ ಸಾವನ್ನಪ್ಪಿದ ವ್ಯಾಪಾರಿಗೆ ಪರಿಹಾರ ನೀಡುವಂತೆ ವ್ಯಾಪಾರಿಗಳು ಒತ್ತಾಯ ಮಾಡಿದ್ದಾರೆ.