ಮಂಡ್ಯ:- ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಆಡಳಿತ ಮಂಡಳಿಯ-2025 ರ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಇಂದು ಚುನಾವಣೆ ನಡೆಯಲಿದ್ದು, ಅಧಿಕಾರದ ಗದ್ದುಗೆ ‘ಕೈ’ ವಶವಾಗುವುದು ಗ್ಯಾರಂಟಿ ಎನ್ನಲಾಗುತ್ತಿದೆ.
11 ನಿರ್ದೇಶಕ ಸ್ಥಾನದಲ್ಲಿ ಈಗಾಗಲೇ 6 ಕೈ ಬೆಂಬಲಿತರು, 2 ಪಕ್ಷೇತರು ಸೇರಿದಂತೆ 5 ಅಧಿಕಾರಿಗಳು ಸೇರಿ ಕೈಗೆ ನಿಚ್ಚಳ ಬಹುಮತ ಸಿಗಲಿದೆ. ಕಾಂಗ್ರೇಸ್ ನಲ್ಲಿ ಇಬ್ಬರ ನಡುವೆ ಅಧ್ಯಕ್ಷಗಾಗಿ ಪೈಪೋಟಿ ನಡೆದಿದ್ದು, ವರಿಷ್ಟರ ಬಳಿ ಲಾಬಿ ಕೂಡ ನಡೆದಿದೆ. ಕೈ ಬೆಂಬಲಿತ ನಿರ್ದೇಶಕರಾದ ಅಪ್ಪಾಜಿ ಗೌಡ ಮತ್ತು ಉಮ್ಮಡಹಳ್ಳಿ ಶಿವಪ್ಪ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ.
ಜೆಡಿಎಸ್ ನಲ್ಲಿದ್ದ ಅಪ್ಪಾಜಿಗೌಡ ರನ್ನು ಕಾಂಗ್ರೆಸ್ ಗೆ ಕರೆ ತಂದು ಪಕ್ಷದಲ್ಲಿ ಅಧಿಕಾರ ಕೊಡಿಸುವ ಬಗ್ಗೆ ಸಚಿವ ಚಲುವರಾಯಸ್ವಾಮಿ ಅಭಯ ವ್ಯಕ್ತಪಡಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಪರವಾಗಿ ಕೆಲಸ ಮಾಡಿ ಅವರ ಗೆಲುವಿಗೆ ಅಪ್ಪಾಜಿಗೌಡ ಶ್ರಮ ಪಟ್ಟಿದ್ದಾರೆ. ಈ ಕಾರಣಕ್ಕೆ ಅಪ್ಪಾಜಿಗೌಡಗೆ ಮನ್ಮುಲ್ ಅಧ್ಯಕ್ಷ ಸ್ಥಾನದ ಪಟ್ಟ ಕಟ್ಟಲು ಚಲುವರಾಯಸ್ವಾಮಿ ಮುಂದಾಗಿದ್ದಾರೆ. ಇತ್ತ ಡಿಕೆಶಿ ಆಪ್ತನಾಗಿರುವ ಶಿವಪ್ಪ ಮೇಲ್ಮಟ್ಟದಲ್ಲಿ ವರಿಷ್ಠರ ಜೊತೆ ಲಾಭಿ ನಡೆಸಿದ್ದಾರೆ. ಇನ್ನೂ ಬಹುಮತ ಸಂಖ್ಯಾಬಲವಿಲ್ಲದೆ ಜೆಡಿಎಸ್-ಬಿಜೆಪಿ ರಣ ತಂತ್ರದ ಆಸೆ ಬಿಟ್ಟಿದೆ.
ಬಹುತೇಕ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಅವಿರೋಧ ಆಯ್ಕೆಯಾಗುವ ನಿರೀಕ್ಷೆ ಇದ್ದು, ಸಧ್ಯ ಯಾರಾಗಲಿದ್ದಾರೆ ಅಧ್ಯಕ್ಷ ಉಪಾಧ್ಯಕ್ಷ ಅನ್ನೋ ಕುತೂಹಲ ಮೂಡಿದೆ.