ಗದಗ:- ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿ ಬರ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಸಿ ಸಿ ಪಾಟೀಲ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಫ್ಲೆಕ್ಸ್ ಪಾಲಿಟಿಕ್ಸ್ ಕಿತ್ತಾಟ: ನಿಖಿಲ್ ಕುಮಾರಸ್ವಾಮಿ ಸ್ವಾಗತಕ್ಕೆ ಹಾಕಿದ್ದ ಕಟೌಟ್ ತೆರವಿಗೆ ಯತ್ನ!
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಮಾಧ್ಯಮದ ಮೂಲಕ ಮನವಿ ಮಾಡುತ್ತೇನೆ, ನಾನು ಯಾವುದೇ ಸ್ಥಾನದ ಆಕಾಂಕ್ಷಿ ಅಲ್ಲ. ಭಾರತೀಯ ಜನತಾ ಪಕ್ಷದ ಒಬ್ಬ ಶಿಸ್ತಿನ ಸಿಪಾಯಿ. ನನ್ನ ಸುದೀರ್ಘವಾದ ರಾಜಕೀಯ ಜೀವನದಲ್ಲಿ ನಾನು ಯಾವತ್ತೂ ಪಕ್ಷದ ವಿಚಾರಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡಿಲ್ಲ ಎಂದರು.
ಇನ್ನೂ ಮಾಜಿ ಸಚಿವ ಮಾಧುಸ್ವಾಮಿ ಸಿಎಂ ಸಿದ್ದರಾಮಯ್ಯ ಭೇಟಿ ವಿಚಾರವಾಗಿ ಮಾತನಾಡಿ, ಮಾಧುಸ್ವಾಮಿ ನನ್ನ ಆತ್ಮೀಯ ಸ್ನೇಹಿತ. ನಾನು ಗಣಿ ಸಚಿವನಿದ್ದಾಗ ನನ್ನ ಇಲಾಖೆ ನಡೆಸಲು ಸಲಹೆ ಸೂಚನೆ ಕೊಟ್ಟಂತವರು. ತುಮಕೂರಿನ ರಾಜಕಾರಣದಲ್ಲಿ ವೈಮನಸ್ಸು ಇದ್ದ ಹಾಗೆ ಕಾಣತ್ತೆ ಅನಿಸತ್ತೆ. ಸಿಎಂ ಭೇಟಿ ಆಗಿದ್ದಾರೆ, ಯಾವ ಕಾರಣಕ್ಕಾಗಿ ಭೇಟಿ ಆಗಿದ್ದಾರೋ ಗೊತ್ತಿಲ್ಲ. ಅಭಿಪ್ರಾಯ ಹಂಚಿಕೊಳ್ಳಲು ಮುಕ್ತವಾಗಿರೋ ಪಕ್ಷ ಅಂದ್ರೆ ಬಿಜೆಪಿ ಒಂದೇ.
ಕಾಂಗ್ರೆಸ್ ನಲ್ಲಿ ಏನಾದ್ರೂ ಅಭಿಪ್ರಾಯ ಹಂಚಿಕೊಂಡ್ರೆ ಗಪ್ ಚುಪ್ ಅಂತಾ ಹೇಳಲು ಸಂಜೆ ಸುರ್ಜೆವಾಲಾ ಬರ್ತಾರೆ. ಆತ್ಮೀಯ ಸ್ನೇಹಿತ ಮಾಧುಸ್ವಾಮಿ ಅವರು ಭಾರತೀಯ ಜನತಾ ಪಕ್ಷದಲ್ಲಿ ಉಳೀಬೇಕು. ಅವರೇನು ಕಾಂಗ್ರೆಸ್ ಗೆ ಹೋಗ್ತೀನಿ ಅಂತಾ ಹೇಳಿಲ್ಲ , ಮಾಧ್ಯಮದ ಊಹಾಪೋಹ ಬಹುತೇಕ ಅವರು ಕಾಂಗ್ರೆಸ್ ಗೆ ಹೋಗಲ್ಲ ಅನ್ನೋದು ನನ್ನ ಭಾವನೆ ಎಂದರು.