ಧಾರವಾಡ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸಂತೋಷ ಲಾಡ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಹಲವರು ಬಲಿ: ಮಡಿದವರ ಆತ್ಮಕ್ಕೆ ಶಾಂತಿ ಕೋರಿದ ಸಿದ್ದರಾಮಯ್ಯ!
ಈ ಸಂಬಂಧ ಮಾತನಾಡಿದ ಅವರು, ಜಮ್ಮು-ಕಾಶ್ಮೀರದಲ್ಲಿ 2000ಕ್ಕಿಂತ ಹೆಚ್ಚು ಇಂತಹ ಘಟನೆಗಳು ಆಗಿವೆ ಕಳೆದ ಹತ್ತು ವರ್ಷಗಳಲ್ಲಿ 800ಕ್ಕೂ ಹೆಚ್ಚು ಸಣ್ಣ ಸಣ್ಣ ಬಾಂಬ್ ಸ್ಪೋಟ್ ಆಗಿವೆ ಎಂದರು. ಕಾಶ್ಮೀರದಲ್ಲಿ ಉಗ್ರರ ದಾಳಿ ವಿಚಾರವಾಗಿ ಧಾರವಾಡದಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರತಿಕ್ರಿಯೆ ನೀಡಿದ್ದು, ಇದರ ಬಗ್ಗೆ ವ್ಯಾಪಕವಾಗಿ ಚರ್ಚೆ ಆಗಿಲ್ಲ ಇವತ್ತು ಈ ವಿಷಯದಲ್ಲಿ ರಾಜಕೀಯ ಟೀಕೆ ಸರಿಯಲ್ಲ.ಈ ವಿಷಯದಲ್ಲಿ ನಾವು ರಾಜಕೀಯ ಮಾತನಾಡುವುದಿಲ್ಲ ಈಗ ರಾಜಕೀಯ. ಮಾತನಾಡುವುದು ಸರಿಯಲ್ಲ.
ಇನ್ನೂ ಕೂಡ ಏನು ಆಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲ
ಶಿವಮೊಗ್ಗದವರ ಮಾಹಿತಿ ಬಿಟ್ರೇ ಬೇರೆ ಮಾಹಿತಿ ಬಂದಿಲ್ಲಪುಲ್ವಾಮ್ ಬಳಿಕ ಜನ ಎಲ್ಲ ಮರೆತು ಬಿಟ್ಟಿದ್ರುು. ಈಗ ಅದನ್ನು ಮಾತನಾಡಿದರೆ ರಾಜಕೀಯ ಆಗುತ್ತದೆ ಆದರೆ ಸಂದರ್ಭ ಬಂದಾಗ ಮಾತನಾಡುತ್ತೇವೆ
ಪುಲ್ವಾಮ್ ದಾಳಿ ಆಗಿತ್ತು. ಅದರಲ್ಲಿ ಎಷ್ಟು ಜನರನ್ನು ಹಿಡಿದಿದ್ದಾರೆ?300ಕೆಜಿ RDX ಬಂದಿತ್ತು. ಅದು ಎಲ್ಲಿಂದ ಬಂತು ಎಂಬ ಮಾಹಿತಿ ಸಿಕ್ಕಿಲ್ಲ ಅಲ್ಲಿನ ರಾಜ್ಯಪಾಲರು ಸಂಪೂರ್ಣ ಮಾಹಿತಿ ಕೊಟ್ಟಿದ್ದರು
ಆದರೂ ಆ ಬಗ್ಗೆ ಚರ್ಚೆ ಆಗಿಲ್ಲ.
ಈಗ ಈ ರಾಜಕೀಯ ಮಾತನಾಡುವುದಿಲ್ಲ ಅಲ್ಲಿ ನಡೆದಿರುವ ಕಾರ್ಯಾಚರಣೆ ಸುರಕ್ಷಿತವಾಗಿ ಆಗಲಿ. ಯಾವುದೇ ರಾಜ್ಯದ ಜನ ಸಿಕ್ಕಿದ್ರೆ, ಸುರಕ್ಷಿತವಾಗಿ ವಾಪಸ್ ಬರಲಿ. ಭಾರತೀಯ ಸೇನೆ ಉಗ್ರರ ದಾಳಿ ವಿರುದ್ಧದ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಲಿ ಎಂದರು.