ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತದ ಹಿಟ್ ಆಂಡ್ ರನ್ ಪ್ರಕರಣದ ಆರೋಪಿಯನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ಸತತ ಮೂರು ತಿಂಗಳ ತನಿಖೆ ಬಳಿಕ ಪೊಲೀಸರು ಪ್ರಕರಣ ಭೇದಿಸಿದ್ದು, ಆರೋಪಿಯನ್ನು ಬಂಧಿಸಿದ್ದರು. ಇದಾದ ಕೆಲವೇ ಹೊತ್ತಲ್ಲಿ ಕಾರು ಅಪಘಾತಕ್ಕೆ ಕಾರಣವಾಗಿದ್ದ ಚಾಲಕನ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ಪೊಲೀಸರು ತನಿಖೆ ನಡೆಸಿದ್ದು, ಅಪಘಾತಪಡಿಸಿದ ಮಹಾರಾಷ್ಟ್ರ ಪಾಸ್ಸಿಂಗ್ ಲಾರಿ ಜಪ್ತಿ ಮಾಡಲಾಗಿದೆ. ಕಳೆದ ಜನವರಿ 14 ಸಂಕ್ರಾಂತಿ ಹಬ್ಬದ ದಿನವೇ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಬಳಿಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿತ್ತು. ಬೆಂಗಳೂರಿನಿಂದ ಬೆಳಗಾವಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಹೋದರ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ, ಗನ್ ಮ್ಯಾನ್, ಚಾಲಕ ಸೇರಿ ನಾಲ್ವರು ಇದ್ದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಕೇಸ್: ಚಾಲಕ ಕೊನೆಗೂ ಅರೆಸ್ಟ್!
ಕಾರು ಅಪಘಾತ ಬಗ್ಗೆ ಕಿತ್ತೂರು ಪೊಲೀಸ್ ಠಾಣೆ ಸಚಿವೆ ಕಾರು ಚಾಲಕ ಹಿಟ್ ಆಂಡ್ ರನ್ ಕೇಸ್ ದಾಖಲಿಸಿದ್ದರು. ಸರ್ಕಾರಿ ಕಾರು ಚಾಲಕ ಶಿವಪ್ರಸಾದ ದೂರು ನೀಡಿದ್ದನು. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಎಸ್ಪಿ ಡಾ.ಭೀಮಾಶಂಕರ ಗುಳೇದ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಚಾಲಕ ಕೊಟ್ಟ ದೂರಿನ್ವಯ ಹಿರೇಬಾಗೇವಾಡಿ ಟೋಲ್ ಮತ್ತು ಅಂಬಡಗಟ್ಟಿ ಬಳಿಯ ಹರಿಯಾಣ ದಾಬಾದಲ್ಲಿನ ಸಿಸಿಟಿವಿ ಆರೋಪಿ ಬಗ್ಗೆ ಸುಳಿವು ನೀಡಿತ್ತು. ಸಿಸಿಟಿವಿಯಲ್ಲಿ ಸೆರೆ ಸಿಕ್ಕ MH 12 TV 9740 ಲಾರಿ ನಂಬರ್, ಮೊಬೈಲ್ ಕರೆ ಆಧರಿಸಿ ಆರೋಪಿ ಪತ್ತೆ ಹಚ್ಚಲಾಗಿತ್ತು. ಆರೋಪಿ ಅರೆಸ್ಟ್ಗೂ ಮುನ್ನ ಎಫ್.ಎಸ್.ಎಲ್ ತಜ್ಞರು ಪರೀಕ್ಷೆ ಮಾಡಿದ ಬಳಿಕ ಸಾಕ್ಷಿ ಸಂಗ್ರಹಿಸಿ ಕ್ರಮವಹಿಸಿದ್ದರು. ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯ ಮಧುಕರ ಸೋಮವಂಶಿ 68 ಎಂಬಾತ ಬಂಧಿಸಲಾಗಿತ್ತು.