ಶ್ರೀರಂಗಪಟ್ಟಣ:– ಅದು ಆ ಭಾಗದ ಬಡವರ ಪಾಲಿನ ಸಂಜೀವಿನಿ. ಹೆಚ್ಚಾಗಿ ಬಡ ರೋಗಿಗಳು ಚಿಕಿತ್ಸೆಗೆಂದು ಬರುತ್ತಾರೆ. ಆದರೆ ಈವಾಗ ರೋಗಿಗಳಿಗೆ ಹಾಗೂ ರೋಗಿಗಳ ಸಂಬಂಧಿಕರಿಗೆ ಹೊಸದೊಂದು ಟೆನ್ಶನ್ ಶುರುವಾಗಿದೆ. ಮೊಬೈಲ್ ಕಳ್ಳರ ಹಾವಳಿಯಿಂದ ಬೆಚ್ಚಿಬಿಳ್ಳುವಂತಾಗಿದೆ. ರಾತ್ರೋರಾತ್ರಿ ಆಸ್ಪತ್ರೆಗೆ ಕಳ್ಳರು ನುಗ್ಗಿ ಮೊಬೈಲ್, ಹಣ ದೋಚುತ್ತಿದ್ದಾರೆ ಅಂತ ಗೋಳಾಡುತ್ತಿದ್ದಾರೆ. ಇದು ಶ್ರೀರಂಗಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳ ಗೋಳಾಟ.
ಅಂಗಡಿ-ಹೋಟೇಲ್ ಗೆ ಕನ್ನ ಹಾಕಿದ ಖದೀಮರು: ಗಲ್ಲದಲ್ಲಿದ್ದ ಹಣ, ಸಿಗರೇಟ್ ದೋಚಿ ಎಸ್ಕೇಪ್!
ಮದ್ಯರಾತ್ರಿ ಆಸ್ಪತ್ರೆಯ ವಾರ್ಡ್ ಗಳಿಗೆ ಬಂದು ಆಗಂತುಕ ಕೈ ಚಳಕ ತೋರಿದ್ದಾನೆ. ಒಳರೋಗಿಗಳು ವಾರ್ಡ್ ನಲ್ಲಿ ಮಲಗಿದ್ದ ವೇಳೆ 5 ಮೊಬೈಲ್ ಗಳನ್ನು ಕಳ್ಳ ಕದ್ದೋಯ್ದಿದ್ದಾನೆ. ಆಸ್ಪತ್ರೆಯಲ್ಲಿನ ಯಾವುದೇ ಭದ್ರತೆ ಇಲ್ಲದೆ ಇರೋದನ್ನ ಎನ್ಕ್ಯಾಶ್ ಮಾಡಿಕೊಂಡು ಕಳ್ಳ ಈ ಕೃತ್ಯ ಎಸಗಿದ್ದಾನೆ.
ಕೆಟ್ಟು ನಿಂತ ಸಿಸಿಟಿವಿ, ಹಾಗು ಭದ್ರತಾ ಸಿಬ್ಬಂದಿ ಇಲ್ಲದೆ ಇರೋದನ್ನ ತಿಳಿದು ಕಳ್ಳತನ ಈ ಕೆಲಸ ಮಾಡಿದ್ದಾನೆ. ಘಟನೆಯಿಂದ ಆಸ್ಪತ್ರೆಯ ರೋಗಿಗಳಲ್ಲಿ ಆತಂಕ ಹೆಚ್ಚಾಗಿದ್ದು, ಭದ್ರತೆ ಇಲ್ಲದ ಆಸ್ಪತ್ರೆಯ ಬಗ್ಗೆ ಆಸಮಧಾನ ಹೊರ ಹಾಕಿದ್ದಾರೆ. ಕೂಡಲೇ ಸ್ಥಳಕ್ಕೆ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ರೋಗಿಗಳಿಂದ ಮಾಹಿತಿ ಸಂಗ್ರಹ ಮಾಡಿದ್ದಾರೆ. ಕೆಲಸ ಮಾಡ್ತಿದ್ದ ಒಂದೇ ಒಂದು ಸಿಸಿ ಕ್ಯಾಮರದ DVRರನ್ನು ಪೊಲೀಸರು ತನಿಖೆಗೆ ಬಿಚ್ಚೋಯ್ದಿದ್ದಾರೆ.
ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.