ಚಿಕ್ಕೋಡಿ: ಹುಕ್ಕೇರಿ ತಾಲೂಕಿನ ಇಂಗಳಿ ಗ್ರಾಮದಲ್ಲಿಕಸಾಯಿ ಖಾನೆಗೆ ಹೋಗೊವ ಗೋವುಗಳ ವಾಹನ ಬೆನ್ನಟ್ಟಿದ ಶ್ರೀರಾಮಸೇನೆ ಕಾರ್ಯಕರ್ತರನ್ನು ತೆಂಗಿನ ಮರಕ್ಕೆ ಕಟ್ಟೀಹಾಕಿ ಕ್ರೂರವಾಗಿ ಹಲ್ಲೆ ಮಾಡಿದ ಘಟನೆ ನಡೆದಿದೆ.
ಮಾಧುಸ್ವಾಮಿ ಕಾಂಗ್ರೆಸ್ ಸೇರುವ ವಿಚಾರ ಮಾಧ್ಯಮದ ಊಹಾಪೋಹ: ಸಿ ಸಿ ಪಾಟೀಲ್!
ತಾಲೂಕಿನ ಇಂಗಳಿ ಗ್ರಾಮದ ಹೊರವಲಯದಲ್ಲಿ ಅಕ್ರಮವಾಗಿ ಗೋವುಗಳನ್ನ ಸಾಗಿಸುವ ವಾಹನ ಹಿಡಿದು ಶ್ರೀರಾಮ ಸೇನೆ ಯುವಕರನ್ನ ಬಿಗಿಯಾಗಿ ಹಗ್ಗದಿಂದ ಕಟ್ಟೀಹಾಕಿ ನೀರು ಕುಡಿಸಿ ಕಟ್ಟಿಗೆ ಹಾಗೂ ರಾಡ್ ನಿಂದ ಮನಸೊ ಇಚ್ಛೆ ಹಲ್ಲೆ ಮಾಡಿದ್ದಾರೆ.
ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ತವರಿನಲ್ಲೆ ಹಿಂದೂ ಕಾರ್ಯಕರಿಗೆ ಅಮಾನವೀಯವಾಗಿ ಹಲ್ಲೆ ಮಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ.6-7 ಜನರಿಗೆ ಹಲ್ಲೆ ಮಾಡಿದ ವಿಡಿಯೋ ಸಧ್ಯ ವೈರಲ್ಲಾಗಿದ್ದು. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಮೋದ್ ಮುತಾಲಿಕ್ ಹೇಳಿದ್ದೇನು?
ರಾಜ್ಯದಲ್ಲಿ ಗೋಹತ್ತ್ಯೆ ನಿಷೆದ ಕಾಯ್ದೆ ಜಾರಿ ಇದ್ದಾಗಲೂ ಕೂಡಾ ಬೆಳಗಾವಿ ಜಿಲ್ಲೆ ಹುಕ್ಕೆರಿ ತಾಲೂಕಿನಲ್ಲಿ ಆಕ್ರಮವಾಗಿ ಕಸಾಯಿಖಾನೆಗೆ ಆಕಳನ್ನ ಸಾಗಿಸುವಾಗ ನಮ್ಮ ಕಾರ್ಯಕರ್ತರು ಅದನ್ನ ತಡೆಯಲು ಹೊದಾಗ ಆಗ ಇಂಗಳಿ ಗ್ರಾಮದ ಮತಾಂದ ಮುಸ್ಲಿಂರು ವ್ಯವಸ್ಥಿಥವಾಗಿ ಪಿತೂರಿಯಿಂದ ನಮ್ಮ ಕಾರ್ಯಕರ್ತರನ್ನ ಕಟ್ಟಿಹಾಕಿ ಹೋಡೆದು ಕೊಲೇ ಮಾಡಲು ಯತ್ನಿಸಿದ್ದಾರೆ.ಇದಕ್ಕೆಲ್ಲ ನೇರ ಕುಮ್ಮಕ್ಕು ಕಾಂಗ್ರೇಸ ಸರ್ಕಾರ ಕಾರಣ ಎಂದು ಶ್ರೀ ರಾಮಸೇನಾ ಅದ್ಯಕ್ಷ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತ ಪಡಿಸಿದರು .
ಇದು ನೈತಿಕ ಪೊಲಿಸಗಿರಿ ಅಲ್ಲವೆ. ಇದು ಅಲ್ಲಿಯ ಪೊಲಿಸ ಅದಿಕಾರಿಗಳಿಗೆ ಗೊತ್ತಾಗಿಲ್ವ ಮಂತ್ರಿಗಳು ಹೆಳುತ್ತಾರೆ ಇಂತಹ ಸಂದರ್ಭದಲ್ಲಿ ಸೂಮೋಟೊ ಕೆಸ ದಾಖಲಿಸಲು ಹೆಳಿದರು ಹುಕ್ಕೇರಿ SP ಅವರು ಸುಮ್ಮನಿರೋದೆಕೆ . ಇ ಮತಾಂದರ ಬಂದನ ಮಾಡದಿದ್ದರೆ ಮುಂದಿನ ಪರಿಣಾಮ ಎದುರಿಸಬೆಕಾಗುತ್ತದೆ ಎಂದು ಪ್ರಮೋದ ಮುತಾಲಿಕ್ ಎಚ್ಚರಿಕೆ ನೀಡಿದರು