ಬೆಂಗಳೂರು:- RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಸಂಭವಿಸಿ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ DCM ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. ಬೌರಿಂಗ್ ನಲ್ಲಿ ಆರು ಜನ, ವೈದೇಹಿನಲ್ಲಿ ನಾಲ್ಕು ಜನ ಮೃತ ಪಟ್ಟಿದ್ದಾರೆ.ಈ ದುರಂತ ಆಗಬಾರದಿತ್ತು. ಮುನ್ನಚ್ಚರಿಕಾ ಕ್ರಮ ತೆಗೆದುಕೊಂಡಿದ್ವಿ. ಆದ್ರೆ ದುರಂತ ಆಗಿದೆ..
ಈಗಾಗಲೇ ಕಾರ್ಯಕ್ರಮ ಬೇಗ ಮುಗಿಸೋದಕ್ಕೆ ಸೂಚನೆ ನೀಡಿದ್ದೇವೆ. ೧೫-೨೦ ನಿಮಿಷದಲ್ಲಿ ಇವೆಂಟ್ ಮುಗಿಯೋಕೆ ಹೇಳಿದ್ದೀವಿ..ಪೊಲೀಸರು ಅಲರ್ಟ್ ಆಗಿದ್ದಾರೆ.ಸಿಎಂ ಅವರು ಸುದ್ದಿಗೋಷ್ಟಿ ಕರೆದಿದ್ದಾರೆ.ಇದು ಆಗಬಾರದಿತ್ತು, ದುರಂತ ನಡೆದು ಹೋಗಿದೆ ಎಂದರು.
ಇನ್ನೂ ವಿಪಕ್ಷ ಆರೋಪ ವಿಚಾರವಾಗಿ ಮಾತನಾಡಿ, ಅವರು ಅದನ್ನೇ ಮಾಡುತ್ತಾರೆ, ಈಗ ಏನೂ ಹೇಳೋದಿಲ್ಲ..ಸಿಟಿ ರವಿ ಏನು ಹೇಳಿದ್ದು ಅಂತ ಗೊತ್ತಿಲ್ವಾ..? ಎಂದು ಹೇಳುವ ಮೂಲಕ ವಿಪಕ್ಷ ಗಳ ಆರೋಪಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ.