ಗದಗ : ಕಪ್ಪಾಗಿದ್ದೀಯಾ ಎಂದು ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರಿಂದ ಬೇಸತ್ತು ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗದಲ್ಲಿ ನಡೆದಿದೆ. ಮದುವೆಯಾದ ಕೇವಲ ನಾಲ್ಕು ತಿಂಗಳಲ್ಲಿ ಗೃಹಿಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಗದಗ ಜಿಲ್ಲೆಯ ಬೆಟಗೇರಿಯ ಶರಣಬಸವೇಶ್ವರ ನಗರದ ನಿವಾಸಿಯಾದ ಅಮರೇಶ್ ಹಾಗೂ ಬಳ್ಳಾರಿ ಮೂಲದ ಪೂಜಾ ನಾಲ್ಕು ತಿಂಗಳ ಹಿಂದೆ ಮದುವೆತಾಗಿದ್ದರು. ಆದರೆ ಮದುವೆಯಾದ ಹೊಸದರಲ್ಲಿ ಅತ್ತೆ ಶಶಿಕಲಾ ಹಾಗೂ ಭಾವ ವೀರನಗೌಡ ನೀನು ಕಪ್ಪಾಗಿದ್ದಿಯಾ, ನಮ್ಮ ಅಮರೇಶನಿಗೆ ಇನ್ನೂ ಚೆನ್ನಾಗಿರುವ ಹುಡುಗಿ ಸಿಗುತ್ತಿದ್ದಳು ಎಂದು ಕಿರುಕುಳ ನೀಡುತ್ತಿದ್ದರಂತೆ . ಇದರಿಂದ ಬೇಸತ್ತ ಪೂಜಾ ನನ್ನ ಸಾವಿಗೆ ಅತ್ತೆ ಹಾಗೂ ಭಾವನೇ ಕಾರಣ ಅಂತ ಡೆತ್ ನೋಟ್ ಬರೆದಿಟ್ಟಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುಉವ ಪೊಲೀಸರು ಅತ್ತೆ ಶಶಿಕಲಾ ಹಾಗೂ ಭಾವ ವೀರನಗೌಡನನ್ನು ಬಂಧಿಸಿದ್ದಾರೆ.