ಹಾವೇರಿ : ಮಾಸೂರಿನ ನರ್ಸ್ ಸ್ವಾತಿ ಹತ್ಯೆ ಖಂಡಿಸಿ ಕ್ರಾಂತಿವೀರ ಯುವ ಬ್ರಿಗೇಡ್ ನಿಂದ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪುತ್ರ ಕೆ.ಈ.ಕಾಂತೇಶ್ ಹೇಳಿದರು.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಪುತ್ರ ಕೆ.ಈ.ಕಾಂತೇಶ್ ಅವರು, ಏ.23 ರಂದು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿ ಹಾವೇರಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ರಾಜ್ಯ ಸರ್ಕಾರವೆ ಲವ್ ಜಿಹಾದ್ ನಲ್ಲಿ ಇನ್ ವಾಲ್ ಆಗಿದೆ. ಕುಟುಂಬಕ್ಕೆ ಮಾಹಿತಿ ಕೊಡದೆ ಅವಸರದಲ್ಲಿ ದಪನ್ ಮಾಡುವ ಆತುರವೇನಿತ್ತು. ರಾಜ್ಯ ಸರಕಾರ ಕೇವಲ ಐದು ಲಕ್ಷ ರೂಪಾಯಿ ಪರಿಹಾರ ಕೊಟ್ಟಿದೆ. ಯಾರಾದರೂ ಮುಸಲ್ಮಾನರು ಮೃತಪಟ್ಟಿದ್ದರೆ ಕೇವಲ ಐದು ಲಕ್ಷ ಕೊಡುತ್ತಿದ್ದರಾ ಎಂದು ಪ್ರಶ್ನಿಸಿದರು.
ಹಿಂದೂ ಯುವತಿ ಹತ್ಯೆ ಪ್ರಕರಣ – ಸ್ವಾತಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ!
ಇನ್ನೂ ಈ ಹತ್ಯೆಯಲ್ಲಿ ಪೊಲೀಸ್ ಇಲಾಖೆಯೆ ಶಾಮೀಲಾಗಿರುವುದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಸಿಎಂ ಸಿದ್ದರಾಮಯ್ಯ ಮೃತಳ ಕುಟುಂಬಕ್ಕೆ ತಕ್ಷಣವೇ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಸ್ವಾತಿ ಹತ್ಯೆ ನೂರಕ್ಕೆ ನೂರರಷ್ಟು ಲವ್ ಜಿಹಾದ್. ಹಿಂದೂ ಯುವಕರನ್ನು ಬಳಸಿಕೊಂಡು ನರ್ಸ್ ಸ್ವಾತಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದರು.