ಬೆಳಗಾವಿ: ಸಿದ್ದರಾಮಯ್ಯ ಬಳಿಕ ಕಾಂಗ್ರೆಸ್ ನಲ್ಲಿ ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗ್ತಾರೆ ಎಂಬ ಮಾತುಗಳು ಕಾರ್ತಕರ್ತರಿಂದಲೇ ಕೇಳಿ ಬರುತ್ತೆ. ಇದೀಗ ಹಿಂದೂ ದೇವರಲ್ಲಿ ಮುಸ್ಲಿಂ ಕಾಂಗ್ರೆಸ್ ನಾಯಕಿ ಸತೀಶ್ ಜಾರಕಿಹೊಳಿ ಸಿಎಂ ಆಗಲೆಂದು ಹರಕೆ ಹೊತ್ತಿದ್ದಾಳೆ.
ಸಚಿವ ಸತೀಶ್ ಜಾರಕಿಹೊಳಿ ಸಿಎಂ ಆಗಲೆಂದು ಹಾರೈಸಿ 101 ಮುತ್ತೈದೆಯರಿಗೆ ಕಾಂಗ್ರೆಸ್ ಕಾರ್ಯಕರ್ತೆ ಆಯಿಶಾ ಸನದಿ ಉಡಿ ತುಂಬಿ ಅಭಿಮಾನ ಮೆರೆದಿದ್ದಾರೆ.
ಬೆಳಗಾವಿಯ ಆರ್ ಟಿಒ ವೃತ್ತದ ಹನುಮಾನ್ ಮಂದಿರದಲ್ಲಿ ಮಹಿಳೆಯರಿಗೆ ಉಡಿ ತುಂಬಿದ ಆಯಿಶಾ ಸವದಿ, ಇದಕ್ಕೂ ಮೊದಲು ಸತೀಶ್ ಜಾರಕಿಹೊಳಿ ಸಿಎಂ ಆಗಲೆಂದು ಹನುಮಾನ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
101 ಮಹಿಳೆಯರಿಗೆ ಸೀರೆ, ಹೂವು, ಕುಂಕುಮ-ಅರಿಶಿನ ನೀಡಿ ಉಡಿ ತುಂಬಿದ ಸತೀಶ್ ಅಭಿಮಾನಿ, ಮುಂದೊಂದು ದಿನ ಸಿಎಂ ಆದರೆ ಹನುಮಾನ್ ಮಂದಿರದಲ್ಲಿ 11 ಸಾವಿರ ತೆಂಗಿನಕಾಯಿ ಒಡೆಯುವುದು, ಮಹಾಪ್ರಸಾದ ವಿತರಿಸುವ ಹರಕೆ ಹೊತ್ತಿದ್ದಾರೆ. ಸಿದ್ದರಾಮಯ್ಯ ಬಳಿಕ ಸತೀಶ್ ಜಾರಕಿಹೊಳಿ ಸಿಎಂ ಆಗಲೆಂದು ಘೋಷಣೆ ಕೂಗಿ ಸಂತಸ ಹಂಚಿಕೊಂಡಿದ್ದಾರೆ.