ಬೆಂಗಳೂರು: ನನ್ನ ಲೆವಲ್ ಅಶೋಕ್ ಮತ್ತು ವಿಜಯೇಂದ್ರ ಮಾತ್ರ. ಇವರ ಬಗ್ಗೆ ಮಾತ್ರ ನಾನು ಮಾತಾಡ್ತೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಗಡೀಪಾರಿಗೆ ಗೃಹ ಇಲಾಖೆ ತಯಾರಿ ವಿಚಾರಕ್ಕೆ ನಗರದಲ್ಲಿ ಮಾತನಾಡಿದ ಅವರು,
ನನ್ನ ಲೆವಲ್ ಅಶೋಕ್ ಮತ್ತು ವಿಜಯೇಂದ್ರ ಮಾತ್ರ. ಇವರ ಬಗ್ಗೆ ಮಾತ್ರ ನಾನು ಮಾತಾಡ್ತೇನೆ, ಇದು ನನ್ನ ಲೆವೆಲ್. ಚಕ್ರವರ್ತಿ ಸೂಲಿಬೆಲೆ ನನ್ ಲೆವೆಲ್ ಅಲ್ಲ. ಚಕ್ರವರ್ತಿ ಬಗ್ಗೆ ನಮ್ಮ ಕಾರ್ಯಕರ್ತರು ಮಾತಾಡ್ತಾರೆ. ನಾನು ಮಾತಾಡಲ್ಲ ಅವ್ರು ನನ್ನ ಲೆವೆಲ್ ನಲ್ಲಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ಕಂಕುಳಿನ ಕಪ್ಪು ಕಲೆ ಬೆಳ್ಳಗಾಗಬೇಕಾ!? ಹಾಗಿದ್ರೆ ಶಾಂಪೂಗೆ ಈ ಪದಾರ್ಥ ಮಿಕ್ಸ್ ಮಾಡಿ ಹಚ್ಚಿ!
ಇದೇ ವೇಳೆ ʻಕೈʼ ನಾಯಕರ ಮೇಲೆ ಇಡಿ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ನವ್ರು ಗೆದ್ದಿರೋದು ಬಿಜೆಪಿಗೆ ಹೊಟ್ಟೆ ಉರಿ ತಂದಿದೆ. ಹೊಟ್ಟೆ ಉರಿಗೆ ಇಡಿ ದಾಳಿ ಮಾಡಿಸಿದ್ದಾರೆ. ಬಳ್ಳಾರಿಯಲ್ಲಿ ಸೋತಿದ್ದಕ್ಕೆ ಬಿಜೆಪಿಯವ್ರು ಇಡಿ ಕರೆಸಿ ದಾಳಿ ಮಾಡಿಸಿದ್ದಾರೆ. ನಾವು ಇದಕ್ಕೆಲ್ಲ ಹೆದರಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.