ಪ್ರಸಿದ್ದ ಪ್ರವಾಸಿ ತಾಣ ನಂದಿಬೆಟ್ಟಕ್ಕೆ ಗ್ರಹಗತಿಯೇ ಸರಿಯಲ್ಲ. ಸಚಿವ ಸಂಪುಟ ಸಭೆ ಹೆಸರಲ್ಲಿ ಮತ್ತೆ, ಮತ್ತೆ ಪ್ರವಾಸಿಗರ ನಿಷೇಧಕ್ಕೆ ಒಳಗಾಗ್ತಿದೆ. ಇದರಿಂದ ಪ್ರಕೃತಿ ಪ್ರಿಯತರು ಇಡೀ ಸಂಪುಟ ಸಭೆಗೆ ಹಿಡಿಶಾಫ ಹಾಕೋ ಜೊತೆ ಜಿಲ್ಲಾಧಿಕಾರಿಯನ್ನೂ ಶಫಿಸೋದಕ್ಕೆ ಮುಂದಾಗಿದಾರೆ. ಎಸ್ ಬೆಂಗಳೂರಿಂದ ಕೂಗಳತೆ ದೂರದಲ್ಲಿರೋ ನಂದಿಗರಿ, ಸ್ಕಂದಗಿರಿಗೆ ಮತ್ತೆ ನಿಷೇಧದ ಹೊರೆ ಬಿದ್ದಿದೆ.
Indian railways: RAC, ವೇಟಿಂಗ್ ಲಿಸ್ಟ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ರೈಲ್ವೆ ಇಲಾಖೆಯಿಂದ ಭಾರೀ ಬದಲಾವಣೆ
ಪ್ರಕೃತಿ ಪ್ರಿಯರ ಮನದಾಸೆಯ ತಾಣಕ್ಕೆ ಮತ್ತೆ ಮತ್ತೆ ಬ್ರೇಕ್ ಬೀಳ್ತಿದೆ. ಸುಂದರ ತಾಣವನ್ನು ಕಣ್ತುಂಬಿಕೊಂಡು ಎಂಜಾಯ್ ಮಾಡ್ಬೇಕು ಅಂತಿರೋ ಮನಸುಗಳಿಗೆ ಬರೆ ಎಳೆಯಲಾಗ್ತಿದೆ. ಸಚಿವ ಸಂಪುಟ ಸಭೆ ಹೆಸರಲ್ಲಿ ಪ್ರವಾಸಿಗರನ್ನು ಹತ್ತಿಕ್ಕುವ ಕೆಲಸ ಮಾಡಲಾಗ್ತಿದೆ ಎನ್ನುವ ದೂರುಗಳು ಕೇಳಿ ಬರ್ತಿದೆ.
ಜುಲೈ ಎರಡರಂದು ನಂದಿಬೆಟ್ಟದಲ್ಲಿ ಸಚಿವ ಸಂಪುಟ ನಡೆಯುವ ಹಿನ್ನೆಲೆ ಈಗಾಗಲೆ ಸ್ಕಂದಗಿರಿ ಮತ್ತು ನಂದಿಗಿರಿಗೆ ಪ್ರವಾಸಿಗರ ನಿಷೇಧದ ಆದೇಶ ಹೊರಬಿದ್ದಿದೆ. ನಂದಿಬೆಟ್ಟಕ್ಕೆ ಒಂದೇ ರಸ್ತೆ ಇರುವುದರಿಂದ ಟ್ರಾಫಿಕ್ ಸಮಸ್ಯೆ ಎದುರಾಗುತ್ತೆ ಎನ್ನುವ ಕಾರಣ ನೀಡಿ ನಂದಿಬೆಟ್ಟಕ್ಕೆ ಜನರ ಪ್ರವೇಶ ನಿಷೇದಿಸಿಲಾಗಿದೆ. ಇನ್ನು ಸ್ಕಂದಗಿರಿಗೆ ಜನರು ಹೆಚ್ಚಾಗಿ ಬರುವುದರಿಂದ ಸಂಪುಟ ಸಭೆಗೆ ಆಗಮಿಸುವ ಗಣ್ಯರಿಗೆ ತೊಂದರೆ ಎನ್ನುವ ಕಾರಣ ನೀಡಿ ಸ್ಕಂದಗಿರಿ ಪ್ರವೇಶ ನಿಷೇಧಿಸಲಾಗಿದೆ.
ಬೆಂಗಳೂರಿಂದ ಕೂಗಳತೆ ದೂರದಲ್ಲಿರೋ ಚಿಕ್ಕಬಳ್ಳಾಪುರದಲ್ಲಿ ಕನಿಷ್ಟ ಸುಗಮ ವ್ಯವಸ್ಥೆ ಮಾಡಿಕೊಳ್ಳೋಕೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಾಧ್ಯ ಇಲ್ಲವಾ ಅನ್ನೋ ಪ್ರಶ್ನೆ ಜನರಿಂದ ಬರ್ತಿದೆ. ಸಂಪುಟ ಸಭೆ ನಡೆಯೋಕು ಪ್ರವಾಸಿಗರನ್ನು ತಡೆದು ನಿಲ್ಲಿಸೋಕು ಏನು ಸಂಬಂಧ ಅಂತಿದಾರೆ ಪ್ರವಾಸಿಗರು