ಬೆಂಗಳೂರು:- ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಉಂಟಾದ ಕರೆಂಟ್ ಅವಘಡದಿಂದ ಬಿಲ್ಡಿಂಗ್ ಗೆ ಬೆಂಕಿ ಆವರಿಸಿ ಬಾಲಕನ ಸ್ಥಿತಿ ಗಂಭೀರವಾಗಿರುವ ಘಟನೆ ಕೆ.ಆರ್ಪುರಂ ನ ಅಯ್ಯಪ್ಪ ನಗರದಲ್ಲಿ ಜರುಗಿದೆ.
ಸಾಲ ಮಾಡಿದ್ದು ಗಂಡ.. ಶಿಕ್ಷೆ ಮಾತ್ರ ಹೆಂಡ್ತಿಗೆ: ಆಂಧ್ರದಲ್ಲಿ ಅಮಾನವೀಯ ಕೃತ್ಯ!
ಮನೆ ಮುಂದೆಯೇ ಕೈಗೆಟಕುವ ರೀತಿಯಲ್ಲಿಯೇ ಡೇಂಜರಸ್ ಹೈಟೆನ್ಷನ್ ವೈಯರ್ ಇದ್ದು, ನಿನ್ನೆ ಬಾಲಕನೋರ್ವ ಸಂಜೆ ನಾಲ್ಕು ಘಂಟೆಯ ಸಂದರ್ಭದಲ್ಲಿ ಮೂರನೇ ಮಹಡಿಯಲ್ಲಿದ್ದ. ಮನೆಯಲ್ಲಿದ್ದ ಪೊರಕೆಯೊಂದನ್ನು ಕೆಳಗಡೆ ಎಸೆದಿದ್ದ. ಆ ಪೊರಕೆ ಸೀದಾ ಹೋಗಿ ಹೈಟೆನ್ಷನ್ ವೈಯರ್ ಗೆ ತಗಲಿತ್ತು..
ತಕ್ಷಣ ಇದ್ದಕ್ಕಿದ್ದಂತೆ ಆಗ ಬಾಲಕನಿಗೆ ಕರೆಂಟ್ ಶಾಕ್ ಹೊಡೆದಿದೆ. ಬಾಲಕನಿಗೆ ಅಷ್ಟೇ ಅಲ್ಲದೇ ಇಡೀ ಬಿಲ್ಡಿಂಗ್ ಗೆ ಬೆಂಕಿ ಹೊತ್ತಿದೆ. ಟಿವಿ, ವಾಷಿಂಗ್ ಮೆಷಿನ್ ಗೆಲ್ಲಾ ಕರೆಂಟ್ ಶಾಕ್ ಹೊಡೆದಿದ್ದು ಸಂಪೂರ್ಣ ಭಸ್ಮವಾಗಿದೆ. ಬಾಲಕನ ದೇಹ 90 ರಷ್ಟು ಸುಟ್ಟಿದೆ..
ಸದ್ಯ ಬಾಲಕನಿಗೆ ವಿಕ್ಟೋರಿಯಾ ಬರ್ನಿಂಗ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆ ಮುಂದೆಯೇ ದೊಡ್ಡದಾದ ಹೈಟೆನ್ಷನ್ ವೈಯರ್ ಇರೋದೆ ಇದಕ್ಕೆ ಕಾರಣ ಎಂದು ಸ್ಥಳಿಯರು ಹೇಳಿದ್ದಾರೆ.
ಕೂಡಲೇ ಸ್ಥಳಕ್ಕೆ ಕೆ.ಆರ್ ಪುಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕೆ.ಆರ್ಪುಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.