ಲಕ್ನೋ:- ಉತ್ತರ ಪ್ರದೇಶದ ಕಾನ್ಪುರದಲ್ಲಿ ಪಾರ್ಕಿಂಗ್ ಸ್ಥಳದ ವಿಚಾರಕ್ಕೆ ನಡೆದ ವಾಗ್ವಾದದಲ್ಲಿ ಫ್ಲಾಟ್ ಮಾಲೀಕನೊಬ್ಬ ನೆರೆಮನೆಯ ವ್ಯಕ್ತಿಯ ಮೂಗನ್ನು ಕಚ್ಚಿದ ಘಟನೆ ಜರುಗಿದೆ.
ಅಪಾರ್ಟ್ಮೆಂಟ್ ಸೊಸೈಟಿಯ ಕಾರ್ಯದರ್ಶಿಯಾಗಿರುವ ರೂಪೇಂದ್ರ ಸಿಂಗ್ ಯಾದವ್ ಮೇಲೆ ಕ್ಷಿತಿಜ್ ಮಿಶ್ರಾ ಹಲ್ಲೆ ಮಾಡಿದ್ದಾನೆ. ತನಗೆ ಮೀಸಲಿಟ್ಟಿರುವ ಸ್ಥಳದಲ್ಲಿ ಬೇರೆ ಕಾರು ನಿಲ್ಲಿಸಿದ್ದಕ್ಕೆ ಮಿಶ್ರಾ ಗಲಾಟೆ ಮಾಡಿ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.
ಸಿಸಿಟಿವಿಯಲ್ಲಿ ಮಿಶ್ರಾ, ಯಾದವ್ ಅವರ ಕುತ್ತಿಗೆ ಹಿಡಿದು ಮೂಗು ಕಚ್ಚುವುದು ಸೆರೆಯಾಗಿದೆ. ಅಲ್ಲದೇ ದಾಳಿ ವೇಳೆ, ಯಾದವ್ ಎಡವಿ ಬಿದ್ದಿರುವುದು ಮತ್ತು ಅವರ ಶರ್ಟ್ ರಕ್ತಸಿಕ್ತವಾಗಿರುವುದನ್ನು ದೃಶ್ಯದಲ್ಲಿ ಗಮನಿಸಬಹುದಾಗಿದೆ.
ಘಟನೆಯ ಸ್ವಲ್ಪ ಸಮಯದ ಬಳಿಕ ಯಾದವ್ ಅವರನ್ನು, ಅವರ ಮಕ್ಕಳು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಈ ಸಂಬಂಧ ಬಿಥೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ