ದೊಡ್ಡಬಳ್ಳಾಪುರ: ಯುವತಿ ವಿಚಾರಕ್ಕೆ ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗೊಲ್ಲಹಳ್ಳಿ ಬಳಿ ಜರುಗಿದೆ. ದರ್ಶನ್ (24) ಕೊಲೆಯಾದ ಯುವಕ. ವೇಣುಗೋಪಾಲ್ ಕೊಲೆ ಮಾಡಿ ನಾಪತ್ತೆ ಆಗಿದ್ದಾನೆ. ಪಾರ್ಟಿ ಮಾಡಲು ಕರೆದು ಪಾರ್ಟಿ ಮಾಡಿದ ಬಳಿಕ ಮನಸೋಹಿಚ್ಚೆ ಹಿರಿದು ಭೀಕರವಾಗಿ ಕೊಲೆ ಮಾಡಲಾಗಿದೆ.
ತಡ ರಾತ್ರಿ 1:30 ಕ್ಕೆ ಈ ಘಟನೆ ಜರುಗಿದೆ. ಮೇಲ್ನೋಟಕ್ಕೆ ಇಬ್ಬರು ಒಂದೆ ಹುಡುಗಿಯನ್ನ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಈ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಘಟನೆ ಸಂಬಂಧ ದೊಡ್ಡಬಳ್ಳಾಪುರದಲ್ಲಿ ಎಸ್ಪಿ ಸಿಕೆ ಬಾಬಾ ಮಾತನಾಡಿದ್ದಾರೆ.
ದೊಡ್ಡಬಳ್ಳಾಪುರದ ರೇಲ್ವೇಗೊಲ್ಲಹಳ್ಳಿಯಲ್ಲಿ 26-ವರ್ಷ-ವಯಸ್ಸಿನ ದರ್ಶನ್ ಎಂಬ ಯುವಕನ ಕೊಲೆ ಒಂದು ಹೆಣ್ಣಿಗಾಗಿ ನಡೆದಿದೆ. ದರ್ಶನ್ ಒಬ್ಬ ಯುವತಿಯನ್ನು ಪ್ರೀತಿಸುತ್ತಿದ್ದ, ಆ ಯುವತಿಯ ಮಾಜಿ ಪ್ರಿಯಕರನಿಗೆ ಇದು ಸರಿಕಂಡಿಲ್ಲ.
ನಿನ್ನೆ ರಾತ್ರಿ ಸುಮಾರು 9.30ಕ್ಕೆ ಅವನು ದರ್ಶನ್ನನ್ನು ತನ್ನ ಫಾರ್ಮ್ ಹೌಸ್ಗೆ ಮಾತಾಡುವ ನೆಪದಲ್ಲಿ ಕರೆಸಿದ್ದಾನೆ. ನಂತರ ಇಬ್ಬರ ನಡುವೆ ವಾಗ್ವಾದ ನಡೆದಿದೆ ಮತ್ತು ಮಾತು ವಿಕೋಪಕ್ಕೆ ಹೋಗಿ ಮಾಜಿ ಪ್ರಿಯಕರ ದರ್ಶನ್ನನ್ನು ಚಾಕುವೊಂದರಿಂದ ಇರಿದು ಕೊಂದಿದ್ದಾನೆ ಎಂದು ಹೇಳಿದ್ದಾರೆ.